ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 22-07-2020

ನಿತ್ಯಭವಿಷ್ಯ : 22-07-2020

- Advertisement -

ಮೇಷರಾಶಿ
ತೊಡಕುಗಳು ಕಂಡು ಬಂದಾವು. ಅನಗತ್ಯ ವಿವಾದದಲ್ಲಿ ಸಿಲುಕುವ ಸಾಧ್ಯತೆ ತಂದೀತು. ಆತ್ಮೀಯರ ಸಹಕಾರ ಶುಭ, ಅಶುಭಫ‌ಲಗಳು ಮಿಶ್ರದಾಯಕವಾಗಲಿವೆ. ಖಡಾಖಂಡಿತ ವರ್ತನೆಯಿಂದ ಕಾರ್ಯಸಿದ್ಧಿ ಇದೆ. ವಾಹನ ಯೋಗ, ವಸ್ತ್ರಾಭರಣ ಪ್ರಾಪ್ತಿ, ಐಶ್ವರ್ಯ ವೃದ್ಧಿ, ಸರ್ಕಾರಿ ಕಾರ್ಯಗಳಲ್ಲಿ ಪ್ರಗತಿ, ಪರಸ್ಥಳ ವಾಸ.

ವೃಷಭರಾಶಿ
ಆರ್ಥಿಕ ವಿಚಾರದಲ್ಲಿ ಕೊಂಚ ಬಿಗಿ ಹಿಡಿಯಿರಿ. ವ್ಯಾಪಾರ, ವ್ಯವಹಾರಗಳಲ್ಲಿ ಋಣಬಾಧೆ ಹಂತ ಹಂತವಾಗಿ ಕಡಿಮೆಯಾಗಲಿದೆ. ಗೃಹದಲ್ಲಿ ಶುಭಮಂಗಲ ಕಾರ್ಯಗಳ ಚಟುವಟಿಕೆಗಳು ಉತ್ಸಾಹ ತರಲಿವೆ. ಅಧಿಕ ತಿರುಗಾಟ, ಆದಾಯಕ್ಕಿಂತ ಖರ್ಚು ಹೆಚ್ಚು, ಶತ್ರುಗಳ ಬಾಧೆ, ಕೋರ್ಟ್ ಕೇಸ್‍ಗಳಲ್ಲಿ ವಿಘ್ನ.

ಮಿಥುನರಾಶಿ
ಎಲ್ಲರ ಮನಸ್ಸು ಗೆಲ್ಲುವಿರಿ, ಹೊಗಳಿಗೆ ಮಾತಿಗೆ ಕರಗುವಿರಿ, ಪರಿಶ್ರಮಕ್ಕೆ ತಕ್ಕ ಫಲ, ಅಳುಕು ಪ್ರವೃತ್ತಿಯನ್ನು ಬದಿಗೊತ್ತಿ ಬಂದ ಅವಕಾಶಗಳಿಗೆ ತಕ್ಷಣ ಸ್ಪಂದಿಸಿರಿ. ಗೃಹ ಸವೀಕರಣ ಕಾರ್ಯನಿಮಿತ್ತ ಖರ್ಚು ಬಂದೀತು. ವಾಹನ ಸಂಚಾರ ಹಾಗೂ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದೆ ಮುನ್ನಡೆಯಿರಿ. ಈ ದಿನ ಶುಭ ಫಲ ಯೋಗ.

ಕಟಕರಾಶಿ
ದೇವತಾ ಕಾರ್ಯಗಳಲ್ಲಿ ಭಾಗಿ, ಭೂ ಲಾಭ, ಉದ್ಯೋಗದಲ್ಲಿ ಬಡ್ತಿ,ಕೌಟುಂಬಿಕವಾಗಿ ಹೆಚ್ಚಿನ ಸಮಸ್ಯೆಗಳು ಒಂದೊಂದಾಗಿ ಪರಿಹಾರಗೊಳ್ಳಲಿವೆ. ಕೆಲವೊಮ್ಮೆ ಭಾವನಾತ್ಮಕ ಸಂಬಂಧದ ವಿಚಾರಗಳಿಗೆ ಬಲಿಬೀಳದಿರಿ. ನಿರ್ಧಾರಗಳಲ್ಲಿ ಅಚಲತೆ ಮುಖ್ಯವಾಗಿರಲಿ. ದಿನಾಂತ್ಯ ಶುಭವಿದೆ. ಆತ್ಮೀಯರೊಂದಿಗೆ ಸಂತಸ, ಕೆಲಸ ಕಾರ್ಯಗಳಲ್ಲಿ ಮುನ್ನಡೆ.

ಸಿಂಹರಾಶಿ
ಕುಟುಂಬದಲ್ಲಿ ನೆಮ್ಮದಿ, ಮಾಡುವ ಕೆಲಸದಲ್ಲಿ ಅಡೆತಡೆ, ವ್ಯಾಪಾರ, ವ್ಯವಹಾರಗಳಲ್ಲಿ ಋಣಬಾಧೆ ಹಂತ ಹಂತವಾಗಿ ಕಡಿಮೆಯಾಗಲಿದೆ. ಗೃಹದಲ್ಲಿ ಉತ್ತಮ ಚಟುವಟಿಕೆಗಳು ಉತ್ಸಾಹ ತಂದಾವು. ಶೀತಕ್ಕೆ ಸಂಬಂಧ ಪಟ್ಟ ವಿಚಾರದಲ್ಲಿ ಅನಾರೋಗ್ಯವಿದ್ದೀತು. ಜಾಗ್ರತೆ ಮಾಡಿರಿ. ಉದ್ಯೋಗದಲ್ಲಿ ಬಡ್ತಿ, ಆಹಾರ ಸೇವನೆಯಲ್ಲಿ ಎಚ್ಚರ, ಆರೋಗ್ಯದಲ್ಲಿ ಏರುಪೇರು.

ನ್ಯಾರಾಶಿ
ಅಮೂಲ್ಯ ವಸ್ತುಗಳ ಖರೀದಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಧಿಕಾರಿಗಳಿಂದ ತೊಂದರೆ, ಕುಟುಂಬದ ಇಷ್ಟ ಜನರ ಭೇಟಿಯ ಅವಕಾಶ ಒದಗಿ ಬರಲಿದೆ. ಹೂಡಿಕೆಯಲ್ಲಿ ಚೇತರಿಕೆ ತೋರಿ ಬಂದರೂ ದುಂದು ವೆಚ್ಚಕ್ಕೆ ಕಾರಣರಾಗದಿರಿ. ವಾಹನ ಸಂಚಾರ ಹಾಗೂ ದೇಹಾರೋಗ್ಯದ ಬಗ್ಗೆ ನಿರ್ಲಕ್ಷ್ಯಬೇಡ. ಅಪಘಾತವಾಗುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

ತುಲಾರಾಶಿ
ಹೊಗಳಿಗೆ ಮಾತಿಗೆ ಬಗ್ಗುವಿರಿ, ಕಾರ್ಯ ಕ್ಷೇತ್ರದಲ್ಲಿ ಉತ್ತಮ, ರಾಜಕೀಯ ವರ್ಗದವರಿಗೆ ಬದಲಾವಣೆಯ ಅವಕಾಶ ತೋರಿ ಬರುವುದು. ಕಾರ್ಯರಂಗದಲ್ಲಿ ವಿರೋಧಿಗಳಿಂದ ಆಮಿಷ ತೋರಿ ಬರಲಿದೆ. ಕೆಲಸದ ಒತ್ತಡದಿಂದ ದೇಹಾಯಾಸಕ್ಕೆ ಕಾರಣವಾದೀತು. ಗಮನ ಹರಿಸಿರಿ. ಬಾಂಧವ್ಯ ವೃದ್ಧಿ, ಬಾಕಿ ಹಣ ಕೈ ಸೇರುವುದು.

ವೃಶ್ಚಿಕರಾಶಿ
ವ್ಯವಹಾರದಲ್ಲಿ ನಂಬಿಕೆ ದ್ರೋಹ, ದಾನ ಧರ್ಮದಲ್ಲಿ ಆಸಕ್ತಿ, ಕಾರ್ಯರಂಗದಲ್ಲಿ ತೊಡಕುಗಳು ನಿವಾರಣೆಯಾಗಲಿವೆ. ಆತ್ಮೀಯರ ಸಹಕಾರ ಇರುತ್ತದೆ. ಆತ್ಮ ವಿಶ್ವಾಸದಿಂದ ಮುಂದುವರಿದಲ್ಲಿ ಕಾರ್ಯ ಸಾಧನೆಯಾಗಲಿದೆ. ವಿಶ್ವಾಸದಿಂದ ಕಾರ್ಯವಂಚನೆ ಒದಗಿ ಬಂದೀತು. ಆಲಸ್ಯ ಮನೋಭಾವ, ನೀಚ ಜನರಿಂದ ದೂರವಿರಿ.

ಧನಸ್ಸುರಾಶಿ
ದೇಹಾರೋಗ್ಯದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಕೋರ್ಟುಕಚೇರಿ ವ್ಯವಹಾರದಲ್ಲಿ ಮುನ್ನಡೆ ಸಾಧಿಸಲಿದ್ದೀರಿ. ಸ್ತ್ರೀಮುಖೇನ ಶುಭಸಮಾಚಾರವಿದೆ. ವೃತ್ತಿರಂಗದಲ್ಲಿ ಹಿನ್ನಡೆ ಕಂಡಕಾರ್ಯಗಳು ಪುನಃ ಆರಂಭಗೊಳ್ಳಲಿವೆ. ಅಲ್ಪ ಆದಾಯ, ಅಧಿಕವಾದ ಖರ್ಚು, ಮಾನಸಿಕ ಚಿಂತೆ, ಆಕಸ್ಮಿಕ ಧನ ಲಾಭ, ಪರಸ್ಥಳ ವಾಸ.

ಮಕರರಾಶಿ
ದಾಂಪತ್ಯದಲ್ಲಿ ವಿರಸ, ಸ್ತ್ರೀ ವಿಚಾರದಲ್ಲಿ ಅಪವಾದ, ಒಳ್ಳೆಯ ಅವಕಾಶಗಳ ಶುಭಸೂಚನೆ ಇರುತ್ತವೆ. ಅದರೆ ಅದರೊಂದಿಗೆ ಸಮಸ್ಯೆಗಳು ಕೂಡಾ ಕಾಡಲಿವೆ. ಸಮಯದ ಅಭಾವದಿಂದ ಸಂಚಾರ ಕಾರ್ಯವನ್ನು ಕೈಬಿಡ  ಬೇಕಾಗುತ್ತದೆ. ಸಾಂಸಾರಿಕವಾಗಿ ತುಸು ನೆಮ್ಮದಿಯ ದಿನಗಳು.ಹಿರಿಯರ ಮಾತಿಗೆ ಗೌರವ ಕೊಡಿ, ಈ ದಿನ ಮಿಶ್ರ ಫಲ ಯೋಗ.

ಕುಂಭರಾಶಿ
ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಮಕ್ಕಳ ಭಾವನೆಗಳಿಗೆ ಮನ್ನಣೆ, ಶುಭ ಸಮಾಚಾರವು ಸಂತಸ ತರಲಿದೆ. ಹಣಕಾಸಿನ ವ್ಯವಹಾರದಲ್ಲಿ ತುಸು ಧೈರ್ಯಗೆಡುವ ಪ್ರಸಂಗ ಎದುರಾಗಲಿದೆ. ಭವಿಷ್ಯದ ಚಿಂತನೆಗಳ ರೂಪರೇಷೆಗೆ ಪೂರಕವಾದ ವಾತಾವರಣ ಸಂತಸ ತಂದೀತು. ಸ್ಥಿರಾಸ್ತಿ ಖರೀದಿಗೆ ಚಿಂತನೆ, ಆರೋಗ್ಯದಲ್ಲಿ ವ್ಯತ್ಯಾಸ.

ಮೀನರಾಶಿ
ಸಮಾಧಾನದಿಂದ ವರ್ತಿಸಿ, ಶ್ರಮಕ್ಕೆ ತಕ್ಕ ಫಲ, ವೃತ್ತಿರಂಗದಲ್ಲಿ ನೆಮ್ಮದಿ ತೋರಿ ಬಂದರೂ ಅಧಿಕಾರಿ ವರ್ಗದವರಿಂದ ಕಿರುಕುಳ ತಪ್ಪದು. ಆತ್ಮೀಯರ ಸಹಕಾರದಿಂದ ಮಾನಹಾನಿಕರ ಪ್ರಸಂಗವೊಂದರಿಂದ ಪಾರಾಗಲಿದ್ದೀರಿ. ಕೋರ್ಟು ಕಚೇರಿ ಕಾರ್ಯದಲ್ಲಿ ಮುನ್ನಡೆ ಇದೆ. ರಾಜಕೀಯ ವ್ಯಕ್ತಿಗಳಿಗೆ ತೊಂದರೆ, ಅಪರಿಚಿತರಿಂದ ಸಂಕಷ್ಟಕ್ಕೆ ಸಿಲುಕುವಿರಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular