ಮಂಡ್ಯ : ಜಿಲ್ಲೆಯ ಜನರ ಜೀವನಾಡಿಯಾಗುವ ಪಾಂಡವಪುರ ಮತ್ತು ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ ಎಂದು ನೂತನ ಸಚಿವ ನಾರಾಯಣ ಗೌಡ ಅವರಿಗೆ ಮಾಜಿ ಸ್ಪೀಕರ್ ಮಂಡ್ಯದ ಗಾಂಧಿ ಕೃಷ್ಣ ಅವರು ಆಗ್ರಹಿಸಿದ್ದಾರೆ. ನೂತನ ಸಚಿವರನ್ನು ಆಶೀರ್ವದಿಸಿದ ಕೃಷ್ಣ ಅವರು, ಜನಪರವಾಗಿ ದಕ್ಷತೆಯಿಂದ ಆಡಳಿತ ಮಾಡಿ ಗೌಡ್ರೇ ನಿಮಗೆ ಒಳ್ಳೇದಾಗಲಿ. ಒಳ್ಳೆಯ ಸಿಬ್ಬಂಧಿಗಳನ್ನು ಆಪ್ತಸಹಾಯಕರನ್ನಾಗಿ ಇಟ್ಟುಕೊಳ್ಳಿ, ಕಷ್ಟ ಹೇಳಿಕೊಳ್ಳಲು ಬರುವ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ದೊರಕಿಸಿಕೊಡಿ ಎಂದು ಕೃಷ್ಣ
ಕಿವಿಮಾತು ಹೇಳಿದರು. 25 ವರ್ಷಗಳ ನಂತರ ಕೆ.ಆರ್.ಪೇಟೆಯಿಂದ ಸಚಿವರಾಗಿದ್ದೀರಿ ನನಗೂ ಸಂತೋಷವಾಗಿದೆ. ಜಿಲ್ಲೆಯ ಅಭಿವೃದ್ದಿ ಮಾಡಿ ನಾನು ಆರು ತಿಂಗಳು ಕಾಲ ಕಾದು ನೋಡ್ತೀನಿ. ಜನಪರ ಅಭಿವೃದ್ಧಿಪೂರಕವಾದ ಕಾರ್ಯಕ್ರಮಗಳು ಅನುಷ್ಠಾನವಾಗದಿದ್ದರೆ ನಾನೇ ಟೀಕೆ ಮಾಡ್ತೀನಿ. ಕಾದು ನೋಡೋಣ ಎಂದು ನಾರಾಯಣಗೌಡರಿಗೆ ಕೃಷ್ಣ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಮಾಜಸೇವಕ ಜಯದೇವ್, ತಾಲೂಕು ಪಂಚಾಯತಿ ಮಾಜಿಅಧ್ಯಕ್ಷ ಬಿ. ಜವರಾಯಿಗೌಡ, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021