ಇಂದೋರ್ : ಶಿಕ್ಷಣ ಪಡೆಯೋದು ಪ್ರತಿಯೊಬ್ಬರ ಮೂಲಭೂತ ಹಕ್ಕು. ವಿದ್ಯಾಭ್ಯಾಸಕ್ಕೆ ತಡೆಯೊಡ್ಡುವುದು ಅಪರಾಧ. ಹೀಗೆ ತನ್ನ ವಿದ್ಯಾಭ್ಯಾಸಕ್ಕೆ ತಡೆಯೊಡ್ಡಿದ ಪತಿ ಮಹಾಶಯನಿಗೆ ಮಹಿಳೆಯೋರ್ವರು ವಿಚ್ಚೇದನ ನೀಡಿದ್ದಾರೆ. ಮಹಿಳೆಯ ಪರ ನ್ಯಾಯಾಲಯ ಕೂಡ ನಿಂತಿದ್ದು, ಮಹಿಳೆಗೆ ಪ್ರತೀ ತಿಂಗಳು 10000 ರೂ.ಗಳ ನಿರ್ವಹಣಾ ಭತ್ಯೆಯನ್ನು (maintenance allowance) ಪಾವತಿಸುವಂತೆ ಆದೇಶಿಸಿದೆ.
ಸಿಧಿಯಾ ನಿವಾಸಿ ಸ್ನೇಹಪ್ರಭಾ ಎಂಬಾಕೆಗೆ 13 ನೇ ವಯಸ್ಸಿನಲ್ಲಿ ಪೋಷಕರು ವೀರೇಂದ್ರ ಅಗ್ನಿಹೋತ್ರಿ ಎಂಬಾತನ ಜೊತೆಗೆ ಮದುವೆ ಮಾಡಿಸಿದ್ದರು. ವಯಸ್ಕಳಾದ ನಂತರದಲ್ಲಿ ಆಕೆಯನ್ನುಗಂಡನ ಮನೆಗೆ ಕಳುಹಿಸಿಕೊಡಲಾಗಿತ್ತು. ಆದರೆ ಸ್ನೇಹಪ್ರಭಾ ಗಂಡನ ಮನೆಯಲ್ಲಿ ವಿದ್ಯಾಭ್ಯಾಸ ಪಡೆಯಲು ಮುಂದಾಗಿದ್ದಾರೆ. ಆದರೆ ಪತ್ನಿ ಶಿಕ್ಷಣ ಪಡೆಯೋದಕ್ಕೆ ಪತಿ ವೀರೇಂದ್ರ ಅಗ್ನಿಹೋತ್ರಿ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಸ್ನೇಹಪ್ರಭಾಗೆ ನಿರಂತರವಾಗಿ ದೈಹಿಕ ಹಾಗೂ ಮಾನಸಿಕ ಹಲ್ಲೆ ನಡೆಸೋದಕ್ಕೆ ಶುರು ಮಾಡಿದ್ದಾನೆ.
ಸ್ನೇಹ ಪ್ರಭಾ ರಾತ್ರಿಯ ವೇಳೆಯಲ್ಲಿ ಅಧ್ಯಯನ ನಡೆಸಲು ಮುಂದಾದ್ರೆ ಪತಿ ವೀರೇಂದ್ರ ಆಕೆಯ ಕೈಯಲ್ಲಿದ್ದ ಪುಸ್ತಕವನ್ನು ಕಸಿದು, ಮಲಗುವಂತೆ ಒತ್ತಾಯಿಸುತ್ತದ್ದ. ಶಿಕ್ಷಣಕ್ಕೆ ಸದಾ ತೊಂದರೆ ನೀಡುತ್ತಿದ್ದ ಪತಿಯ 2009ರಲ್ಲಿ ಪತಿಯ ಮನೆಯನ್ನು ತೊರೆದು ತವರು ಸೇರಿದ್ದಳು. 2018ರಲ್ಲಿ ಇಂದೋರ್ ಕೌಟುಂಬಿಕ ನ್ಯಾಯಾಲಯದಲ್ಲಿ (family court) ವಿಚ್ಛೇದನ ಕೋರಿ ಸ್ನೇಪ್ರಭಾ ಅರ್ಜಿ ಸಲ್ಲಿಸಿದ್ದರು.
ಕೌಟುಂಬಿಕ ನ್ಯಾಯಾಲಯದಲ್ಲಿ ಇಂದೋರ್ ಹೆಚ್ಚುವರಿ ಮುಖ್ಯ ನ್ಯಾಯಮೂರ್ತಿ ಪ್ರವೀಣಾ ವ್ಯಾಸ್ ಅವರು ಸ್ನೇಹಪ್ರಭಾ ಪ್ರಕರಣದ ಕುರಿತು ಸುದೀರ್ಘ ವಿಚಾರಣೆಯನ್ನು ನಡೆಸಿ ಮಹತ್ವದ ತೀರ್ಪು ನೀಡಿದೆ. ಅಧ್ಯಯನಕ್ಕೆ ಪತಿಯ ಅಡಚಣೆ ಹಾಗೂ ದೈಹಿಕ ಹಲ್ಲೆ ಮಾಡಿದ ಕ್ರೌರ್ಯದ (cruelty ) ಆಧಾರದ ಮೇಲೆ, ನ್ಯಾಯಾಲಯವು ಸ್ನೇಹಪ್ರಭಾ ಪರವಾಗಿ ತೀರ್ಪನ್ನು ನೀಡಿದೆ. ಇನ್ನು ಪತ್ನಿಗೆ ಪ್ರತೀ ತಿಂಗಳು 10000 ರೂ.ಗಳ ನಿರ್ವಹಣಾ ಭತ್ಯೆಯನ್ನು ನೀಡುವಂತೆ ಗಂಡನಿಗೆ ಆದೇಶಿಸಿತು.
ಇದನ್ನೂ ಓದಿ: ಸರಕಾರಿ ಹುದ್ದೆ ನೇಮಕಾತಿಗೆ ಅನುಕಂಪ ಬೇಡ, ಸಮಾನತೆ ಕೊಡಿ: ಸುಪ್ರೀಂ ಕೋರ್ಟ್
(To be educated A woman who divorced her husband!)