ನವದೆಹಲಿ : ಭಾರತದ ಹಲವು ರಾಜ್ಯಗಳಲ್ಲಿ ಅಗಸ್ಟ್ 19 ರವರೆಗೆ ಬಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದ್ದು, ಮುಂದಿನ ಮೂರು ದಿನಗಳ ಕಾಲ ಜನರು ಎಚ್ಚರಿಕೆಯಿಂದ ಇರುವಂತೆಯೂ ಹೇಳಿದೆ.
ಆಗಸ್ಟ್ 16 ರಂದು ಅಸ್ಸಾಂ ಮತ್ತು ಮೇಘಾಲಯದಲ್ಲಿ ಭಾರೀ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಸಬ್-ಹಿಮಾಲಯನ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ನಿನ್ನೆ ಬಾರೀ ಮಳೆ ಸುರಿದಿದೆ. ಮುಂದಿನ 3 ದಿನಗಳಲ್ಲಿ ಗಂಗಾನದಿಯ ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಜಾರ್ಖಂಡ್, ಕರಾವಳಿ ಆಂಧ್ರಪ್ರದೇಶ, ತೆಲಂಗಾಣ, ಪೂರ್ವ ಮಧ್ಯ ಪ್ರದೇಶ, ಛತ್ತೀಸ್ಗಡ ಮತ್ತು ವಿದರ್ಭದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.
ಅಗಸ್ಟ್ 17 ರವರೆಗೆ ಕರಾವಳಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. 16 ಮತ್ತು 17 ರಂದು ಜಾರ್ಖಂಡ್, ಪೂರ್ವ ಮಧ್ಯಪ್ರದೇಶದಲ್ಲಿಅಗಸ್ಟ್ 17 ರಿಂದ 19ರ ವರೆಗೆ, ಛತ್ತೀಸ್ಗಡದಲ್ಲಿ16 ರಿಂದ 19 ರವರೆಗೆ ಹಾಗೂ ವಿದರ್ಭದಲ್ಲಿ ಆಗಸ್ಟ್ 17 ಮತ್ತು 18 ರಂದು ಮಳೆಯಾಗುವ ಸಾಧ್ಯತೆಯಿದೆ. ಒಡಿಶಾದಲ್ಲಿ ಎರಡು ದಿನಗಳ ಕಾಲ ಮಳೆ ಸುರಿಯಲಿದ್ದು, ಕರ್ನಾಟದ ಕರಾವಳಿ ಭಾಗದಲ್ಲಿ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆಯನ್ನು ನೀಡಿದೆ.
ಇದನ್ನೂ ಓದಿ : ಹೈವೈನಲ್ಲಿ ಬಿಗಿಯಾಗಲಿದೆ ಕಣ್ಗಾವಲು…! ವೇಗವಾಗಿ ವಾಹನ ಚಲಾಯಿಸಿದ್ರೇ ಬೀಳುತ್ತೆ ದಂಡ…!!
ಇದನ್ನೂ ಓದಿ : ಭಾರತ ಸಂಸ್ಕೃತಿಯ ಚಿತ್ತಾರ ಮೂಡಿಸಿದ ಗೂಗಲ್ ಡೂಡಲ್
ಇದನ್ನೂ ಓದಿ : ಮನೆಯಲ್ಲಿ ನಿಗೂಢ ಸ್ಪೋಟ : ಐದಕ್ಕೂ ಅಧಿಕ ಮನೆಗಳಿಗೆ ಹಾನಿ