ಮಂಡ್ಯ : ಕೃಷ್ಣರಾಜಪೇಟೆ ಸಂತೇಬಾಚಹಳ್ಳಿ ಹೋಬಳಿ ಬಿಲ್ಲೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಜೆ.ಡಿ.ಎಸ್ ಬೆಂಬಲದಿಂದ ಅಧ್ಯಕ್ಷರಾಗಿ ಬಿ.ಬಿ.ಶ್ರೀನಿವಾಸ್ ಹಾಗೂ ಉಪಾಧ್ಯಕ್ಷರಾಗಿ ಗೌರಮ್ಮ ರಾಮೇಗೌಡರವರನ್ನು ಚುನಾವಣಾ ಅಧಿಕಾರಿಯಾದ ಹರೀಶ್ ರವರು ಘೋಷಣೆ ಮಾಡಿದರು. ಇದೇ ಸಂದರ್ಭದಲ್ಲಿ ನೂತನ ಅದ್ಯಕ್ಷರಿಗೆ ಹಾಲು ಉತ್ಪಾದಕ ಸಹಕಾರ ಸಂಘದ ನಿರ್ದೇಶಕರು ಸನ್ಮಾನಿಸಿ ಸಿಹಿ ತಿನ್ನಿಸಿ ಶುಭಕೋರಿದರು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಸದಸ್ಯರಾದ ರಾಜಾಹುಲಿ ದಿನೇಶ್, ಗ್ರಾಮಪಂಚಾಯತ್ ಸದಸ್ಯರಾದ ಮಂಜಮ್ಮ, ವಸಂತಮ್ಮ, ಊಟಿ ವೆಂಕಟೇಶ್, ಪಚಣ್ಣನ ನಂಜಪಣ್ಣ, ಕಾರ್ಯದರ್ಶಿ ದೊಡ್ಡೇಗೌಡ, ನಾಗೇಂದ್ರಣ್ಣ,ಸ್ವಾಮಿ ಹಾಗೂ ಎಲ್ಲ ಸದಸ್ಯರುಗಳು ಉಪಸ್ಥಿತರಿದ್ದರು.