ಬೆಂಗಳೂರು: (Kadalekayi parishe) ಕಾರ್ತಿಕ ಮಾಸದಲ್ಲಿ ಬೆಂಗಳೂರಿನ ಬಸವನಗುಡಿಯ ಬಸವನಿಗೆ ನಡೆಸುವ ವಿಜೃಂಭಣೆಯ ಜಾತ್ರೆಯೇ ಈ ಕಡಲೆಕಾಯಿ ಪರಿಷೆ.
ಬಡವರ ಬಾದಮಿ ಎಂದೇ ಕರೆಸಿಕೊಳ್ಳುವ ಕಡಲೆಕಾಯಿ ಪರಿಷೆ ಬೆಗಳೂರಿನ ಬಸವನಗುಡಿಯಲ್ಲಿ ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಕಾರ್ತಿಕ ಸೋಮವಾರದ ಕೊನೆಯ ಸೋಮವಾರ ಅಂದರೇ ಇಂದಿನಿಂದ (ನವೆಂಬರ್ 20) ಮುಂದಿನ ಮೂರು ದಿನಗಳವೆರೆಗೆ ಬಸವನಗುಡಿಯ ದೊಡ್ಡ ಬಸವನಿಗೆ ಕಡಲೆಕಾಯಿ ಪರಿಷೆ ನಡೆಯುತ್ತದೆ. ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆದ ಕಡಲೆಕಾಯಿಯನ್ನು ರೈತರು ಪರಿಷೆಗೆ ಕಡಲೆಕಾಯಿಯನ್ನು ತಂದು ವ್ಯಾಪಾರ ನಡೆಸುತ್ತಾರೆ. ತಂದ ಕಡಲೆಕಾಯಿಯನ್ನು ಬಸವಣ್ಣನಿಗೆ ಅಭಿಷೇಕ ಮಾಡಲಾಗುತ್ತದೆ.
ಎರಡು ವರ್ಷಗಳಿಂದ ಕೊರೋನಾ ಕಾರಣದಿಂದ ಕಡಲೆಕಾಯಿ ಪರಿಷೆ (Kadalekayi parishe) ನಡೆಸದೇ ಇದ್ದಿದ್ದರಿಂದ ಈ ವರ್ಷ ಅತೀ ವಿಜೃಂಭಣೆಯಿಂದ ಕಡಲೆಕಾಯಿ ಪರಿಷೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಪ್ರಸಿದ್ಧ ಕಡಲೆಕಾಯಿ ಪರಿಷೆ ನಡೆಯುತ್ತಿದೆ. ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಪರಿಷೆಯಲ್ಲಿ ಲಕ್ಷಾಂತರ ಮಂದಿ ಭಾಗಿಯಾಗ್ತಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಕಡಲೆಕಾಯಿ ಪರಿಷೆಗೆ ಸ್ಥಳೀಯ ಶಾಸಕರಾದ ರವಿ ಸುಬ್ರಹ್ಮಣ್ಯ ಚಾಲನೆ ನೀಡಿದ್ರು. ಚಿಕ್ಕಪೇಟೆ MLA ಉದಯ್ ಗರುಡಾಚಾರ್, ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಮತ್ತಿತರರು ಹಾಜರಿದ್ದರು. ದೊಡ್ಡಗಣಪತಿಯ ದರ್ಶನ ಪಡೆಯಲು ಅಪಾರ ಪ್ರಮಾಣದಲ್ಲಿ ಜನರು ಬರ್ತಿದ್ದಾರೆ
ಈ ಕಡಲೆಕಾಯಿ ಪರಿಷೆ ಹಿಂದೆ ಐತಿಹಾಸಿಕ ಕತೆಯೂ ಕೂಡ ಇದೆ
ಪುರಾಣ ಕಾಲದಲ್ಲಿ ಈ ಪ್ರದೇಶ ರೈತರ ಮುಖ್ಯ ಕೃಷಿ ಆಧಾರಿತ ಪ್ರದೇಶವಾಗಿತ್ತು. ಇಲ್ಲಿ ಹೆಚ್ಚಾಗಿ ಕಡಲೆಕಾಯಿಯನ್ನು ಮುಖ್ಯ ಬೆಳೆಯಾಗಿ ಬೆಳೆಯುತ್ತಿದ್ದರು. ಪ್ರತಿವರ್ಷ ಉತ್ತಮ ಬೆಳೆಯನ್ನು ಕೂಡ ರೈತರು ಪಡೆಯುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ರಾತ್ರಿಯ ವೇಳೆ ಹಸುವೊಂದು ಎಲ್ಲಿಂದಲೋ ಬಂದು ಕಡಲೆಕಾಯಿ ಎಲ್ಲವನ್ನೂ ತಿಂದು ಬಿಡುತ್ತಿತ್ತು. ಪದೇ ಪದೇ ಈ ರೀತಿ ನಡೆಯುತ್ತಿದ್ದಾಗ ಒಂದು ದಿನ ರೈತರು ರಾತ್ರಿಯ ಸಮಯದಲ್ಲಿ ಅದನ್ನು ನೋಡಲು ಕಾದು ಕುಳಿತಾಗ ಅವರ ಕಣ್ಣಿಗೆ ಕಾಣಿಸಿದ್ದು ಬೃಹತ್ ಗಾತ್ರದ ಬಸವ. ಇದನ್ನು ನೋಡಿದ ರೈತರು ಇದು ಸಾಮಾನ್ಯ ಬಸವನಲ್ಲ, ಇದು ಸಾಕ್ಷಾತ್ ನಂದಿಯೇ ಇರಬುಹುದು ಎಂದು ಭಾವಿಸಿದ ರೈತರು, ಭಕ್ತಿ ಭಾವದಿಂದ ರೈತರು ನಂದಿಯನ್ನು ಬೇಡಿಕೊಂಡರು.
ದಯವಿಟ್ಟು ನಮ್ಮ ಬೆಳೆಯನ್ನೆಲ್ಲಾ ತಿಂದು ಹಾಳು ಮಾಡಬೇಡ. ಇದೇ ಜಾಗದಲ್ಲಿ ನಿನಗೊಂದು ದೇವಾಲಯವನ್ನು ನಿರ್ಮಿಸಿ ನಿನಗೆ ಭಕ್ತಿ ಶ್ರದ್ದೆಯಿಂದ ಪೂಜೆ ಮಾಡುತ್ತೇವೆ ಎಂದು ಕೇಳಿಕೊಂಡರು. ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರ ನಿನಗೆ ನಾವು ಬೆಳೆದ ಕಡಲೆಕಾಯಿಯನ್ನು ತಂದು ಅಭಿಷೇಕ ಮಾಡಿ ಕಡಲೆಕಾಯಿ ಪರಿಷೆಯನ್ನು ಮಾಡುತ್ತೇವೆ. ಆದ್ದರಿಂದ ನಮ್ಮ ಬೆಳೆಯನ್ನು ಹಾಳು ಮಾಡಬೇಡ, ಸಮೃದ್ದವಾಗಿ ಬೆಳೆಯನ್ನು ಬೆಳೆಯುವಂತೆ ಮಾಡು ಎಂದು ಕೆಳಿಕೊಳ್ಳುತ್ತಾರೆ. ರೈತರ ಮನವಿಯನ್ನು ಸ್ವೀಕರಿಸಿ ಅವರ ಇಚ್ಚೆಯಂತೆ ಬಸವ ಹಾಗೆ ಆಗಲಿ ಎಂದು ಅದೃಶ್ಯವಾಯಿತು. ಅದೇ ಪ್ರದೇಶದಲ್ಲಿ ಬಸವನ ದೇಗುಲವನ್ನು ನಿರ್ಮಾಣ ಮಾಡಿ ಅಂದಿನಿಂದ ಇಂದಿನವೆಗೂ ಕೊನೆಯ ಕಾರ್ತಿಕ ಸೋಮವಾರದಂದು ಕಡಲೆಕಾಯಿ ಪರಿಷೆ ನಡೆಯುತ್ತಲೇ ಬಂದಿದೆ.
ಇದನ್ನೂ ಓದಿ : Voter Id Case: ವೋಟರ್ ಐಡಿ ಅಕ್ರಮ ಪ್ರಕರಣ : ಚಿಲುಮೆ ಸಂಸ್ಥೆಯ ಇಬ್ಬರು ಅರೆಸ್ಟ್, ಅಕ್ರಮದಲ್ಲಿ ಶಾಸಕರು -ಸಚಿವರ ಹೆಸರು
ಇದನ್ನೂ ಓದಿ : Revision of Voter ID: ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪ: ಚಿಲುಮೆ ಕಚೇರಿಗೆ ಪೊಲೀಸರ ದಾಳಿ
ಇಲ್ಲಿ ಹಸಿ ಕಡಲೆಕಾಯಿ, ಒಣದಗಿದ ಕಡಲೆಕಾಯಿ, ಹುರಿದ ಕಡಲೆಕಾಯಿ, ಬೇಯಿಸಿದ ಕಡಲೆಕಾಯಿ, ಕಡಲೆಕಾಯಿ ಬೀಜಗಳು ವಿವಿಧ ರೀತಿಯಲ್ಲಿ, ವಿವಿಧ ರುಚಿಯಲ್ಲಿ ಲಭ್ಯವಿರುತ್ತದೆ. ಬೇರೆ ಕಡೆಗಳಿಗೆ ಹೋಲಿಸಿದರೆ ಇಲ್ಲಿ ಕಡಲೆಕಾಯಿಯ ಬೆಲೆ ತುಸು ಹೆಚ್ಚಾಗಿಯೇ ಇರುತ್ತದೆ. ಬೆಂಗಳೂರಿನಂತಹ ಹೈಟೆಕ್ ಸಿಟಿಯಲ್ಲಿ ಈ ಕಡಲೆಕಾಯಿ ಪರಿಷೆಯನ್ನು ನೋಡುವುದು ನಿಜಕ್ಕೂ ಕಣ್ಣಿಗೆ ಹಬ್ಬ.
ಕಾರ್ತಿಕ ಮಾಸದಲ್ಲಿ ವ್ಯಾಪಾರ ವಹಿವಾಟುಗಳು ಚೆನ್ನಾಗಿ ಆಗುತ್ತದೆ. ಅಷ್ಟೇ ಅಲ್ಲ ಈ ಮಾಸದಲ್ಲಿ ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕಿದರೂ ಅದು ಕೈಗೂಡುತ್ತದೆ. ಬಹು ಮುಖ್ಯವಾಗಿ ಶಿವನ ಸಂಪೂರ್ಣ ಸಾವಿಧ್ಯವಿರುವ ಈ ಮಾಸದಲ್ಲಿ ಶಿವನ ಪೂಜೆಯನ್ನು ಮಾಡುವುದರಿಂದ ಅವನ ರಕ್ಷಣೆ ನಮ್ಮ ಮೇಲೆ ಸದಾ ಇರುತ್ತದೆ ಎಂಬ ನಂಬಿಕೆ ರೈತರದ್ದು.
(Kadalekayi parishe) This Kadalekayi parishe is a flourishing fair held for Basavan of Basavanagudi, Bengaluru in the month of Kartika.
Badavara Badami, the groundnut parish in Basavanagudi, Bangalore, is held with great vigor, especially in the month of Kartika.