ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 19-04-2020

ನಿತ್ಯಭವಿಷ್ಯ : 19-04-2020

- Advertisement -

ಮೇಷರಾಶಿ
ಅಧಿಕ ಪ್ರಯಾಣ, ಸಂಪತ್ತು ಪ್ರಾಪ್ತಿ, ಶತ್ರುಗಳ ನಾಶ, ಕುಟುಂಬದಲ್ಲಿ ಏರಿಳಿತಗಳ ಅನುಭವವಾಗಲಿದೆ. ವಿದ್ಯಾರ್ಥಿಗಳ ಪ್ರಯತ್ನಬಲಕ್ಕೆ ಉದಾಸೀನ ತೋರಿ ಬಂದೀತು. ಆರ್ಥಿಕ ಸ್ಥಿತಿ ಆಗಾಗ ಆತಂಕಕ್ಕೆ ಕಾರಣವಾಗಲಿದೆ. ಅಕಾಲ ಭೋಜನ, ಪರರಿಂದ ಮೋಸ ಎಚ್ಚರಿಕೆ, ಸಮಾಜ ಸೇವಕರಿಗೆ ನಿಂದನೆ, ಇಲ್ಲ ಸಲ್ಲದ ಅಪವಾದ.

ವೃಷಭರಾಶಿ
ಮಿತ್ರರಿಂದ ಸಹಾಯ, ಸ್ವಯಂಕೃತ ಅಪರಾಧ, ಮಾನಸಿಕ ವ್ಯಥೆ, ಉದ್ಯೋಗಿಗಳಿಗೆ ಉತ್ತಮ ಅವಕಾಶಗಳು ಒದಗಿ ಬರುತ್ತವೆ. ಚಿಂತಿತ ಕೆಲಸಗಳು ಅನಿರೀಕ್ಷಿತವಾಗಿ ನೆರವೇರುತ್ತದೆ. ನೆರೆಹೊರೆಯವರ ಬಗ್ಗೆ ಹೆಚ್ಚಿನ ಗಮನವಿರಲಿ. ವಾಹನ ಅಪಘಾತ, ಸಾಲದಿಂದ ಮುಕ್ತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ದಾಂಪತ್ಯದಲ್ಲಿ ಪ್ರೀತಿ.

ಮಿಥುನರಾಶಿ
ಕೆಲಸ ಕಾರ್ಯಗಳಲ್ಲಿ ವಿಳಂಬ, ಪ್ರೇಮಿಗಳಿಗೆ ಪ್ರೇಮ ಭಂಗವಾಗಲಿದೆ. ಆರ್ಥಿಕವಾಗಿ ಆಗಾಗ ಖರ್ಚುವೆಚ್ಚಗಳು ಅಧಿಕವಾಗಲಿವೆ. ವಾಹನ ಚಾಲನೆಯಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ. ದಿನಸಿ ವ್ಯಾಪಾರಿಗಳಿಗೆ ಅಧಿಕ ಲಾಭ, ಮನೇಲಿ ಶುಭ ಕಾರ್ಯ, ಆದಾಯಕ್ಕಿಂತ ಖರ್ಚು ಹೆಚ್ಚು, ಅನ್ಯ ಜನರಲ್ಲಿ ಕಲಹ, ಮನಃಕ್ಲೇಷ.

ಕಟಕರಾಶಿ
ಶಾರೀರಿಕ ಸ್ವತ್ಛತೆಗೆ ಗಮನಹರಿಸಬೇಕಾಗುತ್ತದೆ. ವಿದ್ಯಾರ್ಥಿಗಳ ಹೆಚ್ಚಿನ ಅಭ್ಯಾಸಗಳಿಗೆ ಸಕಾಲ. ಸದುಪಯೋಗಿಸಿಕೊಳ್ಳುವುದು. ಹಿರಿಯರಿಗೆ ಶ್ರೀ ದೇವರ ದರ್ಶನ ಭಾಗ್ಯವಿದೆ. ಅಮೂಲ್ಯ ವಸ್ತುಗಳ ಖರೀದಿ, ಬಹು ಧನ ಲಾಭ, ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಏರುಪೇರು, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾರ್ಥಿಗಳಲ್ಲಿ ಮುನ್ನಡೆ, ಮಾನಸಿಕ ಅಶಾಂತಿ.

ಸಿಂಹರಾಶಿ
ಸ್ವಪ್ರಯತ್ನದಿಂದ ಕಾರ್ಯ ಸಿದ್ಧಿ, ವ್ಯಾಪಾರ ವ್ಯವಹಾರಗಳು ಲಾಭದಾಯಕವಾಗಲಿವೆ. ಬಂಧುಮಿತ್ರರ ಆಗಮನ ಸಂತಸವಾಗಲಿದೆ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಒದಗಿಬರುತ್ತದೆ. ವ್ಯವಹಾರದಲ್ಲಿ ಮಾತಿನ ಚಕಮಕಿ, ರಾಜಕೀಯ ವ್ಯಕ್ತಿಗಳಿಗೆ ನಿಂದನೆ, ವಿವಾಹ ಯೋಗ, ನೆರೆಹೊರೆಯವರ ಬಳಿ ಸೌಜನ್ಯದಿಂದ ವರ್ತಿಸಿ, ತಾಳ್ಮೆಯಿಂದ ಯಶಸ್ಸು.

ಕನ್ಯಾರಾಶಿ
ರಿಯಲ್ ಎಸ್ಟೇಟ್‍ನವರಿಗೆ ಲಾಭ, ಪ್ರತಿಭೆಗೆ ತಕ್ಕ ಗೌರವ, ಅಧಿಕಾರ ಪ್ರಾಪ್ತಿ, ದೈನಂದಿನ ಬದುಕಿನಲ್ಲಿ ತುಸು ಚೇತರಿಕೆ ತರುತ್ತದೆ. ಕಾರ್ಯ ಕ್ಷೇತ್ರದಲ್ಲಿ ಅವಿವೇಕಿಗಳ ಮಾತಿಗೆ ಮರುಳಾಗದಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲಿತಾಂಶ ಸಿಗಲಿದೆ. ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಶತ್ರುತ್ವ ಹೆಚ್ಚಾಗುವುದು, ಸುಖ ಭೋಜನ.

ತುಲಾರಾಶಿ
ಸ್ತ್ರೀಯರಿಗೆ ಅನುಕೂಲ, ಉತ್ತಮ ಬುದ್ಧಿಶಕ್ತಿ, ಪ್ರೇಮಿಗಳಿಗೆ ಮದುವೆ ಅನಿವಾರ್ಯವಾಗಲಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಿದ್ದರೂ ಖರ್ಚುವೆಚ್ಚಗಳನ್ನು ನಿಯಂತ್ರಿಸಬೇಕಾಗುತ್ತದೆ. ಋಣ ಬಾಧೆ, ಅಧಿಕವಾದ ಖರ್ಚು, ಸುಳ್ಳು ಮಾತನಾಡುವುದು, ವಿರೋಧಿಗಳಿಂದ ತೊಂದರೆ, ಅಭಿವೃದ್ಧಿ ಕುಂಠಿತ, ಶತ್ರುಗಳ ಬಾಧೆ.

ವೃಶ್ಚಿಕರಾಶಿ
ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ನಂಬಿದ ಜನರಿಂದ ಮೋಸ, ಋಣ ಬಾಧೆ,ಸಾಂಸಾರಿಕವಾಗಿ ನಿಮ್ಮ ಮನಸ್ಸು ಸದಾ ಯೋಚಿಸುವಂತಾದೀತು. ಶುಭ ಕಾರ್ಯಗಳಿಗಾಗಿ ಓಡಾಟ ತರುತ್ತದೆ. ದಾಯಾದಿಗಳಿಂದ ದೂರವಿದ್ದಷ್ಟು ಉತ್ತಮವೆನ್ನಬಹುದು. ಹಿರಿಯರಲ್ಲಿ ಭಕ್ತಿ, ಓದಿನ ಹೆಚ್ಚು ಆಸಕ್ತಿ, ತೀರ್ಥಕ್ಷೇತ್ರಕ್ಕೆ ಹೋಗುವ ಮನಸ್ಸು.

ಧನಸ್ಸುರಾಶಿ
ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ನಿಮ್ಮ ಕೋಪತಾಪ, ಉದ್ವೇಗಗಳಿಗೆ ಮನಸ್ಸನ್ನು ಕಡಿವಾಣ ಹಾಕಿ ಹಿಡಿತದಲ್ಲಿ ಇಟ್ಟು ಕೊಳ್ಳಬೇಕಾಗುತ್ತದೆ. ಸಾರ್ವಜನಿಕ ಸೇವಾ ಕಾರ್ಯಗಳಲ್ಲಿ ಆಸಕ್ತಿ ತೋರಿಬಂದೀತು. ಅನಿರೀಕ್ಷಿತ ಧನ ಲಾಭ, ಪ್ರಯಾಣಕ್ಕೆ ಮನಸ್ಸು, ರೇಷ್ಮೆ ವ್ಯಾಪಾರಿಗಳಿಗೆ ಲಾಭ, ತಮ್ಮ ಕಷ್ಟಕ್ಕೆ ಪ್ರತಿಫಲ ಲಭಿಸುವುದು, ಮನಸ್ಸಿಗೆ ಸಂತೋಷದಾಯಕ.

ಮಕರರಾಶಿ
ಅನಾವಶ್ಯಕ ಮಾತುಗಳಿಂದ ದೂರವಿರಿ, ಆರೋಗ್ಯ ಭಾಗ್ಯಕ್ಕಾಗಿ ಹೆಚ್ಚಿನ ಜಾಗ್ರತೆ ವಹಿಸಿರಿ. ನಿಮ್ಮ ಕಾರ್ಯಕ್ಷೇತ್ರದ ಜವಾಬ್ದಾರಿಯನ್ನು ನೀವೇ ವಹಿಸಬೇಕಾಗುತ್ತದೆ. ಮಾತಾಪಿತೃಗಳ ಸಹಕಾರ ನಿಮಗಿರುತ್ತದೆ. ಮಾನಸಿಕ ವ್ಯಥೆ, ದುಷ್ಟ ಜನರಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಜಯ, ಸ್ಥಳ ಬದಲಾವಣೆ, ಉದ್ಯೋಗದಲ್ಲಿ ಬಡ್ತಿ.

ಕುಂಭರಾಶಿ
ಸಾಂಸಾರಿಕವಾಗಿ ಪರಸ್ಪರ ಕೊಡುವ ಮನೋಭಾವನೆಯಿಂದ ಒಂದು ತರಹದ ಹೇಳಲಾಗದ ಸಮಾಧಾನ ಸಿಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ಬುದ್ಧಿವಂತಿಕೆಯಿಂದ ಕೆಲಸಗಳಲ್ಲಿ ಜಯ, ಇಷ್ಟಾರ್ಥ ಸಿದ್ಧಿ, ಪ್ರಿಯ ಜನರ ಭೇಟಿ, ಕೃಷಿಯಲ್ಲಿ ಲಾಭ, ಸ್ತ್ರೀಯರಿಗೆ ಶುಭ, ಸ್ಥಿರಾಸ್ತಿ ಸಂಪಾದನೆ, ಕಾರ್ಯ ವಿಘಾತ.

ಮೀನರಾಶಿ
ಹೊಸ ವ್ಯವಹಾರದಿಂದ ಲಾಭ, ದ್ರವ್ಯ ಲಾಭ, ಸತ್ಯವನ್ನು ಬಿಚ್ಚು ಮಾತುಗಳಲ್ಲಿ ಹೇಳಿ ನಿಷ್ಠುರಕ್ಕೆ ಕಾರಣರಾಗದಿರಿ. ಆಗಾಗ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುವಿರಿ. ಹಿರಿಯರ ಬಾಳಿನ ಅನುಭವ ನಿಮಗೆ ಪಾಠವಾದೀತು. ಆರೋಗ್ಯ ವೃದ್ಧಿ, ಕ್ರಯ-ವಿಕ್ರಯಗಳಲ್ಲಿ ನಷ್ಟ, ವಾಹನ ರಿಪೇರಿ, ಅನ್ಯ ಜನರಲ್ಲಿ ವೈಮನಸ್ಸು, ಶತ್ರುಗಳ ಬಾಧೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular