ಮೇಷರಾಶಿ
ವ್ಯಾಪಾರದಲ್ಲಿ ಲಾಭ, ಉದ್ಯೋಗ ಸ್ಥಳದಲ್ಲಿ ಮಂದತ್ವ, ಶತ್ರುಗಳಿಂದ ಸಮಸ್ಯೆ ಪರಿಹಾರ, ಉತ್ಕೃಷ್ಟವಾದ ಫಲಗಳನ್ನು ನೀವು ಅನುಭವಿಸಲಿದ್ದೀರಿ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ವಾಹನದಿಂದ ತೊಂದರೆ, ಅಡೆತಡೆಗಳು, ಆತಂಕ, ವಿಷಯಗಳಿಂದ ತೊಂದರೆ.
ವೃಷಭರಾಶಿ
ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ, ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ಉದರಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆ, ಬಂಧು ಬಾಂಧವರಿಂದ ನೋವು, ನೆರೆಹೊರೆಯವ ರೊಂದಿಗೆ ಮನಸ್ತಾಪ, ಪ್ರಯಾಣದಲ್ಲಿ ಆಲಸ್ಯ, ಸ್ವಂತ ವ್ಯವಹಾರದಲ್ಲಿ ತೊಂದರೆಗಳು.
ಮಿಥುನರಾಶಿ
ಕೃಷಿಕರಿಗೆ ಅಧಿಕ ಲಾಭ, ಅನಿರೀಕ್ಷಿತ ಆರ್ಥಿಕ ಸಂಕಷ್ಟ, ಸ್ತ್ರೀಯರಿಂದ ಸಹಕಾರದ ದೊರೆಯಲಿದೆ, ವ್ಯಾಪಾರಿಗಳಿಗೆ ವಿಶೇಷವಾದ ದಿನ, ಕುಟುಂಬಸ್ಥರೇ ಶತ್ರುಗಳಾಗುವರು, ಅನಾರೋಗ್ಯ, ಕೋರ್ಟ್ ಕೇಸ್ ಅಲೆದಾಟ, ಹಿರಿಯರಿಂದ ಬೈಗುಳ, ತಾಯಿಯಿಂದ ಧನಾಗಮನ.
ಕರ್ಕಾಟಕರಾಶಿ
ಸಹೋದರರಿಂದ ಕಿರಿಕಿರಿ, ಅಪಮಾನಗಳು, ವಿಕೃತ ಮನೋಭಿಲಾಷೆಗಳು, ಹೊಂದಾಣಿಕೆಯಿಂದ ಕಾರ್ಯಲಾಭ, ದಾಂಪತ್ಯದಲ್ಲಿ ನಿರಾಸಕ್ತಿ, ಸ್ವಂತ ಉದ್ಯಮದಲ್ಲಿ ಮಂದತ್ವ, ಮಕ್ಕಳ ವೈವಾಹಿಕ ಜೀವನದ ಚಿಂತೆ, ಗೌರವಕ್ಕೆ ಧಕ್ಕೆಯಾಗುವ ಆತಂಕ.
ಸಿಂಹರಾಶಿ
ನಿಮ್ಮ ಪಾಲಿಗಿಂದು ಲಾಭದ ದಿನ, ಖರ್ಚುಗಳು, ಅಧಿಕ ಸಾಲದ ಚಿಂತೆ, ವಿವೇಚನೆಯಿಂದ ಕಾರ್ಯ ಸಿದ್ದಿಯಾಗಲಿದೆ, ತಾಯಿಯಿಂದ ಅಂತರ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ, ದೀರ್ಘಕಾಲದ ರೋಗಗಳಿಂದ ಚಿಂತೆ, ದುಃಸ್ವಪ್ನಗಳು, ಸೇವಕರಿಂದ ತೊಂದರೆ, ಸೋಮಾರಿತನ ಆಲಸ್ಯ.
ಇದನ್ನೂ ಓದಿ : ಅಯ್ಯಪ್ಪನ ಭಕ್ತರಿಗೆ ಸಿಹಿ ಸುದ್ಧಿ : ನವೆಂಬರ್ 15 ರಿಂದ 2 ತಿಂಗಳು ತೆರೆಯಲಿದೆ ಶಬರಿಮಲೆ
ಕನ್ಯಾರಾಶಿ
ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ವಹಿಸಿ, ದೂರ ಪ್ರಯಾಣ ಲಾಭವನ್ನು ತರಲಿದೆ, ಅಧಿಕ ಶ್ರಮದಿಂದ ಕಾರ್ಯದಲ್ಲಿ ಜಯ, ಮಿತ್ರರಿಂದ ಅನುಕೂಲ, ಶುಭಾಶಯಗಳು, ಪ್ರೀತಿ-ಪ್ರೇಮದಲ್ಲಿ ಮನಸ್ತಾಪ, ಜೂಜು, ರೇಸ್, ಲಾಟರಿಯತ್ತ ಚಿತ್ತ, ಸಂತಾನದ ಚಿಂತೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.
ತುಲಾರಾಶಿ
ದೂರದ ಬಂಧುಗಳ ಭೇಟಿಯಿಂದ ಸಂತಸ, ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ಇಷ್ಟ ಮಿತ್ರರ ಭೇಟಿ, ಮಿತ್ರರೊಂದಿಗೆ ವಾಗ್ವಾದ, ಸ್ಥಿರಾಸ್ತಿಯಿಂದ ಅನುಕೂಲ, ಸರ್ಕಾರಿ ಕೆಲಸ ಕಾರ್ಯಗಳು, ವಿದ್ಯಾಭ್ಯಾಸ ಹಿನ್ನಡೆ, ಹಿರಿಯರೊಂದಿಗೆ ಮನಸ್ತಾಪ.
ವೃಶ್ಚಿಕರಾಶಿ
ವ್ಯಾಪಾರದಲ್ಲಿ ಮೋಸಕ್ಕೆ ಒಳಗಾಗುವ ಸಾಧ್ಯತೆ, ಪ್ರಯಾಣದಲ್ಲಿ ಅಡತಡೆ, ನಿರಾಸಕ್ತಿ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಕಂಡು ಬರಲಿದೆ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಕೃಷಿಕರಿಗೆ ಅನುಕೂಲ, ಉದ್ಯೋಗ ಬದಲಾವಣೆಯ ಆಲೋಚನೆ, ವಾಸಸ್ಥಳದಲ್ಲಿ ದೃಷ್ಟಿ ದೋಷ, ವಾಹನದಿಂದ ನಷ್ಟದ ಆತಂಕ.
ಧನಸ್ಸುರಾಶಿ
ಸಂಗಾತಿಯಿಂದ ಸಹಕಾರ, ಶತ್ರುಭಯ, ಕೌಟುಂಬಿಕ ಚಿಂತೆಗಳು, ಕುಟುಂಬದಿಂದ ಸಹಕಾರ, ಮನಸಿಗೆ ಅಸಮಾಧಾನ, ಸಂಗಾತಿಯಿಂದ ಸಹಕಾರ, ತಂದೆಯಿಂದ ಅನುಕೂಲ, ಉಸಿರಾಟದ ಸಮಸ್ಯೆಗಳು, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಅಪಕೀರ್ತಿ, ಅಪವಾದದ ಸೋಲಿನ ಆತಂಕ.
ಮಕರರಾಶಿ
ಕೃಷಿಕರಿಗೆ ಹೆಚ್ಚು ಅನುಕೂಲಕರವಾದ ದಿನ, ತಾಯಿಯಿಂದ ಅನುಕೂಲ, ಸಮಾಧಾನದ ದಿನ, ಪಾಲುದಾರಿಕೆಯಲ್ಲಿ ಅನುಕೂಲ, ಸಂಗಾತಿಯೊಂದಿಗೆ ಬೇಸರ, ಮಕ್ಕಳ ಜೀವನದ ಚಿಂತೆ, ಶುಭಕಾರ್ಯದ ಆಲೋಚನೆ, ಸ್ವಯಂಕೃತ ಅಪರಾಧದಿಂದ ಕಷ್ಟಗಳು.
ಇದನ್ನೂ ಓದಿ : ತೆಂಗಿನಕಾಯಿ ನೀಡಿದ್ರೆ ಒಲಿತಾನೆ ರಾಮಭಂಟ : ವಾಯುಪುತ್ರನನ್ನು ನಂಬಿದ್ರೆ ಎಲ್ಲಾ ಕಾರ್ಯಸಿದ್ಧಿ
ಕುಂಭರಾಶಿ
ಆರೋಗ್ಯದಲ್ಲಿ ಏರುಪೇರು, ಅನಗತ್ಯ ವಿವಾದಗಳು ನಿಮ್ಮನ್ನು ಸುತ್ತಿಕೊಳ್ಳಲಿದೆ, ನೆರೆ ಹೊರೆಯವರ ಜೊತೆ ಉತ್ತಮ ಬಾಂಧವ್ಯ, ಸಂಗಾತಿಯಿಂದ ಸಹಕಾರ ದೊರೆಯಲಿದೆ, ಕೆಲಸಗಾರರಿಂದ ನಷ್ಟ, ಅನಾರೋಗ್ಯ, ಸಾಲದ ಚಿಂತೆಗಳು, ಉದ್ಯೋಗ ಸಮಸ್ಯೆಗಳು, ಭವಿಷ್ಯದ ಯೋಚನೆ.
ಮೀನರಾಶಿ
ವ್ಯವಹಾರಿಕವಾಗಿ ಹೊಸ ಅವಕಾಶವೊಂದು ದೊರೆಯಲಿದೆ, ಸ್ತ್ರೀಯರ ಆರೋಗ್ಯದಲ್ಲಿ ಏರುಪೇರು, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಹೆಣ್ಣುಮಕ್ಕಳಿಂದ ಅನುಕೂಲ, ಉದ್ಯೋಗ ಲಾಭ, ಆರ್ಥಿಕ ಚೇತರಿಕೆ, ದೇವತಾ ದರ್ಶನ ಭಾಗ್ಯ, ಸತ್ಯಕ್ಕೆ ಜಯ, ಭಾವನಾತ್ಮಕ ಸೋಲು, ದಿನಾಂತ್ಯಕ್ಕೆ ಧನಲಾಭ.
ಇದನ್ನೂ ಓದಿ : Horoscope : ಎರಡು ಪ್ರಮುಖ ಗ್ರಹಗಳ ಕುತೂಹಲಕಾರಿ ನಡೆ: ವಕ್ರತ್ಯಾಗ ಮಾಡಲಿರುವ ಬುಧ ಮತ್ತು ಗುರು
(Horoscope today astrological prediction for November 11)