ರಾಜ್ಯದಲ್ಲಿ ನಡೆಯುತ್ತಿರುವ ಹಿಜಬ್ ವಿವಾದದ (hijab row) ಕುರಿತು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನಿ ಕಾರ್ಯಕರ್ತೆ ಮಲಾಲಾ ಯುಸೂಫ್ಜಾಯ್ ವಿರುದ್ಧ ಬಿಜೆಪಿ ನಾಯಕರಾದ ಕಪಿಲ್ ಮಿಶ್ರಾ ಹಾಗೂ ಮಜಿಂದರ್ ಸಿಂಗ್ ಸಿರ್ಸಾ ಕಿಡಿಕಾರಿದ್ದಾರೆ. ಮಲಾಲಾ ಯುಸೂಫ್ಜಾಯ್ ಟ್ವಿಟರ್ನಲ್ಲಿ ಹಿಜಬ್ ವಿವಾದವನ್ನು ಖಂಡಿಸಿದ್ದರು.
Muslim Girls getting killed in Afghanistan, Iran, Pakistan for not wearing Hijab
— Kapil Mishra (@KapilMishra_IND) February 8, 2022
Hindu, Sikh girls getting killed in Pakistan for just being hindu
She has never uttered a single word on real issues
Here she is running radical islamic jihadi agenda https://t.co/nGmckY9TXT
ಬಿಜೆಪಿ ನಾಯಕ ಕಪಿಲ್ ಮಿಶ್ರಾ ಕೂಡ ಟ್ವಿಟರ್ ಮೂಲಕವೇ ಮಲಾಲಾ ಯುಸೂಫ್ ಜಾಯ್ ಕಮೆಂಟ್ಗಳಿಗೆ ಕೌಂಟರ್ ನೀಡಿದ್ದಾರೆ. ಹಿಜಬ್ ಧರಿಸುತ್ತಿಲ್ಲ ಎಂಬ ಕಾರಣಕ್ಕೆ ಅಪ್ಘಾನಿಸ್ತಾನ, ಇರಾನ್ ಹಾಗೂ ಪಾಕಿಸ್ತಾನಗಳಲ್ಲಿ ಮುಸ್ಲಿಂ ಮಹಿಳೆಯರನ್ನು ಕೊಲ್ಲಲಾಗುತ್ತಿದೆ. ಹಿಂದೂ ಎಂಬ ಕಾರಣಕ್ಕೆ ಪಾಕಿಸ್ತಾನದಲ್ಲಿ ಹಿಂದೂ, ಸಿಖ್ ಯುವತಿಯರನ್ನು ಹತ್ಯೆಗೈಯಲಾಗುತ್ತಿದೆ. ಆದರೆ ಮಲಾಲಾ ಇಂತಹ ವಿಚಾರಗಳ ಬಗ್ಗೆ ಎಂದಿಗೂ ಧ್ವನಿ ಎತ್ತಲೇ ಇಲ್ಲ ಎಂದು ಕುಟುಕಿದ್ದಾರೆ.
Strange! @Malala never spoke on other significant issues like forced conversion of minor Hindu Sikh girls in Pakistan but today she is tweeting without verifying facts!! https://t.co/fEq8PDR0Yi
— Manjinder Singh Sirsa (@mssirsa) February 8, 2022
ಮತ್ತೊಬ್ಬ ಬಿಜೆಪಿ ನಾಯಕ ಮಜಿಂದರ್ ಸಿಂಗ್ ಸಿರ್ಸಾ ಕೂಡ ಈ ವಿಚಾರವಾಗಿ ಟ್ವೀಟ್ ಮಾಡಿದ್ದು ವಿಚಿತ್ರ..! ಮಲಾಲಾ ಎಂದಿಗೂ ಪಾಕಿಸ್ತಾನದಲ್ಲಿ ಹಿಂದೂ ಸಿಖ್ ಹುಡುಗಿಯರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದರ ಬಗ್ಗೆ ಎಂದಿಗೂ ಮಾತನಾಡಲೇ ಇಲ್ಲ. ಆದರೆ ಇಂದು ಈಕೆ ನಿಜ ವಿಷಯ ಅರ್ಥ ಮಾಡಿಕೊಳ್ಳದೇ ಟ್ವೀಟ್ ಮಾಡುತ್ತಿದ್ದಾಳೆ ಎಂದು ಕಿಡಿಕಾರಿದ್ದಾರೆ.
ನಿನ್ನೆ ರಾಜ್ಯದಲ್ಲಿ ನಡೆಯುತ್ತಿರುವ ಸಮವಸ್ತ್ರ ವಿವಾದ ವಿಚಾರವಾಗಿ ಟ್ವೀಟ್ ಮಾಡಿದ ಮಲಾಲಾ ಯುಸೂಫ್ಜಾಯ್, ಹುಡುಗಿಯರಿಗೆ ಹಿಜಬ್ ಧರಿಸದೇ ಶಾಲೆಗೆ ಬನ್ನಿ ಎಂದು ಹೇಳುತ್ತಿರುವುದು ನಿಜಕ್ಕೂ ಭಯಾನಕವಾಗಿದೆ. ಭಾರತೀಯ ನಾಯಕರು ಮುಸ್ಲಿಂ ಮಹಿಳೆಯರನ್ನು ಕಡೆಗಳಿಸುವುದನ್ನು ನಿಲ್ಲಿಸಬೇಕಿದೆ ಎಂದು ಟ್ವೀಟಾಯಿಸಿದ್ದರು.
Malala running radical jihadi agenda: BJP’s Kapil Mishra, Manjinder Sirsa on activist’s tweet on hijab row
ಇದನ್ನು ಓದಿ : ಸಮವಸ್ತ್ರ ವಿವಾದ ಪ್ರಕರಣ ಏಕಸದಸ್ಯ ಪೀಠದಿಂದ ವಿಸ್ತ್ರತ ಪೀಠಕ್ಕೆ ವರ್ಗಾವಣೆ : ಸದ್ಯಕ್ಕೆ ಹಿಜಬ್ ಬೇಡ ಎಂದ ಕೋರ್ಟ್
ಇದನ್ನೂ ಓದಿ :ಮಹಿಳೆಯರ ಬಟ್ಟೆಯಿಂದ್ಲೇ ಪುರುಷರು ಉದ್ರೇಕಿತರಾಗ್ತಾರೇ ! ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ