ಸೋಮವಾರ, ಏಪ್ರಿಲ್ 28, 2025
HomehoroscopeToday Horoscope : ಹಣಕಾಸಿನ ವಿಚಾರದಲ್ಲಿ ಈ ರಾಶಿಯವರು ಎಚ್ಚರವಾಗಿರಿ

Today Horoscope : ಹಣಕಾಸಿನ ವಿಚಾರದಲ್ಲಿ ಈ ರಾಶಿಯವರು ಎಚ್ಚರವಾಗಿರಿ

- Advertisement -

ಮೇಷರಾಶಿ
ಆರ್ಥಿಕ ವಿಚಾರದಲ್ಲಿ ಅಭಿವೃದ್ದಿ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ನೆಮ್ಮದಿ, ಹಳೆಯ ಸ್ನೇಹಿತರ ಭೇಟಿ, ಮಕ್ಕಳಿಂದ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಕಾನೂನುಬಾಹಿರ ಚಟುವಟಿಕೆಗಳು, ಧಾರ್ಮಿಕ ಕಾರ್ಯಗಳಲ್ಲಿ ಅಡೆತಡೆ.

ವೃಷಭರಾಶಿ
ಆಸ್ತಿ ವಿಚಾರದಲ್ಲಿ ಶುಭಸುದ್ದಿ, ಸರಕಾರಿ ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಕಾರ್ಯವೈಖರಿಂದ ಸ್ಥಾನಮಾನ, ಸಂಗಾತಿಯಿಂದ ನೋವು ಮತ್ತು ನಿರಾಸೆ, ಆಕಸ್ಮಿಕ ಘಟನೆ ಮರುಕಳಿಸು ವುದು, ಅಧಿಕ ನಷ್ಟ, ಯಂತ್ರೋಪಕರಣಗಳಿಂದ ಪೆಟ್ಟು.

ಮಿಥುನರಾಶಿ
ವ್ಯವಹಾರದಲ್ಲಿ ದಾಕ್ಷಿಣ್ಯದಲ್ಲಿ ಸಿಕ್ಕಿ ಹಾಕಿಕೊಳ್ಳುವಿರಿ, ಮಾತಿನಲ್ಲಿ ಸಹನೆ, ಎಚ್ಚರಿಕೆ ಅಗತ್ಯ, ಕಾರ್ಯದೊತ್ತಡ ಎದುರಾದೀತು, ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರಿಂದ ಸಂಕಷ್ಟ, ಪಾಲುದಾರಿಕೆಯಲ್ಲಿ ನಷ್ಟ, ಸಂಗಾತಿಯಿಂದ ನೋವು.

ಕರ್ಕಾಟಕರಾಶಿ
ಆಸ್ತಿ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ, ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ, ಆರ್ಥಿಕ ನಷ್ಟ, ಸ್ವಯಂಕೃತಾಪರಾಧದಿಂದ ನೋವು, ಅವಕಾಶಗಳು ಕೈ ತಪ್ಪುವುದು, ಅಧಿಕಾರಿಗಳಿಂದ ಸಮಸ್ಯೆ.

ಸಿಂಹರಾಶಿ
ದಾಂಪತ್ಯ ಜೀವನದಲ್ಲಿ ನೆಮ್ಮದಿ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ದೃಢ ನಿರ್ಧಾರದಿಂದ ಕಾರ್ಯದಲ್ಲಿ ಗೆಲುವು, ಉದ್ಯೋಗ,ವ್ಯವಹಾರದಲ್ಲಿ ಜಯ, ಅನಿರೀಕ್ಷಿತ ಪ್ರಯಾಣ, ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಯಶಸ್ಸು, ಭೂ ವ್ಯವಹಾರಗಳಿಂದ ಧನಾಗಮನ.

ಕನ್ಯಾರಾಶಿ
ಉದ್ಯೋಗದಲ್ಲಿ ನಿರೀಕ್ಷಿತ ಸ್ಥಾನಮಾನ, ಆಸ್ತಿ ವಿಚಾರದಲ್ಲಿ ಧನವ್ಯಯ, ದೂರ ಪ್ರಯಾಣದಿಂದ ಕಾರ್ಯದಲ್ಲಿ ಗೆಲುವು, ಆಕಸ್ಮಿಕ ಅಪಘಾತ ಎಚ್ಚರಿಕೆ, ಬಂಧು ಬಾಂಧವರಿಂದ ನಷ್ಟ, ಪಿತ್ರಾರ್ಜಿತ ಆಸ್ತಿ ಸಮಸ್ಯೆ, ಕೋರ್ಟ್ ಮೆಟ್ಟಿಲೇರುವ ಸಂದರ್ಭ.

ತುಲಾರಾಶಿ
ವಿದ್ಯಾರ್ಥಿಗಳಿಗೆ ಶುಭಫಲ, ದಾಂಪತ್ಯದಲ್ಲಿ ಸುಖವೃದ್ದಿ, ಹೊಸ ಹೂಡಿಕೆಯಿಂದ ಲಾಭ, ಅಧಿಕ ಧನನಷ್ಟ, ಸಂಗಾತಿಯಿಂದ ನೋವು, ಪಾಲುದಾರಿಕೆಯಲ್ಲಿ ಲಾಭ, ಕೆಲಸ ಕಾರ್ಯದ ನಿಮಿತ್ತ ಪ್ರಯಾಣ.

ಇದನ್ನೂ ಓದಿ : ನಾಗರ ಪಂಚಮಿ ಪೂಜಾ ಮಹತ್ವ ನಿಮಗೆ ಗೊತ್ತಾ

ಧನಸ್ಸುರಾಶಿ
ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ, ಸಾಂಸಾರಿಕವಾಗಿ ಸುಖ, ಪ್ರೀತಿ ಪ್ರೇಮ ವಿಷಯದಲ್ಲಿ ಜಯ, ಮಕ್ಕಳಿಂದ ಅನುಕೂಲ, ಗರ್ಭಿಣಿಯರಿಗೆ ಎಚ್ಚರಿಕೆ, ದೇವತಾ ಕಾರ್ಯಗಳಲ್ಲಿ ತೊಡಗುವಿರಿ, ತಂದೆಯಿಂದ ಲಾಭ, ಪ್ರಯಾಣದಲ್ಲಿ ಅನುಕೂಲ.

ವೃಶ್ಚಿಕರಾಶಿ
ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಕೃಷಿ ಕಾರ್ಯದಲ್ಲಿ ಗೆಲುವು, ಮನೆಯಲ್ಲಿ ಧಾರ್ಮಿಕ ಕಾರ್ಯಕ್ಕೆ ಚಿಂತನೆ, ಸದಾ ಕ್ರೀಯಾಶೀಲರಾಗಿರುವಿರಿ, ಉದ್ಯೋಗದಿಂದ ಧನಾಗಮನ, ಮೇಲಾಧಿಕಾರಿಗಳಿಂದ ಪ್ರಶಂಸೆ, ಗೌರವಕ್ಕೆ ಧಕ್ಕೆ, ವ್ಯವಹಾರದಲ್ಲಿ ಸಮಸ್ಯೆ.

ಮಕರರಾಶಿ
ದೂರ ಪ್ರಯಾಣ, ದೇಹಾಯಾಸ, ಆರೋಗ್ಯದಲ್ಲಿ ಚೇತರಿಕೆ, ಚತರತೆಯಿಂದ ಅಧಿಕ ಧನಸಂಪಾದನೆ, ಕೋರ್ಟ್ ಮೆಟ್ಟಿಲೇರುವ ಸಂದರ್ಭ, ವೇಗದ ಚಾಲನೆಯಿಂದ ಸಮಸ್ಯೆ, ನಿದ್ರಾಭಂಗ, ಉನ್ನತ ಅಧಿಕಾರಿಗಳಿಂದ ಸಮಸ್ಯೆ, ಪರಿಹಾರ ಹೆಣ್ಣುಮಕ್ಕಳಿಗೆ ಮಲ್ಲಿಗೆ ಹೂವನ್ನು ನೀಡಿ.

ಕುಂಭರಾಶಿ
ಉದ್ಯೋಗದಲ್ಲಿ ನಿರೀಕ್ಷೆಗೂ ಮೀರಿದ ಗೆಲುವು, ಹೊಸ ಒಪ್ಪಂದಕ್ಕೆ ಸಹಿ ಹಾಕುವಿರಿ, ದಾಂಪತ್ಯದಲ್ಲಿ ಸುಖ, ಆಧ್ಯಾತ್ಮದ ಕಡೆಗೆ ಒಲವು, ಕಾರ್ಯಚಟುವಟಿಕೆಯಿಂದ ಕೂಡಿದ ದಿನ, ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ, ಉದ್ಯೋಗ ಲಾಭ.

ಮೀನರಾಶಿ
ಹಿರಿಯರ ಆರೋಗ್ಯದಲ್ಲಿ ಚೇತರಿಕೆ, ವಿದ್ಯಾರ್ಥಿಗಳಿಗೆ ಶುಭ ಸುದ್ದಿ, ಉದ್ಯೋಗದ ನಿಮಿತ್ತ ದೂರ ಪ್ರಯಾಣ, ಮನೆಯಲ್ಲಿ ಮಂಗಲ ಕಾರ್ಯ, ಮಕ್ಕಳಿಂದ ಧನಾಗಮನ, ಪ್ರಯಾಣ ದಲ್ಲಿ ಅಡೆತಡೆ, ತಂದೆಯಿಂದ ನೋವು, ಆರೋಗ್ಯದಲ್ಲಿ ವ್ಯತ್ಯಾಸ, ಮನೆಯ ವಾತಾವರಣದಲ್ಲಿ ಆತಂಕ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular