ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 14-03-2020

ನಿತ್ಯಭವಿಷ್ಯ : 14-03-2020

- Advertisement -

ಮೇಷರಾಶಿ
ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಕೋರ್ಟು ವ್ಯವಹಾರಗಳಲ್ಲಿ ಅಧಿಕ ರೀತಿಯಲ್ಲಿ ಧನವ್ಯಯವಾಗಲಿದೆ. ವಾಹನ ಚಾಲನೆಯಲ್ಲಿ ಎಚ್ಚರ, ಸೋಮಾರಿತನ, ದುಗುಡ, ನೋವು, ಸಾಂಸಾರಿಕವಾಗಿ ಆಗಾಗ ಮನಶ್ಶಾಂತಿಗೆ ಭಂಗ ಬರತ್ತದೆ. ಗೃಹ ನಿರ್ಮಾಣ ಕಾರ್ಯದ ಚಿಂತನೆ ತೋರಿ ಬಂದೀತು.

ವೃಷಭರಾಶಿ
ದೂರ ಸಂಚಾರದಲ್ಲಿ ಕಾರ್ಯಸಿದ್ಧಿ ಇರುತ್ತದೆ. ಶುಭಮಂಗಲ ಕಾರ್ಯಗಳಲ್ಲಿ ಭಾಗವಹಿಸುವಿರಿ. ಸ್ವಂ ಅಪರಾಧದಿಂದ ದಾಂಪತ್ಯದಲ್ಲಿ ಬೇಸರ, ಆರ್ಥಿಕವಾಗಿ ಹಂತ ಹಂತವಾಗಿ ನೆಮ್ಮದಿ ಇರುತ್ತದೆ. ದೇಹಾರೋಗ್ಯದ ಬಗ್ಗೆ ಗಮನ ಇರಲಿ. ಸಂಬಂಧಿಕರಿಂದ ಭಾಗ್ಯೋದಯ, ಕೈಗಾರಿಕೆ, ಯಂತ್ರ, ಎಲೆಕ್ಟ್ರಿಕಲ್ ಕ್ಷೇತ್ರದಲ್ಲಿ ಉದ್ಯೋಗ.

ಮಿಥುನರಾಶಿ
ಧನಾಗಮನಕ್ಕೆ ಕೊರತೆ ಇರದು. ಸಂಚಾರದಲ್ಲಿ ಅಪಘಾತದ ಭೀತಿ ಕಂಡು ಬರುತ್ತದೆ. ವೃತ್ತಿರಂಗದಲ್ಲಿ ನಿರೀಕ್ಷಿತ ಲಾಭವಿರದು. ಸಾಂಸಾರಿಕವಾಗಿ ಸಾಮರಸ್ಯದ ಕೊರತೆ ಕಾಣಿಸಲಿದೆ. ಕುಟುಂಬ ಕೋರ್ಟ್ ಕೇಸಿನಲ್ಲಿ ಜಯ, ತಂದೆ ಮಕ್ಕಳಲ್ಲಿ ಜಗಳ.

ಕಟಕರಾಶಿ
ಆರೋಗ್ಯ ಉತ್ತಮವಿರುತ್ತದೆ.ಉದ್ಯೋಗದಲ್ಲಿ ಒಳ್ಳೆಯ ಹೆಸರು, ಕಾನೂನು ಬಾಹಿರ ಕೃತ್ಯಗಳಿಂದ ತೊಂದರೆ, ರಾಜಕೀಯ ವರ್ಗದವರಿಗೆ ಸ್ಥಾನಪಲ್ಲಟದ ಸಾಧ್ಯತೆ ಇರುತ್ತದೆ. ವಿದ್ಯಾರ್ಥಿಗಳಿಗೆ ಸಹವಾಸದೋಷದಿಂದ ಅಭ್ಯಾಸದಲ್ಲಿ ಅಸ್ಥಿರತೆ ತೋರಿ ಬರುತ್ತದೆ. ಮಕ್ಕಳು ಮತ್ತು ಆಲಸ್ಯದಿಂದ ತೊಂದರೆ.

ಸಿಂಹರಾಶಿ
ಉದ್ಯೋಗಸ್ಥರಿಗೆ ಶುಭವಾರ್ತೆ ಸಂತಸ ತರಲಿದೆ. ದೈವಾನುಗ್ರಹವಿದ್ದು ಎಲ್ಲಾ ವಿಚಾರದಲ್ಲಿ ಮುನ್ನಡೆ ಇರುತ್ತದೆ. ವಾಹನ ಮತ್ತು ಭೂಮಿ ನಷ್ಟ, ಸಾಲದ ಚಿಂತೆ ಅಧಿಕವಾಗಿ ಕಾಡುವುದು, ಕುಟುಂಬ ಸ್ಥಾನದಲ್ಲಿ ಶುಭಮಂಗಲ ಕಾರ್ಯಗಳಿಗಾಗಿ ಓಡಾಟ ವಿರುತ್ತದೆ. ದುಡುಕಿನ ಸ್ವಭಾವದಿಂದ ಸ್ನೇಹಿತರನ್ನು ಕಳೆದುಕೊಳ್ಳುವಿರಿ.

ಕನ್ಯಾರಾಶಿ
ದಾಯಾದಿ ಕಲಹದ ಭೂಮಿ ಕೇಸಿನಲ್ಲಿ ಜಯ. ನೆರೆಹೊರೆಯವರಿಂದ ಅನುಕೂಲ, ಆರ್ಥಿಕ ವೆಚ್ಚಗಳು ಅಧಿಕವಾಗಲಿವೆ. ಕಿರಿಯ ಸೋದರ ಸೋದರಿಯಿಂದ ಆರೋಗ್ಯದಲ್ಲಿ ವ್ಯತ್ಯಾಸ, ನೆಮ್ಮದಿ ಇಲ್ಲದೆ ಸಾಂಸಾರಿಕವಾಗಿ ಭಿನ್ನಾಭಿಪ್ರಾಯದಿಂದ ಕಲಹ ತರಲಿದೆ. ದಾಂಪತ್ಯದಲ್ಲಿ ಸಂಯಮವಿರಲಿ. ಸಂಚಾರದಲ್ಲಿ ಜಾಗ್ರತೆ.

ತುಲಾರಾಶಿ
ಸಹೋದ್ಯೋಗಳಿಂದ ಆರ್ಥಿಕ ಸಹಾಯ. ಉದ್ಯೋಗದಲ್ಲಿ ಒಳ್ಳೆಯ ಹೆಸರು, ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ವ್ಯಾಪಾರ ವ್ಯವಹಾರಗಳನ್ನು ಜಾಗ್ರತೆಯಿಂದ ನಡೆಸಿಕೊಂಡು ಹೋಗಬೇಕಾದೀತು. ಕ್ರಯ ವಿಕ್ರಯಗಳಲ್ಲಿ ಷ್ಟವಾಗಲಾರದು. , ಸಂಗಾತಿಯಿಂದ ಮತ್ತು ಸ್ನೇಹಿತರಿಂದ ಅನುಕೂಲ.

ವೃಶ್ಚಿಕರಾಶಿ
ಭೂಮಿ ಮತ್ತು ವಾಹನ ಖರೀದಿ ಯೋಚನೆ, ಕಾರ್ಯಒತ್ತಡಗಳಿಂದ ಆಗಾಗ ದೇಹಾಯಾಸವಾದೀತು. ಗ್ಯಾಸ್ಟಿಕ್, ಕಾಲುನೋವು ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರು ಸಹಕಾರ ನೀಡಿಯಾರು. ಖರ್ಚುಗಳು ವಿಪರೀತವಾಗದಂತೆ ಜಾಗ್ರತೆ ವಹಿಸಿರಿ. ಶ್ರೀದೇವತಾದರ್ಶನ ಭಾಗ್ಯವಿರುತ್ತದೆ. ಆತ್ಮೀಯರೊಡನೆ ಮಾನಸಿಕ ಕಿರಿಕಿರಿ.

ಧನಸ್ಸುರಾಶಿ
ದಾಯಾದಿಗಳು ಕಿರಿಕಿರಿ ತಂದಾರು. ಆಕಸ್ಮಿಕ ಧನ ನಷ್ಟ, ಧರ್ಮಕಾರ್ಯಗಳಿಂದ ನೆಮ್ಮದಿ ಸಿಗಲಿದೆ. ಆರ್ಥಿಕ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ಇರಲಿ. ಇನ್ನಷ್ಟು ಆರ್ಥಿಕ ಸಂಕಷ್ಟ. ಸಾಂಸಾರಿಕವಾಗಿ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಇರಲಿ.ಕಿರಿಯ ಸಹೋದರನಿಂದ ನಷ್ಟ, ನಿದ್ರೆ ಅಧಿಕವಾಗಿ ಮಾಡುವಿರಿ,

ಮಕರರಾಶಿ
ಸದ್ಯದ ಮಟ್ಟಿಗೆ ಪ್ರಯತ್ನಬಲದಿಂದ ಮುಂದುವರಿಯಬೇಕು. ಸದ್ಯದಲ್ಲೇ ಪರಿವರ್ತನೆ ಮನಸ್ಸಿಗೆ ಆಶಾಕಿರಣವಾದೀತು. ಮನೆ ಕೊಳ್ಳುವ ಮನಸು ಮಾಡುವಿರಿ, ಮಿತ್ರರ ಸಹಕಾರವಿದ್ದರೂ ಸಮಾಧಾನ ಸಿಗದು. ಕೋಪ ಮತ್ತು ಆವೇಶದ ಮಾತುಗಳು, ಮಿತ್ರರಿಂದ ಅನುಕೂಲ, ಅಕ್ರಮ ಸಂಬಂಧಗಳಿಗೆ ಬಲಿಯಾಗುವಿರಿ.

ಕುಂಭರಾಶಿ
ಲಾಭ-ನಷ್ಟ ಸಮ ಪ್ರಮಾಣದಲ್ಲಿರುವುದು. ಅವಿವಾಹಿತರು ಕಂಕಣಬಲವನ್ನು ಪಡೆದಾರು. ಸಹೊದ್ಯೋಗಿಗಳೊಂದಿಗೆ ಶತ್ರುತ್ವ, ಕರ್ತವ್ಯದಲ್ಲಿ ನಿರಾಸಕ್ತಿ, ವಹಿಸಿದ ಕೆಲಸಕಾರ್ಯಗಳು ಹಂತ ಹಂತವಾಗಿ ನೆರವೇರುತ್ತವೆ. ಧನವ್ಯಯ ಅಧಿಕವಾಗಿ ಆತಂತಕ್ಕೆ ಕಾರಣವಾಗುತ್ತದೆ.

ಮೀನರಾಶಿ
ಅಧಿಕ ಒತ್ತಡಗಳಿಂದ ನಿದ್ರಾಭಂಗ. ಸಾಂಸಾರಿಕವಾಗಿ ಮಕ್ಕಳಿಂದ ಶುಭಫ‌ಲ ಪಡೆಯುವಿರಿ. ಶುಭಮಂಗಲ ಕಾರ್ಯಗಳಿಗಾಗಿ ಓಡಾಟ. ಬಂದ ಹಣ ನಾನಾ ರೀತಿಯಲ್ಲಿ ಖರ್ಚುವೆಚ್ಚ ತರುತ್ತದೆ. ವಾರ್ತೆ, ಹೆಣ್ಣು ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಅನ್ಯ ಪ್ರದೇಶದಲ್ಲಿ ಉದ್ಯೋಗ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular