ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ :11-05-2020

ನಿತ್ಯಭವಿಷ್ಯ :11-05-2020

- Advertisement -

ಮೇಷರಾಶಿ
ವ್ಯವಹಾರಗಳಲ್ಲಿ ಅಲ್ಪ ಲಾಭ, ಹಣಕಾಸು ಮೋಸ, ವಂಚಿಸುವವವರ ಜಾಲಕ್ಕೆ ಸಿಲುಕುವಿರಿ, ವೃತ್ತಿರಂಗದಲ್ಲಿ ಅನಿರೀಕ್ಷಿತ ಬೆಳವಣಿಗೆ ಕಂಡುಬರುವುದು. ಸಾಂಸಾರಿಕ ಹಿತಾಸಕ್ತಿ ಬಗ್ಗೆ ಚಿಂತಿತರಾಗುವಿರಿ. ದಿನಾಂತ್ಯಕ್ಕೆ ಆರ್ಥಿಕ ಚೇತರಿಕೆ ಸಮಾಧಾನ ತರಲಿದೆ. ಹೊಸ ಯೋಜನೆಗಾಗಿ ಅವಸರಿಸದಿರಿ. ಸಹಾಯಕರಿಂದ ಕಾರ್ಯ ನಿರ್ವಿಘ್ನ, ಈ ದಿನ ಎಚ್ಚರಿಕೆಯಲ್ಲಿರುವುದು ಉತ್ತಮ.

ವೃಷಭರಾಶಿ
ನೀವಾಡುವ ಮಾತಿನಿಂದ ಅನರ್ಥ, ನಿಮ್ಮ ವ್ಯಕ್ತಿತ್ವವು ಇತರರನ್ನು ಆಕರ್ಷಿಸಲಿದೆ. ಅನಾವಶ್ಯಕವಾಗಿ ವಾಗ್ವಾದಕ್ಕೆ ಕಾರಣರಾಗದಿರಿ. ಹಾಗೆಂದು ನಿಮ್ಮ ಕರ್ತವ್ಯವನ್ನು ಮರೆಯದಿರಿ. ಹಂತ ಹಂತವಾಗಿ ಸಫ‌ಲತೆ ಮುಂದುವರಿಯುತ್ತಾ ಹೋಗಲಿದೆ. ತಂಪು ಪಾನೀಯಗಳಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಹಿತನುಡಿ, ಉದ್ಯೋಗದಲ್ಲಿ ಕಿರಿಕಿರಿ.

ಮಿಥುನರಾಶಿ
ಮೊದಲು ನಿಮ್ಮ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿರಿ. ಮುಖ್ಯವಾಗಿ ಉದಾಸೀನತೆಯಿಂದ ಹೊರಬನ್ನಿರಿ. ಬಂದ ಅವಕಾಶವನ್ನು ಸದುಪಯೋಗಿಸಿ ಕೊಳ್ಳಿರಿ. ಪ್ರತಿಯೊಂದು ಕೆಲಸದಲ್ಲಿ ಸಫ‌ಲತೆ ಬಗ್ಗೆ ನಿಮಗೆ ಅನುಮಾನವಾಗಲಿದೆ. ಮನಸ್ಸಿನಲ್ಲಿ ದುಷ್ಟ ಆಲೋಚನೆ, ಕೆಲಸದಲ್ಲಿ ವಿಘ್ನ, ಅಕಾಲ ಭೋಜನ, ಮಕ್ಕಳಿಂದ ಸಹಾಯ, ಆರೋಗ್ಯದಲ್ಲಿ ವ್ಯತ್ಯಾಸ.

ಕಟಕರಾಶಿ
ವಿದ್ಯಾರ್ಥಿಗಳಲ್ಲಿ ಪ್ರಗತಿ, ಚಿಂತನೆಗಳಿಗೆ ಇತರರಿಂದ ಸಹಕಾರ ಸಿಗದು. ಪ್ರೇಮಿ ಗಳಿಗೆ ಪೂರಕವಾದ ದಿನ. ಹೊಸ ಗೆಳೆಯರು ದೊರಕಬಹುದು. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿರಿ. ಸಲಹೆಗಳಿಗೆ ಸ್ಪಂದಿಸಿರಿ. ನಾನಾ ರೀತಿಯ ತೊಂದರೆ, ಬಂಧುಗಳಲ್ಲಿ ಕಲಹ, ಇಲ್ಲ ಸಲ್ಲದ ಅಪವಾದ, ಆಹಾರ ಸೇವನೆಯಲ್ಲಿ ವ್ಯತ್ಯಾಸ.

ಸಿಂಹರಾಶಿ
ಗ್ರಹಗಳು ನಿಮಗೆ ಪೂರಕವಾಗಲಿವೆ. ಗುಣಾತ್ಮಕ ಬೆಳವಣಿಗೆಯೊಂದು ಜೀವನದಲ್ಲಿ ಸಂಭವಿಸಲಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಹರುಷ ತರಲಿದೆ. ಇತರರ ಸಲಹೆಯನ್ನು ಕುರುಡಾಗಿ ಒಪ್ಪಿಕೊಳ್ಳದಿರಿ. ವಾಹನದಿಂದ ತೊಂದರೆ, ಶರೀರದಲ್ಲಿ ಸ್ವಲ್ಪ ಆತಂಕ, ಹಿರಿಯರಿಂದ ಹಿತವಚನ.

ಕನ್ಯಾರಾಶಿ
ಅಲ್ಪ ಆದಾಯ, ಅಧಿಕವಾದ ಖರ್ಚು, ಮಾತಿನ ಚಕಮಕಿ, ಮನಃಕ್ಲೇಷ, ಮಾತೃವಿನಿಂದ ಸಹಾಯ, ಬದಲಾವಣೆಗೆ ಹೊಂದಿಕೊಳ್ಳಲು ಕಲಿಯ ಬೇಕಾಗುವುದು. ನೀವು ಆಪ್ತೇಷ್ಟರಿಂದ ಅಡಗಿಸಿಕೊಳ್ಳಲು ಬಯಸುವ ವಿಚಾರ ಬಹಿರಂಗವಾಗಬಹುದು. ಸಹನೆ ಕಾಯ್ದುಕೊಳ್ಳಿರಿ. ಕೌಟುಂಬಿಕವಾಗಿ ಅಸಹನೆ ಮೂಡೀತು. ದಿನಸಿ ವ್ಯಾಪಾರಿಗಳಿಗೆ ಲಾಭ.

ತುಲಾರಾಶಿ
ದಾನ ಧರ್ಮದಲ್ಲಿ ಆಸಕ್ತಿ, ವಿಶ್ರಾಂತಿಯ ದಿನಗಳಿವು. ವೃತ್ತಿರಂಗದಲ್ಲಿ ಕೆಲಸ ಹೆಚ್ಚು. ಕಠಿಣ ದುಡಿಮೆಗೆ ಸೂಕ್ತ ಪ್ರತಿಫ‌ಲ ದೊರಕಲಿದೆ. ನೀವು ನಂಬಿದ ವ್ಯಕ್ತಿಯೊಬ್ಬರು ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಮೂಡಿಸಲಿದ್ದಾರೆ. ಆಕಸ್ಮಿಕ ಧನವ್ಯಯ, ಶತ್ರುಗಳ ನಾಶ, ನಂಬಿದ ಜನರಿಂದ ಅಶಾಂತಿ, ಮಾನಸಿಕ ವ್ಯಥೆ.

ವೃಶ್ಚಿಕರಾಶಿ
ಉದ್ಯೋಗದಲ್ಲಿ ಕಿರಿಕಿರಿ, ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿರಿ. ಅನಿರೀಕ್ಷಿತ ಘಟನೆಗಳನ್ನು ಅವಗಣಿಸದಿರಿ ಏಕಾಂಗಿ ಯಾಗಿರು ವವರಿಗೆ ಸಂಗಾತಿ ದೊರಕಬಹುದು. ಸಣ್ಣ ಪ್ರವಾಸಕ್ಕೆ ಹೊರಡುವ ಸಾಧ್ಯತೆ ಇದೆ. ಜಾಗ್ರತೆ ಇರಲಿ. ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಾನಸಿಕ ಚಿಂತೆ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ತಾಳ್ಮೆಯಿಂದ ಇರುವುದು ಉತ್ತಮ.

ಧನಸ್ಸುರಾಶಿ
ಕುಟುಂಬದಲ್ಲಿ ನೆಮ್ಮದಿ ವಾತಾವರಣ, ದಿನಗಳು ಸುಗಮವಾಗಿ ಸಾಗಲಿವೆ. ಬಂದ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಿರಿ. ನಿರ್ಧಾರ ಗಳಲ್ಲಿ ಖಚಿತತೆ ಇರಲಿ. ಹಿತಶತ್ರುಗಳ ಮೋಸ ಬಯಲಾಗ ಬಹುದು. ಮಾನಸಿಕ ದೃಢತೆ ಕಾಯ್ದುಕೊಳ್ಳಿರಿ. ಮಾನಸಿಕ ನೆಮ್ಮದಿ, ಕೃಷಿಕರಿಗೆ ಲಾಭ, ದಾಂಪತ್ಯದಲ್ಲಿ ಪ್ರೀತಿ, ಹಿತೈಷಿಗಳಿಂದ ಹೊಗಳಿಕೆ.

ಮಕರರಾಶಿ
ಕಾರ್ಯಕ್ಷೇತ್ರದಲ್ಲಿ ಕೆಲಸದ ಒತ್ತಡ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಕೂಡಾ ಸುಧಾರಿಸಲಿದೆ. ನಂಬಿದ ವ್ಯಕ್ತಿಗಳು ನಿರಾಸೆ ಮೂಡಿಸುವರು. ಕಠಿಣ ನಿರ್ಧಾರ ತೆಗೆದುಕೊಳ್ಳದಿರಿ. ಹೊಂದಾಣಿಕೆ ಇರಲಿ. ಮಾನಸಿಕ ನೆಮ್ಮದಿ, ಬಾಕಿ ಹಣ ವಸೂಲಿ, ಚಂಚಲ ಮನಸ್ಸು, ಯಶಸ್ಸಿನ ಮೆಟ್ಟಿಲೇರುವಿರಿ, ಶತ್ರುಗಳ ಬಾಧೆ, ಕೆಲಸ ಕಾರ್ಯಗಳಲ್ಲಿ ಮುನ್ನಡೆ.

ಕುಂಭರಾಶಿ
ಸಾಧಾರಣ ಲಾಭ, ತಾಳ್ಮೆ ಅತ್ಯಗತ್ಯ, ಸಂಬಂಧದಲ್ಲಿ ಬಿರುಕು ಉಂಟಾದೀತು. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾದೀತು. ಅನಾವಶ್ಯಕವಾಗಿ ಭಾವುಕರಾಗುವ ಪ್ರಸಂಗ ಒದಗಿ ಬರಲಿದೆ. ಸುತ್ತಮುತ್ತಲಿನ ಸ್ಥಿತಿ ನಿಮಗೆ ಪೂರಕ. ಆರೋಗ್ಯದಲ್ಲಿ ವ್ಯತ್ಯಾಸ, ಧನ ಲಾಭ, ಗೊಂದಲದ ವಾತಾವರಣ, ವೈಯುಕ್ತಿಕ ವಿಚಾರದಲ್ಲಿ ಕಾಳಜಿವಹಿಸಿ.

ಮೀನರಾಶಿ
ಅನ್ಯ ಜನರಲ್ಲಿ ಪ್ರೀತಿ, ಸಾಂಸಾರಿಕವಾಗಿ ಅಡ್ಡಿ ಆತಂಕಗಳೆಲ್ಲ ನಿವಾರಣೆಯಾಗಲಿವೆ. ಋಣಾತ್ಮಕ ಚಿಂತನೆಯನ್ನು ಬಿಟ್ಟು ಬಿಡಿರಿ. ಆರ್ಥಿಕ ಹಾಗೂ ಆರೋಗ್ಯದ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ಆತ್ಮವಿಶ್ವಾಸ ಬೆಳೆಸಿಕೊಳ್ಳಿರಿ. ಉತ್ತಮ ಅವಕಾಶ ಪ್ರಾಪ್ತಿ, ದುಷ್ಟರಿಂದ ತೊಂದರೆ, ಮನಃಸ್ತಾಪ ಹೆಚ್ಚಾಗುವುದು, ವಿಪರೀತ ವ್ಯಸನ. ಆರೋಗ್ಯದ ಬಗ್ಗೆ ಕಾಳಜಿವಹಿಸಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular