ಭಾನುವಾರ, ಏಪ್ರಿಲ್ 27, 2025
HomeeducationSchool reopens in Karnataka : ರಾಜ್ಯದಾದ್ಯಂತ ಇಂದು ಶಾಲಾರಂಭ : ಮೊದಲ ದಿನ ಹೇಗಿತ್ತು...

School reopens in Karnataka : ರಾಜ್ಯದಾದ್ಯಂತ ಇಂದು ಶಾಲಾರಂಭ : ಮೊದಲ ದಿನ ಹೇಗಿತ್ತು ಮಕ್ಕಳ ಸಂಭ್ರಮ

- Advertisement -

ಬೆಂಗಳೂರು : ರಾಜ್ಯದಾದ್ಯಂತ ಇಂದಿನಿಂದ ಎಲ್ಲಾ ಸರಕಾರಿ ಶಾಲೆಗಳು (School reopens in Karnataka) ಪುನಾರಂಭಗೊಂಡಿದ್ದು, ಬೇಸಿಗೆ ರಜೆಯನ್ನು ಎಂಜಾಯ್‌ ಮಾಡುತ್ತಿದ್ದ ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಿದ್ದಾರೆ. ಈಗಾಗಲೇ ಶಾಲಾರಂಭಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT), ಕರ್ನಾಟಕವು 2023 ರ ಶೈಕ್ಷಣಿಕ ವರ್ಷಕ್ಕೆ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಸೇತು ಬಂಧ ತರಗತಿಗಳನ್ನು ನಡೆಸುವಂತೆ ಸೂಚನೆ ನೀಡಲಾಗಿದೆ. ಆದರೆ ಪಠ್ಯ ಪುಸ್ತಕ ವಿತರಣೆ ವಿಳಂಬಗಲಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಸರಕಾರಿ ಮತ್ತು ಖಾಸಗಿ ಸೇರಿದಂತೆ ಒಟ್ಟು 62229 ಶಾಲೆಗಳು ರಾಜ್ಯದಲ್ಲದೆ. ಇದರಲ್ಲಿ 25278 ಕಿರಿಯ ಪ್ರಾಥಮಿಕ ಶಾಲೆಗಳಿದ್ದು, ಹಿರಿಯ ಪ್ರಾಥಮಿಕ ಶಾಲೆಗಳು 36951 ಹಾಗೂ 15867 ಮಾಧ್ಯಮಿಕ ಶಾಲಗಳಿವೆ. ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿ ಆಗಮಿಸಿ ಕೆಲವು ಹಿರಿಯ ತರಗತಿ ಮಕ್ಕಳು, ಪೋಷಕರ ಸಹಕಾರದೊಂದಿಗೆ ಕಳೆದ ಒಂದೆರಡು ದಿನಗಳಿಂದ ಶಾಲೆ ಸ್ವಚ್ಛಗೊಳಿಸುವ ಕಾರ್ಯ ಮಾಡಿದ್ದಾರೆ. ಆಡಳಿತ ಮಂಡಳಿ ಶಾಲೆಗಳಲ್ಲಿ ತರಗತಿ ಚಟುವಟಿಕೆಗಳ ಆರಂಭಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಶಾಲೆಗಳು ಪ್ರಾರಂಭವಾಗುತ್ತುದ್ದಂತೆ 1 ರಿಂದ 3ನೇ ತರಗತಿಗೆ ಆರಂಭದ 30 ದಿನಗಳು ಹಾಗೂ 4ರಿಂದ 10ನೇ ತರಗತಿ ಮಕ್ಕಳೊಗೆ 15 ದಿನಗಳ ಕಾಲ ಸೇತು ಬಂಧ ಕಾರ್ಯಕ್ರಮ ನಡೆಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಎಲ್ಲಾ ಶಾಲೆಗಳಿಗೆ ತಿಳಿಸಿದೆ.

ಕರ್ನಾಟಕ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಬಿಡುಗಡೆ ಮಾಡಿರುವ ಬ್ರಿಡ್ಜ್ ಕೋರ್ಸ್ ಪ್ರಕಾರ, ಈ ಬ್ರಿಡ್ಜ್ ಕೋರ್ಸ್ ಮೆಟೀರಿಯಲ್ 2023-24ನೇ ಸಾಲಿನ ವಿವರವನ್ನು ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪ್ಲೋಡ್‌ ಮಾಡಲಾಗಿದೆ. ಹಾಗೆಯೇ ಮಕ್ಕಳ ವಯೋಮಾನ, ತರಗತಿಗೆ ಅನುಗುಣವಾಗಿ ಕಲಿಕಾ ಮಟ್ಟವನ್ನು ಗುರುತಿಸಿ ಮುಂದಿನ ಕಲಿಕೆಗೆ ಸಿದ್ದಗೊಳಿಸುವುದು ಸೇತುಬಂಧ ಶಿಕ್ಷಣದ ಉದ್ದೇಶವಾಗಿದೆ. ಅಷ್ಟೇ ಅಲ್ಲದೇ ಕಲಿಯುವವರ ಕಲಿಕೆಯ ಅಂತರವನ್ನು ಗುರುತಿಸಲು ಶಿಕ್ಷಕರಿಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ : Education Minister Madhu Bangarappa : ಶಾಲೆಯ ಪಠ್ಯ ಪುಸ್ತಕ ಪರಿಷ್ಕರಣೆ : ನೂತನ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು ?

ಆದರೆ, ತರಗತಿಗೆ ಪ್ರವೇಶಿಸುವ ಮೊದಲು ಅಗತ್ಯ ಮತ್ತು ಕಲಿಕೆಯ ಸೂಚನೆಗಳ ಪ್ರಕಾರ ಚಟುವಟಿಕೆಗಳನ್ನು ವಿನ್ಯಾಸಗೊಳಿಸಲು ಮತ್ತು ಮಾರ್ಪಡಿಸಲು ಫೆಸಿಲಿಟೇಟರ್‌ಗಳು ಸ್ವತಂತ್ರರಾಗಿದ್ದಾರೆ, ಫೆಸಿಲಿಟೇಟರ್‌ಗಳು ಪೂರ್ವ ಪರೀಕ್ಷೆ ಮತ್ತು ನಂತರದ ಪರೀಕ್ಷೆಯನ್ನು ನಡೆಸಬೇಕಾಗುತ್ತದೆ. ಅವರ ವರ್ಗದ ಮಟ್ಟ, ಫೆಸಿಲಿಟೇಟರ್‌ಗಳು ಅವರು ಅಗತ್ಯವಿರುವ TLM ಗಳೊಂದಿಗೆ ಸಿದ್ಧರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು ಮತ್ತುಆಯಾ ತರಗತಿ ಮಕ್ಕಳ ಕಲಿಕೆಯ ಫಲಿತಾಂಶಗಳ ಆಧಾರದ ಮೇಲೆ ತರಗತಿಯ ಪರಿಸ್ಥಿತಿಗೆ ಅನುಗುಣವಾಗಿ ಫೆಸಿಲಿಟೇಟರ್‌ಗಳು ತಮ್ಮದೇ ಆದ ಪೂರ್ವ/ನಂತರದ ಪರೀಕ್ಷಾ ಪ್ರಶ್ನೆಗಳನ್ನು ರಚಿಸಬೇಕು. ಇದ್ದರಿಂದಾಗಿ ಮಕ್ಕಳಿಗೆ ಮುಂದಿನ ತರಗತಿಗೆ ಪೂರಕವಾಗಲಿದೆ. ಒಟ್ಟಾರೆ ಮೊದಲ ದಿನದ ಶಾಲೆಗೆ ಹೋಗಲು ಒಂದಷ್ಟು ಮಕ್ಕಳಲ್ಲಿ ಉತ್ಸಾಹ ಇದ್ದರೆ, ಇನ್ನುಳಿದ ಮಕ್ಕಳಲ್ಲಿ ಒಂದು ರೀತಿಯ ಆತಂಕ ಮನೆ ಮಾಡಿರುತ್ತದೆ. ಏನೇ ಆಗಲಿ ಮಕ್ಕಳು ಓದುವಾಗ ಬರೆಯಬೇಕು, ಓದಲೇ ಬೇಕಾಗುತ್ತದೆ.

School reopens in Karnataka: School reopens today across the state: How was the celebration of the children on the first day?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular