ಸೋಮವಾರ, ಏಪ್ರಿಲ್ 28, 2025
HomeNationalUthra Murder Case : ಹಾವಿನಿಂದ ಕಚ್ಚಿಸಿ ಪತ್ನಿಯ ಕೊಲೆ : ಆರೋಪಿ ದೋಷಿ ಎಂದ...

Uthra Murder Case : ಹಾವಿನಿಂದ ಕಚ್ಚಿಸಿ ಪತ್ನಿಯ ಕೊಲೆ : ಆರೋಪಿ ದೋಷಿ ಎಂದ ಕೋರ್ಟ್‌, ನಾಳೆ ಶಿಕ್ಷೆ ಪ್ರಕಟ

- Advertisement -

ಕೊಲ್ಲಂ : ದೇಶದಾದ್ಯಂತ ಸಂಚಲನ ಮೂಡಿಸಿದ್ದ ವಿಷಪೂರಿತ ಹಾವಿನಿಂದ ಕಚ್ಚಿಸಿ ಪತ್ನಿಯನ್ನು ಕೊಲೆಗೈದ ಕೇರಳದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿಯನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ್ದು, ಕೊಲ್ಲಂ ಆರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಬುಧವಾರ ಆರೋಪಿಗೆ ಶಿಕ್ಷಕೆಯನ್ನು ಪ್ರಕಟಿಸಲಿದೆ. ದೇವರನಾಡಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಕೊಲೆ ಪ್ರಕರಣವನ್ನು ಸಾಂದರ್ಭಿಕ ಸಾಕ್ಷ್ಯದ ಆಧಾರದ ಮೇಲೆ ತನಿಖೆ ನಡೆಸಲಾಗಿದ್ದು, ಇದೊಂದು ಅಪರೂಪದ ಪ್ರಕರಣವಾಗಿದೆ.

ಕೇರಳದ ಅಂಚಲ ಮೂಲದ ಉಥ್ರಾ (23 ವರ್ಷ) ಎಂಬಾಕೆಯೇ ಹಾವು ಕಡಿತದಿಂದ ಸಾವನ್ನಪ್ಪಿದ್ದ ಮಹಿಳೆ. ಕಳೆದ ಮೇ ತಿಂಗಳಲ್ಲಿ ತನ್ನ ಕೋಣೆಯಲ್ಲಿ ಮಲಗಿದ್ದ ಉಥ್ರಾ ನಿಗೂಢವಾಗಿ ಸಾವನ್ನಪ್ಪಿದ್ದಳು. ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಆಕೆಯ ಪತಿ ಸೂರಜ್‌ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆಯಲ್ಲಿ ಆತ ತಾನೇ ವಿಷ ಪೂರಿತ ಹಾವಿನಿಂದ ಕಚ್ಚಿಸಿ ಪತ್ನಿಯನ್ನು ಕೊಲೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣ ಕೊಲ್ಲಂ ಆರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಕಳೆದೊಂದು ವರ್ಷದಿಂದಲೂ ವಿಚಾರಣೆ ನಡೆಯುತ್ತಲೇ ಇತ್ತು. ಇದೀಗ ನ್ಯಾಯಾಲಯದ ನ್ಯಾಯಾಧೀಶರಾದ ಎಂ. ಮನೋಜ್ ಅವರು ಆರೋಪಿಗೆ ದೋಷಿ ಎಂದು ತೀರ್ಪು ನೀಡಿದ್ದಾರೆ. ಅಲ್ಲದೇ ಉಥ್ರಾ ಸಾವಿನಪ್ಪಿದ ಒಂದು ವರ್ಷ, 5 ತಿಂಗಳು ಮತ್ತು 4 ದಿನಗಳ ನಂತರ ಪ್ರಕರಣದ ತೀರ್ಪನ್ನು ಪ್ರಕಟಿಸಲಾಗುತ್ತದೆ.

ವರದಕ್ಷಿಣೆ, ಆಭರಣ, ಕಾರು, ಹಣ ಮತ್ತು ಆಸ್ತಿಯನ್ನು ಕಳೆದುಕೊಳ್ಳುವ ಭಯದಿಂದ ಸೂರಜ್ ಪತ್ನಿ ಉಥ್ರಾಳನ್ನು ಹಾವು ಇರಿದು ಕೊಂದಿದೆ. ದೋಷಾರೋಪ ಪಟ್ಟಿ ಸಲ್ಲಿಸಲಾ ಗಿದ್ದು, ಪ್ರಕರಣದ ದಾಖಲೆಯ ಸಮಯದಲ್ಲಿ ವಿಚಾರಣೆ ಪೂರ್ಣಗೊಂಡಿದೆ. ಉತ್ರಾ ಕಚ್ಚಿದ ಹಾವಿನ ಮರಣೋತ್ತರ ಪರೀಕ್ಷೆ ಮತ್ತು ನಾಗರ ಹಾವು ಬಳಸಿ ಡಮ್ಮಿ ಪರೀಕ್ಷೆ ನಡೆಸಲಾಯಿತು. ಏತನ್ಮಧ್ಯೆ, ಉತ್ರಾ ಅವರ ಪೋಷಕರು, ಆರೋಪಿಗಳು ಗರಿಷ್ಠ ಶಿಕ್ಷೆಯನ್ನು ಪಡೆಯುವ ನಿರೀಕ್ಷೆಯಿದೆ ಎಂದು ಹೇಳಿದರು.

ಇದನ್ನೂ ಓದಿ : ಮಹಿಳೆಯನ್ನು ಕಾಡಿಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ

ಮೇ 7, 2020 ರಂದು ಬೆಳಿಗ್ಗೆ ಉಥ್ರಾ ತನ್ನ ಮನೆಯ ಮಲಗುವ ಕೋಣೆಯಲ್ಲಿ ಹಾವು ಕಚ್ಚಿದ ನಂತರ ಶವವಾಗಿ ಪತ್ತೆಯಾಗಿದ್ದಳು. ನಾಗರ ಹಾವು ಕಚ್ಚಿ ಸಾವನ್ನಪ್ಪಿದ ಉಥ್ರಾ ಸಾವನ್ನಪ್ಪಿರುವ ಕುರಿತು ಪೋಷಕರಿಗೆ ಪತಿ ಸೂರಜ್‌ ಮಾಹಿತಿಯನ್ನು ನೀಡಿದ್ದ. ಆದರೆ ಪತಿಯ ಮನೆಯಲ್ಲಿ ಈ ಹಿಂದೊಮ್ಮೆ ಉಥ್ರಾಳಿಗೆ ಹಾವು ಕಡಿದಿತ್ತು. ಸತತವಾಗಿ ಎರಡು ಬಾರಿ ಹಾವು ಕಚ್ಚಿದೆ ಮತ್ತು ಎಸಿ ಕೋಣೆಯೊಳಗೆ ಹಾವು ಪತ್ತೆಯಾಗಿರುವುದು ಅನುಮಾನವನ್ನು ಮೂಡಿಸಿತ್ತು.ಇದೆ ಕಾರಣಕ್ಕೆ ಪೋಷಕರು ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿದ್ದರು.. ಜಿಲ್ಲಾ ಅಪರಾಧ ವಿಭಾಗದ ಪೊಲೀಸರು ಸೂರಜ್ ಮುರ್ಖಾನ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಲೇ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಪತ್ನಿಯನ್ನು ಸಾಯಿಸುವ ಸಲುವಾಗಿಯೇ ಸೂರಜ್‌ ಕಲ್ಲುವಟುಕ್ಕಲ್ ಚವರುಕಾವಿ ಎಂಬಲ್ಲಿ ಹಾವು ಹಿಡಿಯುವ ಸುರೇಶ ಎಂಬಾತನಿಂದ ಹಾವನ್ನು ಖರೀದಿ ಮಾಡಿದ್ದ. ಇದೇ ಕಾರಣದ ಹಿನ್ನೆಲೆಯಲ್ಲಿ ಸುರೇಶ್‌ ಎಂಬಾತನನ್ನು ಕೂಡ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಕೇರಳದಲ್ಲಿ ತಲ್ಲಣ ಮೂಡಿಸಿದ ಈ ಪ್ರಕರಣ ತೀವ್ರ ಕುತೂಹಲವನ್ನು ಮೂಡಿಸಿತ್ತು.

Firing of father from son in Mangalore

ನ್ಯಾಯಾಲಯದ ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಕೇರಳ ರಾಜ್ಯ ಪೊಲೀಸ್‌ ಮುಖ್ಯಸ್ಥ ಅನಿಶ್‌ ಕಾಂತ್‌ ಅವರು, ಆರೋಪಿಯನ್ನು ಸಾಂದರ್ಭಿಕ ಸಾಕ್ಷ್ಯದ ಮೂಲಕ ತಪ್ಪಿತಸ್ಥ ಎಂದು ತೀರ್ಪು ನೀಡಿರುವ ಅಪರೂಪದ ಪ್ರಕರಣ ಇದಾಗಿದೆ. ತನಿಖಾ ತಂಡ, ವಿಧಿವಿಜ್ಞಾನ ಪ್ರಯೋಗಾಲಯ, ಫೈಬರ್‌ ಡಾಟಾ, ಪ್ರಾಣಿಯ ಡಿಎನ್‌ಎ ಹಾಗೂ ಇತರ ಸಾಕ್ಷ್ಯಗಳನ್ನು ಪರಿಗಣಿಸಿ ಪೊಲೀಸರು ಪ್ರಕರಣವನ್ನು ಬೇಧಿಸಿದ್ದರು. ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕ ಹಾಗೂ ವೃತ್ತಿಪರವಾಗಿ ತನಿಖೆ ಮಾಡುವುದಕ್ಕೆ ಇದೊಂದು ಉತ್ತಮ ಉದಾಹರಣೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : 75 ಲಕ್ಷಕ್ಕೆ ಸಬ್‌ಇನ್ಸ್ಪೆಕ್ಟರ್‌ ಹುದ್ದೆ ! ತಂದೆ, ಮಗಳಿಗೆ ವಂಚಿಸಿದ ಸ್ನೇಹಿತ

ಇದನ್ನೂ ಓದಿ : ಪರೀಕ್ಷೆ ಬರೆದ ವಿದ್ಯಾರ್ಥಿನಿಯ ಬದುಕನ್ನೇ ಮುಗಿಸಿದ ಸಹಪಾಠಿ : ಪರೀಕ್ಷಾ ಕೊಠಡಿಯಲ್ಲಿ ನಡೆಯಿತು ಆಘಾತಕಾರಿ ಘಟನೆ

(Uthra Murder Case : Her husband Suraj has been convicted in connection with the murder of Uthra by a snake bite in Kerala)

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular