ಬುಧವಾರ, ಏಪ್ರಿಲ್ 30, 2025
Homehoroscopeನಿತ್ಯಭವಿಷ್ಯ : 07-04-2021 ಬುಧವಾರ

ನಿತ್ಯಭವಿಷ್ಯ : 07-04-2021 ಬುಧವಾರ

- Advertisement -

ಮೇಷರಾಶಿ
ಧನಸಂಗ್ರಹ ವಿದ್ದರೂ ಅಧಿಕ ಖರ್ಚುವೆಚ್ಚಗಳು ಆತಂಕಕ್ಕೆ ಕಾರಣವಾಗಬಹುದು. ಶುಭಮಂಗಲ ಕಾರ್ಯ ಗಳಿಗಾಗಿ ಸಂಚಾರ, ಸಂಭ್ರಮ, ಓಡಾಟ ಗಳಿರುತ್ತವೆ. ಆರೋಗ್ಯದಲ್ಲಿ ಚೇತರಿಕೆ, ಮಕ್ಕಳ ವಿಚಾರದಲ್ಲಿ ಚಿಂತೆ.

ವೃಷಭರಾಶಿ
ವೃತ್ತಿರಂಗದಲ್ಲಿ ಮುನ್ನಡೆ, ಕಠಿಣ ಪರಿಶ್ರಮ, ಸಾಂಸಾರಿಕವಾಗಿ ಸಮಸ್ಯೆ, ದೂರಸಂಚಾರ ಸಾಧ್ಯತೆ, ಆರೋಗ್ಯದಲ್ಲಿ ಸುಧಾರಣೆ, ಉದಾಸೀನತೆ ಬೇಡ,  ಧನಾಗಮನಕ್ಕೆ ಕೊರತೆಯಿಲ್ಲ, ಹಿರಿಯರ ಆರೋಗ್ಯದ‌ ಬಗ್ಗೆ ಎಚ್ಚರವಿರಲಿ.

ಮಿಥುನರಾಶಿ
ಸಾಂಸಾರಿಕವಾಗಿ ನೆಮ್ಮದಿ, ವ್ಯಾಪಾರ, ವ್ಯವಹಾರಸ್ಥರಿಗೆ ಲಾಭ. ವಿದ್ಯಾರ್ಥಿಗಳಿಗೆ ಯಶಸ್ಸು, ಯೋಗ್ಯ ವಯಸ್ಕರಿಗೆ ವೈವಾಹಿಕ ಭಾಗ್ಯ ಹುಡುಕಿಕೊಂಡು ಬರಲಿದೆ.

ಕರ್ಕಾಟಕರಾಶಿ
ಸ್ವಉದ್ಯೋಗಸ್ಥರಿಗೆ ಅಲ್ಪ ಪರಿಶ್ರಮದಿಂದ ಹೆಚ್ಚಿನ ಗಳಿಕೆ, ವೃತ್ತಿರಂಗದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ, ಇಚ್ಛಾ ಕಾರ್ಯದ ಸಿದ್ದಿ, ವೈವಾಹಿಕ ಮಾತುಕತೆಯಲ್ಲಿ ಯಶಸ್ಸು, ರಾಜಕಾರಣಿಗಳಿಗೆ ಸೂಕ್ತ ಬೆಂಬಲ ದೊರಕಲಿದೆ.

ಸಿಂಹರಾಶಿ
ವಿರೋಧ, ಭಿನ್ನಾಭಿಪ್ರಾಯ ಹಂತ ಹಂತವಾಗಿ ಕಡಿಮೆಯಾಗಲಿದೆ, ರಾಹುಬಲ ಉತ್ತಮವಿದ್ದು, ಏನೋ ಒಂದು ಒಳ್ಳೆಯದು ನಿಮಗಾಗಲಿದೆ. ಆರ್ಥಿಕವಾಗಿ ಖರ್ಚುವೆಚ್ಚಗಳಿದ್ದರೂ ಹಣಕಾಸಿನ ಪರಿಸ್ಥಿತಿ ನಿರಾಳವೆನಿಸಲಿದೆ.

ಕನ್ಯಾರಾಶಿ
ಎಲ್ಲಾ ವಿಚಾರಗಳಲ್ಲಿ ಸಮಚಿತ್ತದಿಂದ ವ್ಯವಹರಿಸಿದರೆ ನಿಮ್ಮ ಹಾದಿ ಸುಗಮವಾಗಿ ಸಾಗುತ್ತದೆ. ಶುಭಕಾರ್ಯಗಳಿಗಾಗಿ ಹಿರಿಯರೊಡನೆ ಸಮಾಲೋಚನೆ, ದುಡುಕದಿರಿ. ಆತ್ಮವಿಶ್ವಾಸದಿಂದ ಕಾರ್ಯರಂಗಕ್ಕೆ ಧುಮುಕಿರಿ. ನಿಶ್ಚಿತ ರೂಪದಲ್ಲಿ ಯಶಸ್ಸು ದೊರೆಯಲಿದೆ.

ತುಲಾರಾಶಿ
ಅವಕಾಶಗಳು ಒದಗಿ ಬರಲಿದೆ, ಸದುಪಯೋಗಿಸಿಕೊಳ್ಳಿ, ಪ್ರಾಮಾಣಿಕತೆಗೆ ತಕ್ಕಫ‌ಲ. ನಿರಾಶ ಮನೋಭಾವದಿಂದ ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ , ನಿರ್ಧಾರಗಳಲ್ಲಿ ಅನಿಶ್ಚಿತತೆ ತೋರಿಬಂದೀತು.

ವೃಶ್ಚಿಕರಾಶಿ
ಆರ್ಥಿಕ ಸ್ಥಿತಿಯಲ್ಲಿ ಏರುಪೇರು,  ದೈವಾನುಗ್ರಹದಿಂದ ಆದಾಯ ವೃದ್ಧಿಯಾಗಲಿದೆ, ಕಾರ್ಯಸಿದ್ಧಿ. ಚಿನ್ನಾಭರಣ ಖರೀದಿ, ಅವಿವಾಹಿತರಿಗೆ ವಿವಾಹ ಭಾಗ್ಯವಿದೆ. ವೃತ್ತಿರಂಗದಲ್ಲಿ ಸಫ‌ಲತೆ, ಸಾಮಾಜಿಕ ಕ್ಷೇತ್ರದಲ್ಲಿ ಜನಾನುರಾಗದ ಅನುಭವವಾಗುತ್ತದೆ.

ಧನುರಾಶಿ
ಜೀವನ ಶೈಲಿ, ವಿಚಾರ ಚಿಂತನೆಯನ್ನು ಬದಲಿಸಿಕೊಳ್ಳಿ,  ದೇವತಾನುಗ್ರಹದಿಂದ  ಮುನ್ನಡೆ. ಆತ್ಮವಿಶ್ವಾಸದಿಂದ ಯಶಸ್ಸು, ಪ್ರಣಯಿಗಳಿಗೆ ಪ್ರೀತಿ, ಪ್ರೇಮದಲ್ಲಿ ಯಶಸ್ಸು, ವಿದ್ಯಾರ್ಥಿಗಳು ಅಭ್ಯಾಸಬಲವನ್ನು ಹೆಚ್ಚಿಸಿಕೊಳ್ಳಿ.

ಮಕರರಾಶಿ
.ಅಧಿಕ ರೀತಿಯ ಖರ್ಚುವೆಚ್ಚಗಳಿಂದ ಆತಂಕ,  ಧನಾಗಮನದಿಂದ ಚೇತರಿಕೆ, ಕೆಲಸಕಾರ್ಯಗಳಲ್ಲಿ ವಿಘ್ನಗಳೇ ತೋರಿಬಂದರೂ ಧೈರ್ಯದಿಂದ ಎದುರಿಸಿ, ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿಬರಲಿದೆ.

ಕುಂಭರಾಶಿ
ಕೆಲಸ‌ ಕಾರ್ಯಗಳಿಗಾಗಿ ಅಲೆದಾಟ, ವೈವಾಹಿಕ ಸಂಬಂಧಗಳಲ್ಲಿ ಅಡೆತಡೆ,‌ ಆರ್ಥಿಕವಾಗಿ ಚೇತರಿಕೆ ಇರುತ್ತದೆ. ಕೋರ್ಟು ಕಚೇರಿಗಳಲ್ಲಿನ ಕೆಲಸಕಾರ್ಯಗಳಲ್ಲಿ ಯಶಸ್ಸು, ಮಕ್ಕಳಿಂದ ನೆಮ್ಮದಿ.

ಮೀನರಾಶಿ
ವೃತ್ತಿರಂಗದಲ್ಲಿ ಉನ್ನತ ಸ್ಥಾನ ಪ್ರಾಪ್ತಿ, ಸಾಹಸ, ಕ್ರೀಡಾ ಮನೋಭಾವಕ್ಕೆ ಮನ್ನಣೆ, ವಿದ್ಯಾರ್ಥಿಗಳಿಗೆ ಹೊಸ ಉತ್ಸಾಹ ವರ್ಧಿಸಲಿದೆ. ಪ್ರಯತ್ನಬಲದಿಂದ ಕಾರ್ಯಸಾಧನೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular