ಸೋಮವಾರ, ಏಪ್ರಿಲ್ 28, 2025
HomeBreakingಕರಾವಳಿ ತೀರದಲ್ಲೀಗ ಆಸಿಡ್ ಮಳೆಯ ಭೀತಿ : ಅಷ್ಟಕ್ಕೂ ಶ್ರೀಲಂಕಾದ ಆತಂಕಕ್ಕೆ ಕಾರಣವೇನು ಗೊತ್ತಾ ..?

ಕರಾವಳಿ ತೀರದಲ್ಲೀಗ ಆಸಿಡ್ ಮಳೆಯ ಭೀತಿ : ಅಷ್ಟಕ್ಕೂ ಶ್ರೀಲಂಕಾದ ಆತಂಕಕ್ಕೆ ಕಾರಣವೇನು ಗೊತ್ತಾ ..?

- Advertisement -

ಕೊಲಂಬೋ : ಶ್ರೀಲಂಕಾದ ಕರಾವಳಿ ತೀರದಲ್ಲೀಗ ಆಸಿಡ್ ಮಳೆ ಸುರಿಯುವ ಸಾಧ್ಯತೆಯಿದೆ. ಹವಾಮಾನ ಇಲಾಖೆ ಹಾಗೂ ಪರಿಸರ ಇಲಾಖೆ ಈ ಕುರಿತು ಎಚ್ಚರಿಕೆಯನ್ನು ನೀಡಿದೆ. ಇದರಿಂದಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದೊಂದು ವಾರ ಕೊಲಂಬೊದ ಸಮುದ್ರ ತೀರದಲ್ಲಿ ಸಿಂಗಾಪೂರದ ಸರಕು ಸಾಗಾಣೆ ಹಡಗಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು. ಹಡಗಿನ ಟ್ಯಾಂಕಿನಲ್ಲಿದ್ದ ಸುಮಾರು 325 ಮೆಟ್ರಿಕ್ ಟನ್ ಇಂಧನದ ಜೊತೆಗೆ 1486 ಟ್ಯಾಂಕರ್ ಗಳಲ್ಲಿ ನೈಟ್ರಿಕ್ ಆಸಿಡ್ ಸಾಗಿಸಲಾಗುತಿತ್ತು. ಹೀಗಾಗಿ ಬೆಂಕಿ ಕಾಣಿಸಿಕೊಂಡಾಗ ನೈಟ್ರೋಜನ್ ಆಸಿಡ್ ಹೊರ ಸೂಸಿದೆ. ಹೀಗಾಗಿ ಶ್ರೀಲಂಕಾ ಕರಾವಳಿ ತೀರದಲ್ಲೀಗ ಆಸಿಡ್ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

https://kannada.newsnext.live/lakhs-of-breast-milk-earning-how-much-do-you-know-for-this-mothers-milk/

ಗುಜರಾತ್‍ನ ಹಜೀರಾದಿಂದ ಕೆಮಿಕಲ್ ಹಾಗೂ ಕಾಸ್ಮೇಟಿಕ್ ಕಚ್ಚಾ ವಸ್ತುಗಳನ್ನು ಕೊಲಂಬೊ ತರುತ್ತಿದ್ದ ಸಿಂಗಾಪೂರ ಎಂವಿ ಎಕ್ಸ್‍ಪ್ರೆಸ್ ಪರ್ಲ್ ಹಡಗಿ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು. ಮಳೆಯಾಗುವ ಸಮಯದಲ್ಲಿಯೇ ಅನಿಲ ಸೋರಿಕೆಯಾಗಿರುವುದರಿಂದಾಗಿ ಕರಾವಳಿ ತೀರದ ಸುತ್ತಮುತ್ತಲಿನ ಪ್ರದೇಶದಲ್ಲಿನ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆಯನ್ನು ನೀಡಲಾಗಿದೆ. ಆಸಿಡ್ ಮಳೆಯಾಗುವ ಸಾಧ್ಯತೆ ಇರುವುದರಿಂದ ಜನ ಎಚ್ಚರ ವಹಿಸ ಬೇಕು ಎಂದು ಸಮುದ್ರ ಪರಿಸರ ರಕ್ಷಣಾ ಪ್ರಾಧಿಕಾರದ ಮುಖ್ಯಸ್ಥ ದಾರ್ಶನಿ ಲಹಂಡಾಪುರ್ ತಿಳಿಸಿದ್ದಾರೆ.

https://kannada.newsnext.live/karnataka-lock-down-cm-yediyurappa-clarification/?doing_wp_cron=1622348077.0212559700012207031250
Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular