ನವದೆಹಲಿ : ಕೊರೊನಾ ವೈರಸ್ ಸೋಂಕಿನಿಂದ ಜೀವ ಕಳೆದು ಕೊಂಡವರು ಬಹುತೇಕರು. ಅದೇ ರೀತಿ ಈ ಕೊರೊನಾದಿಂದ ಕೆಲಸ ಕಳೆದು ಕೊಂಡವರು ಅನೇಕರು ಈಗಲೂ ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕೆಲಸ ಕಳೆದುಕೊಂಡ ನೌಕರರಿಗೆ ಕೆಂದ್ರ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ.
ಕೊರೊನಾ ಸಂದರ್ಭದಲ್ಲಿ ಕೆಲಸ ಕಳೆದುಕೊಂಡ ನೌಕರರಿಗೆ ರಾಜ್ಯ ವಿಮಾ ನಿಗಮ (ಇಸಿಎಸ್ ಐ) ಸದಸ್ಯರಿಗೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಮೂರು ತಿಂಗಳ ವೇತನ ನೀಡಲಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್ ಶುಕ್ರವಾರ ಮಾಹಿತಿ ನೀಡಿದರು. ಈ ಮೂಲಕ ಕೊರೋನಾ ಸಂದರ್ಭದಲ್ಲಿ ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ.
ಇದನ್ನೂ ಓದಿ: Swachh Bharat Mission : ಸ್ವಚ್ಛಭಾರತ್ ಮಿಷನ್ 2ನೇ ಹಂತದ ಯೋಜನೆಗೆ ಮೋದಿ ಚಾಲನೆ
ಕೋವಿಡ್-19 ರಿಂದ ಮೃತಪಟ್ಟ ಇಸಿಎಸ್ ಐ ಸದಸ್ಯರ ಕುಟುಂಬಗಳಿಗೆ ಸಚಿವಾಲಯವು ಆಜೀವ ಆರ್ಥಿಕ ನೆರವು ನೀಡಲಿದೆ ಎಂದು ಯಾದವ್ ಮಾಧ್ಯಮ ಸಂವಾದದಲ್ಲಿ ಹೇಳಿದರು. ಪ್ರತಿಯೊಂದು ರಾಜ್ಯದಲ್ಲೂ ‘ಕಾರ್ಮಿಕ ಸಂಹಿತೆ’ಯನ್ನು ರೂಪಿಸುವ ಕೆಲಸ ನಡೆಯುತ್ತಿದೆ. ಹೊಸ ಕಾರ್ಮಿಕ ಸಂಹಿತೆಗಳ ಅನುಷ್ಠಾನದ ಪ್ರಕ್ರಿಯೆ ನಡೆಯುತ್ತಿದೆ. ಹಲವಾರು ರಾಜ್ಯಗಳು ತಮ್ಮ ಸಂಹಿತೆಗಳನ್ನು ರೂಪಿಸಿವೆ. ಕಾರ್ಮಿಕ ಕ್ಕೆ ಸಂಬಂಧಿಸಿದ 29 ಕಾರ್ಮಿಕ ಕಾನೂನುಗಳನ್ನು 4 ಕೋಡ್ ಗಳಿಂದ ಬದಲಾಯಿಸಲಾಗಿದೆ ಎಂದು ಸಚಿವರು ಹೇಳಿದರು.
ಇ-ಶ್ರಮ್ ಪೋರ್ಟಲ್ ಗೆ ಸಂಬಂಧಿಸಿದಂತೆ, ಸುಮಾರು 400 ಅನಧಿಕೃತ ಮಾರಾಟಗಾರರ ವರ್ಗಗಳನ್ನು ಮಾಡಲಾಗಿದೆ. ಯಾವುದೇ ಮಾರಾಟಗಾರರು ಪೋರ್ಟಲ್ ನಲ್ಲಿ ತಮ್ಮನ್ನು ನೋಂದಾಯಿಸಬಹುದು ಎಂದು ಹೇಳಿದರು. ನಿರ್ಮಾಣ ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿ ವ್ಯಾಪಾರಿಗಳು ಮತ್ತು ಮನೆ ಕೆಲಸಗಾರರಂತಹ 38 ಕೋಟಿ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು.
(Good news from the Center for those who lost their jobs from Kovid-19)