ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 29-04-2020

ನಿತ್ಯಭವಿಷ್ಯ : 29-04-2020

- Advertisement -

ಮೇಷರಾಶಿ
ಸಮಸ್ಯೆಗಳನ್ನು ಜವಾಬ್ದಾರಿಯುತವಾಗಿ ಪರಿಹರಿಸಿಕೊಳ್ಳಿ. ಸಾಂಸಾರಿಕವಾಗಿ ಸದಸ್ಯರ ಬಗ್ಗೆ ಹೆಚ್ಚಿನ ಗಮನ ಇರಲಿ. ಆರ್ಥಿಕವಾಗಿ ನಿಮ್ಮ ಹಿಡಿತ ಬಲವಾಗಿರಲಿ. ವಾದ – ವಿವಾದಗಳಲ್ಲಿ ಎಚ್ಚರಿಕೆ, ಬಡ ವಿದ್ಯಾರ್ಥಿಗಳಿಗೆ ಹಣ ನೆರವು, ಮನೆಗೆ ಬಂಧುಗಳ ಆಗಮನ, ಅಮೂಲ್ಯ ವಸ್ತುಗಳ ಖರೀದಿ, ನೆಮ್ಮದಿಯ ವಾತಾವರಣ, ಈ ದಿನ ಶುಭ ಫಲ ಯೋಗ.

ವೃಷಭರಾಶಿ
ಇಲ್ಲ ಸಲ್ಲದ ಅಪವಾದ, ಗಣ್ಯ ವ್ಯಕ್ತಿಗಳ ಭೇಟಿ, ಸದಾ ಉದ್ವೇಗಕ್ಕೆ ಒಳಗಾಗುವುದನ್ನು ನಿಯಂತ್ರಿಸಿ ಕೊಳ್ಳಬೇಕಾಗುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಣೆ ಇರುತ್ತದೆ. ದೇಹಾರೋಗ್ಯವನ್ನು ಕಾಪಾಡಿಕೊಳ್ಳಿ. ಉದ್ಯೋಗಾವಕಾಶ ಪ್ರಾಪ್ತಿ, ಕೃಷಿಯಲ್ಲಿ ಸಾಧಾರಣ ಲಾಭ, ಹಣಕಾಸು ಸಮಸ್ಯೆ, ನಾನಾ ರೀತಿಯ ಆಲೋಚನೆ. ದಿನಾಂತ್ಯ ಶುಭ.

ಮಿಥುನರಾಶಿ
ದಾಂಪತ್ಯದಲ್ಲಿ ನೆಮ್ಮದಿ, ಪ್ರೀತಿ, ಗೊಂದಲಗಳಿಂದ ದೂರ ಉಳಿಯುವುದು ಉತ್ತಮ, ಅತಿಯಾದ ತಿರುಗಾಟ, ನಿರುದ್ಯೋಗಿಗಳಿಗೆ ಉದ್ಯೋಗಕ್ಕಾಗಿ ಒದ್ದಾಟ ತರಲಿದೆ. ದೂರ ಸಂಚಾರಕ್ಕೆ ಸಕಾಲವಲ್ಲ. ಹೂಡಿಕೆ ಲಾಭಕರವಾದೀತು. ಕೆಲಸಗಳಲ್ಲಿ ಹೆಚ್ಚಿನ ಉತ್ಸಾಹ, ಯೋಚಿಸಿ ನಿರ್ಧಾರ ಕೈಗೊಳ್ಳಿ.

ಕಟಕರಾಶಿ
ಚಿನ್ನಾಭರಣ, ಹಣ ಲಾಭ, ಇಷ್ಟಾರ್ಥ ಸಿದ್ಧಿಸುವುದು, ತಾತ್ಕಾಲಿಕ ಉದ್ಯೋಗದಲ್ಲೇ ಸಮಾಧಾನಪಡುವಂತಾದೀತು. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಗಾಗಿ ಓಡಾಟ ಹಾಗೂ ಧನವ್ಯಯ ವಾದೀತು. ಕಿರು ಸಂಚಾರವಿರುತ್ತದೆ. ದಾನ- ಧರ್ಮದಲ್ಲಿ ಆಸಕ್ತಿ ಹೆಚ್ಚು, ಕುಟುಂಬದಲ್ಲಿ ನೆಮ್ಮದಿ, ಪ್ರಯಾಣಕ್ಕೆ ಮನಸ್ಸು-ಅಡೆತಡೆ, ಶತ್ರುಗಳ ಬಾಧೆ.

ಸಿಂಹರಾಶಿ
ಕಾರ್ಯ ಕ್ಷೇತ್ರದಲ್ಲಿ ಒತ್ತಡ ಹೆಚ್ಚಾಗುವುದು, ಮಾಡದ ತಪ್ಪಿಗೆ ಶಿಕ್ಷೆ-ನಿಂದನೆ ಅನುಭವಿಸುವಿರಿ, ಮಾತಿನಿಂದ ನೀವು ಗೆಲ್ಲಬಹುದಾದರೂ ಮಾತೇ ನಿಮಗೆ ಮಾರಕವಾಗುತ್ತದೆ. ಕಾರ್ಯ ಒತ್ತಡದಿಂದ ದೇಹಾಯಾಸವಾಗುತ್ತದೆ. ವಿದ್ಯಾರ್ಥಿಗಳಿಗೆ ಶುಭ ವಾರ್ತೆ ಇದೆ. ಸ್ವಂತ ಉದ್ಯಮಸ್ಥರಿಗೆ ಲಾಭ, ಮನಸ್ಸಿನಲ್ಲಿ ನಕಾರಾತ್ಮಕ ಯೋಚನೆ.

ಕನ್ಯಾರಾಶಿ
ವಾಹನ ಯೋಗ, ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಅವಕಾಶಗಳು ಒದಗಿ ಬರಲಿವೆ. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕ ರೂಪದಲ್ಲಿರುತ್ತವೆ. ಆತ್ಮೀಯರ ಆಗಮನ, ಶರೀರದಲ್ಲಿ ಆಲಸ್ಯ, ಮನಸ್ಸಿನಲ್ಲಿ ಆತಂಕ, ಕೆಲಸ ಕಾರ್ಯಗಳಲ್ಲಿ ಭಾಗಿ, ಈ ದಿನ ಮಿಶ್ರಫಲ ಯೋಗ.

ತುಲಾರಾಶಿ
ಮಕ್ಕಳಿಗಾಗಿ ಹಣ ಖರ್ಚು, ಕೃಷಿಕರಿಗೆ, ಬೇಸಾಯದ ರೈತರಿಗೆ ಬೇಕಾದ ಅನುಕೂಲತೆಗಳು ಸರಕಾರದಿಂದ ಒದಗಿಬರುತ್ತವೆ. ಸಾಂಸಾರಿಕವಾಗಿ ನೆಮ್ಮದಿ ತರಲಿದೆ. ಸಂಚಾರದಲ್ಲಿ ಜಾಗ್ರತೆ ಇರಲಿ. ಆಕಸ್ಮಿಕ ಧನ ನಷ್ಟ, ಅಕಾಲ ಭೋಜನ, ಕೆಲಸ ಕಾರ್ಯಗಳಲ್ಲಿ ವಿಳಂಬ, ಶೀತ ಸಂಬಂಧಿತ ರೋಗ ಬಾಧೆ, ಆರೋಗ್ಯದ ಬಗ್ಗೆ ಆತಂಕ, ಈ ದಿನ ತಾಳ್ಮೆ ಅತ್ಯಗತ್ಯ.

ವೃಶ್ಚಿಕರಾಶಿ
ಯೋಗ್ಯ ವಯಸ್ಕರಿಗೆ ವೈವಾಹಿಕ ಪ್ರಸ್ತಾವಗಳು ಕಂಕಣಬಲಕ್ಕೆ ಪೂರಕವಾದೀತು. ಸಮಯೋಚಿತ ಪ್ರಜ್ಞೆ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಸರಕಾರಿ ಕೆಲಸದಲ್ಲಿ ಲಾಭ ತಂದೀತು. ಅತಿಯಾದ ಭಯ, ಆತಂಕ, ಮಾನಸಿಕ ವ್ಯಥೆ, ಹಿತ ಶತ್ರುಗಳಿಂದ ತೊಂದರೆ, ಹಣಕಾಸು ಚೇತರಿಕೆ, ಸಾಲ ಬಾಧೆ ಕಾಡುವುದು, ಅತಿಯಾದ ಕೋಪದಿಂದ ಅನರ್ಥ, ಅನ್ಯರಲ್ಲಿ ಕಲಹ ಮಾಡಿಕೊಳ್ಳುವ ಮನಸ್ಥಿತಿ.

ಧನಸ್ಸುರಾಶಿ
ಹಣಕಾಸು ಲಾಭ, ಸಾಂಸಾರಿಕವಾಗಿ ಸಣ್ಣಪುಟ್ಟ ವಿಚಾರದಲ್ಲಿ ಭಿನ್ನಾಭಿಪ್ರಾಯ ತಂದೀತು. ವಿದ್ಯಾರ್ಥಿಗಳಿಗೆ ಸಮಾಧಾನಕರವಾದ ಫ‌ಲಿತಾಂಶ ಸಿಗಲಿದೆ. ಸಾಂಸಾರಿಕವಾಗಿ ದಾಯಾದಿಗಳ ಬಗ್ಗೆ ಅನಾವಶ್ಯಕವಾಗಿ ಕಲಹಕ್ಕೆ ಕಾರಣರಾಗದಿರಿ. ಅನಗತ್ಯ ವಾದ-ವಿವಾದ, ನಾನಾ ವಿಚಾರಗಳಲ್ಲಿ ಆಸಕ್ತಿ, ನೆಮ್ಮದಿ ಇಲ್ಲದ ಜೀವನ, ಅನ್ಯರಲ್ಲಿ ವೈಮನಸ್ಸು, ಕುಟುಂಬದಲ್ಲಿ ಅಹಿತಕರ ವಾತಾವರಣ.

ಮಕರರಾಶಿ
ಪರರಿಂದ ತೊಂದರೆ, ವ್ಯಾಪಾರಿಗಳಿಗೆ ಚೇತರಿಕೆ ತರಲಿದೆ. ಸಣ್ಣ ಸಣ್ಣ ಅಡಚಣೆಗಳು ತೋರಿಬಂದರೂ ಕಾರ್ಯ ಸಾಧನೆ ನಿಶ್ಚಿತ ರೂಪದಲ್ಲಿರುತ್ತದೆ. ಒಮ್ಮೊಮ್ಮೆ ಅನಾವಶ್ಯಕವಾಗಿ ಉದಾಸೀನತೆಯನ್ನು ತೋರಲಿದ್ದೀರಿ. ಜಾಗ್ರತೆ ಮಾಡಿರಿ. ಉನ್ನತ ಸ್ಥಾನಮಾನ, ವೃಥಾ ತಿರುಗಾಟ, ದ್ರವ್ಯ ಲಾಭ, ಟ್ರಾವೆಲ್ಸ್ ನವರಿಗೆ ನಷ್ಟ, ಋಣ ಬಾಧೆ ಕಾಡುವುದು.

ಕುಂಭರಾಶಿ
ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ಸುಖ ಭೋಜನ ಪ್ರಾಪ್ತಿ, ಶತ್ರುಗಳ ಬಾಧೆ, ಸಾಂಸಾರಿಕವಾಗಿ ಮನದನ್ನೆಯ ಮಾತುಕಾರ್ಯ ಸಾಧನೆಗೆ ಅನುಕೂಲವಾಗಲಿದೆ. ವೃತ್ತಿರಂಗದಲ್ಲಿ ಒತ್ತಡದ ಕಾರ್ಯಸಾಧನೆಯಿಂದ ಕೋಪತಾಪಗಳಿಗೆ ಕಾರಣರಾಗುವಿರಿ. ಆರ್ಥಿಕವಾಗಿ ಧನಾಗಮನವಿದೆ. ಸ್ತ್ರೀಯರಿಗೆ ಶುಭ ಫಲ, ಚಂಚಲ ಮನಸ್ಸು.

ಮೀನರಾಶಿ
ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ, ಆಕಸ್ಮಿಕ ಅಧಿಕ ಖರ್ಚು, ಇಲ್ಲ ಸಲ್ಲದ ಅಪವಾದ, ಮಂಗಳ ಕಾರ್ಯಗಳಲ್ಲಿ ಭಾಗಿ, ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲಿತಾಂಶದಿಂದ ಮುನ್ನಡೆಗೆ ಸಾಧಕವಾಗಲಿದೆ. ಆಗಾಗ ಶ್ರೀದೇವತಾ ದರ್ಶನ ಭಾಗ್ಯ ಒದಗಿ ಬರಲಿದೆ. ದಾಯಾದಿಗಳಿಂದ ಕಿರಿಕಿರಿಯು ತೋರಿ ಬಂದೀತು. ಸುಧಾರಿಸಿಕೊಳ್ಳಿರಿ. ಮನೆ ದೇವರ ಅನುಗ್ರಹದಿಂದ ಶುಭ, ಸಮಾಧಾನದ ದಿನ ನಿಮ್ಮದಾಗುವುದು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular