ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ :17-03-2020

ನಿತ್ಯಭವಿಷ್ಯ :17-03-2020

- Advertisement -

ಮೇಷರಾಶಿ
ದೈವಾನುಗ್ರಹವು ನಿಮ್ಮ ಪಾಲಿಗಿದೆ. ಋಣ ವಿಮೋಚನೆ, ಹೆಚ್ಚಿನ ಮನೋಕಾಮನೆಗಳು ನೆರವೇರಲಿವೆ. ದೂರವಾದ ಆಪ್ತರ ಸಮಾಗಮದಿಂದ ನೆಮ್ಮದಿ. ಕಾರ್ಯ ಸಾಧನೆಗಾಗಿ ತಿರುಗಾಟ, ಆರೋಗ್ಯದಲ್ಲಿ ವ್ಯತ್ಯಾಸ, ದಂಡ ಕಟ್ಟುವ ಸಾಧ್ಯತೆ, ಅಲ್ಪ ಕಾರ್ಯ ಸಿದ್ಧಿ.

ವೃಷಭರಾಶಿ
ಆರ್ಥಿಕವಾಗಿ ಧನಾಗಮನದಿಂದ ಸಮಾಧಾನವಾಗಲಿದೆ. ಯೋಗ್ಯ ವಯಸ್ಕರಿಗೆ ಕಾಯುವ ಪ್ರಸಂಗ ಬಂದೀತು. ಅನಾವಶ್ಯಕ ವೆಚ್ಚ, ಕೃಷಿಯಲ್ಲಿ ನಷ್ಟ, ದುಷ್ಠ ಚಿಂತನೆ, ವೃತ್ತಿರಂಗದಲ್ಲಿ ಕರ್ತವ್ಯ ನಿಷ್ಠೆಗೆ ಅದ್ಯತೆ ನೀಡಿರಿ. ಕೋರ್ಟು ಕಚೇರಿಯ ಕಾರ್ಯದಲ್ಲಿ ವಿಳಂಬ ತೋರಿ ಬಂದೀತು. ಮಾನಸಿಕ ಒತ್ತಡ.

ಮಿಥುನರಾಶಿ
ವಾಹನ ಅಪಘಾತ. ಆರ್ಥಿಕ ಸ್ಥಿತಿಯು ಉತ್ತಮವಿದ್ದರೂ ಅತೀ ಉದಾರತೆ ಸಮಸ್ಯೆ ತಂದೀತು. ಸಾಂಸಾರಿಕ ಸುಖ, ಸಹಕಾರವು ನಿಮಗೆ ದೊರಕೀತು. ವ್ಯಾಪಾರದಲ್ಲಿ ದೃಷ್ಠಿದೋಷ, ಗುರು ಹಿರಿಯರ ದರ್ಶನ, ಮಾನಸಿಕ ನೆಮ್ಮದಿ, ವಿದ್ಯಾರ್ಥಿಗಳಿಗೆ ಆತಂಕ, ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳಿ.

ಕಟಕರಾಶಿ
ಹೆಚ್ಚಿನ ಗ್ರಹಗಳ ಪ್ರತಿಕೂಲತೆ ಮಾನಸಿಕ ಕಿರಿಕಿರಿಯನ್ನು ಹೆಚ್ಚಿಸಲಿದೆ. ಎಲ್ಲಿ ಹೋದರೂ ಅಶಾಂತಿ, ನೀವಾಡುವ ಮಾತುಗಳಿಂದ ಕಲಹ, ಪರ ಸ್ತ್ರೀಯಿಂದ ತೊಂದರೆ, ಅಸಹನೆ ನಿಮ್ಮನ್ನು ಕಾಡಲಿದೆ. ಸಣ್ಣ ಪುಟ್ಟ ನಿರಾಸೆಗಳು ಆಗಾಗ ಗೋಚರಕ್ಕೆ ಬಂದಾವು. ವೈವಾಹಿಕ ವಿಚಾರಗಳಲ್ಲಿ ಚಿಂತಿಸುವಂತಾದೀತು.

ಸಿಂಹರಾಶಿ
ಆರ್ಥಿಕ ಪರಿಸ್ಥಿತಿ ಚೇತರಿಕೆ, ಆರ್ಥಿಕವಾಗಿ ಸಾಕಷ್ಟು ಉಳಿತಾಯವಾಗಲಿದೆ. ದೈವಾನುಗ್ರಹವು ನಿಮ್ಮ ಪರವಾಗಿದೆ. ತಾಳ್ಮೆ ಸಮಾಧಾನದಿಂದ ಎದುರಿಸುವುದು. ಅಸಹನೆ ನಿಮ್ಮನ್ನು ಸಿಡಿಸಲಿದೆ. ಮಂಗಳ ಕಾರ್ಯದಲ್ಲಿ ಭಾಗಿ, ಪರಸ್ಥಳ ವಾಸ, ಸೌಜನ್ಯದಿಂದ ವರ್ತಿಸಿ.

ಕನ್ಯಾರಾಶಿ
ಉದ್ಯೋಗಸ್ಥರಿಗೆ ನಾನಾ ರೀತಿಯ ಅವಕಾಶಗಳು ಒದಗಿ ಬರಲಿವೆ. ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ. ಜಾಗೃತೆಯಲ್ಲಿರುವುದು ಉತ್ತಮ, ಅತಿಯಾದ ಒತ್ತಡ, ಇಲ್ಲ ಸಲ್ಲದ ಅಪವಾದ, ಸಾಂಸಾರಿಕ ಸಂಬಂಧಗಳು ಗಟ್ಟಿಯಾಗಲಿವೆ. ವೃತ್ತಿರಂಗದಲ್ಲಿ ದಮನ ಪ್ರವೃತ್ತಿ ಕಂಡು ಬಂದೀತು. ವ್ಯರ್ಥ ಧನ ಹಾನಿ, ಬೇಡದ ವಿಷಯಗಳಲ್ಲಿ ಆಸಕ್ತಿ, ಮಾನಸಿಕ ವ್ಯಥೆ.

ತುಲಾರಾಶಿ
ಉದ್ಯೋಗಿಗಳಿಗೆ ವರ್ಗಾವಣೆ ತಂದೀತು. ಯತ್ನ ಕಾರ್ಯದಲ್ಲಿ ವಿಳಂಬ, ರಾಜಕೀಯ ವರ್ಗದವರಿಗೆ ನಿರಾಳ ವಾತಾವರಣವಿದೆ. ವಿದ್ಯಾರ್ಥಿಗಳ ಪ್ರಯತ್ನಫ‌ಲ ಸಾರ್ಥಕವಾಗಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾಶಿಲತೆಗೆ ಪ್ರಶಂಸೆ ಸಲ್ಲಲಿದೆ. ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ.

ವೃಶ್ಚಿಕರಾಶಿ
ವೃತ್ತಿರಂಗದಲ್ಲಿ ಸ್ಥಾನಮಾನ ಹೆಚ್ಚಲಿದೆ. ಧನಾಗಮನ ಸಂತಸ ತಂದೀತು. ಅಲ್ಪ ಕಾರ್ಯ ಸಿದ್ಧಿ, ನೆಮ್ಮದಿ ಇಲ್ಲದ ಜೀವನ, ಸ್ತ್ರೀಯರಿಗೆ ಶುಭ, ಸಾಂಸಾರಿಕವಾಗಿ ಸಂತಸದ ವಾತಾವರಣ. ಸ್ವಯಂಕೃತ ಅಪರಾಧಗಳಿಂದ ತೊಂದರೆ, ಮಾನಸಿಕ ಕಿರಿಕಿರಿ, ವ್ಯಥೆ.

ಧನಸ್ಸುರಾಶಿ
ವ್ಯಾಪಾರ, ವ್ಯವಹಾರಗಳು ತಕ್ಕಮಟ್ಟಿಗೆ ಫ‌ಲವನ್ನು ನೀಡಲಿವೆ. ದಾಪಂತ್ಯದಲ್ಲಿ ಪ್ರೀತಿ, ಧನಾತ್ಮಕ ಯೋಚನೆಗಳನ್ನು ಬೆಳೆಸಿಕೊಳ್ಳಿರಿ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ಪ್ರಿಯ ಜನರ ಭೇಟಿ, ದೂರ ಪ್ರಯಾಣ, ವ್ಯಾಪಾರದಲ್ಲಿ ಮಂದಗತಿ, ಸ್ತ್ರೀಯರಿಗೆ ಲಾಭ. ಅವಿವಾಹಿತರು ವಿವಾಹದ ಬಗ್ಗೆ ಚಿಂತಿಸುವಂತಾದೀತು.

ಮಕರರಾಶಿ
ಪ್ರಯತ್ನಬಲಕ್ಕೆ ಒತ್ತು ನೀಡಿರಿ. ಹಿರಿಯರ ಸೂಕ್ತ ಸಲಹೆಗಳು ಬದಲಾವಣೆಗೆ ಪೂರಕವಾಗಲಿವೆ. ಉದ್ಯೋಗಸ್ಥರಿಗೆ ಉತ್ತಮ ಅವಕಾಶಗಳಿವೆ. ಮನೆಯಲ್ಲಿ ಸಂತಸ, ಮಾನಸಿಕ ನೆಮ್ಮದಿ, ಪಾಪದ ಕೆಲಸಗಳಿಗೆ ಪ್ರಚೋದನೆ, ವಾಹನದಿಂದ ತೊಂದರೆ. ಹಲವಾರು ಚಿಂತನೆಗಳು ಕಾರ್ಯರೂಪಕ್ಕೆ ಬರಲು ಸಿದ್ದವಾಗಿರುತ್ತವೆ.

ಕುಂಭರಾಶಿ
ಆಕಸ್ಮಿಕ ಧನವಿನಿಯೋಗದಿಂದ ನಷ್ಟವಾದೀತು. ವ್ಯಾಪಾರ-ವ್ಯವಹಾರದಲ್ಲಿ ಎಚ್ಚರ. ಆಗಾಗ ಆರೋಗ್ಯದಲ್ಲಿ ಏರುಪೇರು ಕಂಡು ಬರಲಿದೆ.ಪರಿಶ್ರಮಕ್ಕೆ ತಕ್ಕ ಫಲ, ಆಲಸ್ಯ ಮನೋಭಾವ, ವಿವಾದಗಳಿಂದ ದೂರ ಉಳಿಯಿರಿ, ನಿಮ್ಮ ವಿಶ್ವಾಸದ ದುರುಪಯೋಗವಾಗದಂತೆ ಜಾಗ್ರತೆ ವಹಿಸಿರಿ. ಶ್ರೀಕುಲದೇವತಾ ದರ್ಶನ ಭಾಗ್ಯದಿಂದ ಸಂತೋಷವಿದೆ.

ಮೀನರಾಶಿ
ಆಕಸ್ಮಿಕ ಧನಲಾಭ, ಆರ್ಥಿಕವಾಗಿ ಧನ ಸಂಪತ್ತು ವೃದ್ಧಿಸಲಿದೆ. ಕೃಷಿಯಲ್ಲಿ ಲಾಭ, ಮಾತಿನಿಂದ ವಿರೋಧವನ್ನು ಕಟ್ಟಿ ಕೊಳ್ಳುವಂತಾದೀತು. ದುಡುಕುತನದಿಂದ ಕಾರ್ಯಹಾನಿಯಾಗದಂತೆ ಜಾಗ್ರತೆ ವಹಿಸಿರಿ. ದಿನಾಂತ್ಯ ಶುಭಶುದ್ದಿ ಇರುವುದು. ಚೋರ ಭಯ, ಅಧಿಕ ಕೋಪ, ವಿಪರೀತ ವ್ಯಸನ, ಹಿತ ಶತ್ರುಗಳ ಕಾಟ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular