ಚೆನ್ನೈ: ಯಾರಿಗೆ ಆಗಲಿ ತಂದೆ, ತಾಯಿಯ ಅಗಲುವಿಕೆಯ ನೋವನ್ನು ಸಹಿಸಿಕೊಳ್ಳೋದಕ್ಕೆ ಆಗೋದಿಲ್ಲ. ಆದ್ರೆ ತಾಯಿ ಸತ್ತು 20 ದಿನಗಳೇ ಕಳೆದರೂ ಕೂಡ ಮಕ್ಕಳ ಮಾತ್ರ ತಾಯಿ ಸತ್ತಿಲ್ಲ, ವಾಪಾಸು ಬರ್ತಾಳೆ ಅಂತಿದ್ದಾರೆ. ಸಾಲದಕ್ಕೆ ತಾಯಿಯ ಶವವನ್ನು ಮನೆಯಲ್ಲಿಟ್ಟು 20 ದಿನಗಳಿಂದಲೂ ಪೂಜೆ ಸಲ್ಲಿಸುತ್ತಿದ್ದಾರೆ.
ತಮಿಳುನಾಡಿನ ದಿಂಡಿಗಲ್ ಪೊಲೀಸ್ ಠಾಣೆಯಲ್ಲಿ ಮಹಿಳಾ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ಇಂದಿರಾ ಎಂಬವರಿಗೆ ಕಿಡ್ನಿ ಸಮಸ್ಯೆ ಎದುರಾಗಿತ್ತು. ತೀವ್ರ ಆರೋಗ್ಯ ಸಮಸ್ಯೆಯಿಂದಾಗಿ ಕೆಲಸದಿಂದ ಸ್ವಯಂ ನಿವೃತ್ತಿಗಾಗಿ ಅರ್ಜಿಯನ್ನು ಸಲ್ಲಿಸಿದರು. ಇದಾದ ನಂತರ ಇಂದಿರಾ ಠಾಣೆಗೆ ಬಂದಿರಲಿಲ್ಲ. ಕೆಲ ದಿನಗಳ ಕಾಲ ಇಂದಿರಾ ಕೆಲಸಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಆಕೆಯ ಸಹೋದ್ಯೋ ಗಿಗಳು ಮನೆಗೆ ಮಾತಾಡಿಸಿಕೊಂಡು ಹೋಗುವುದಕ್ಕೆ ಬಂದಿದ್ದಾರೆ.
ಈ ವೇಳೆಯಲ್ಲಿ ಮಕ್ಕಳಿಬ್ಬರೂ ಕೂಡ ತಾಯಿ ಮಲಗಿದ್ದಾರೆ. ಅವರು ಏಳುವುದಿಲ್ಲ, ಎದ್ದರೆ ದೇವರು ಶಾಪ ಕೊಡ್ತಾರೆ ಅಂತಾ ಹೇಳಿದ್ದಾರೆ. ಸಹೋದ್ಯೋಗಿಗಳು ಮನೆಯ ಬಾಗಿಲ ಬಳಿಗೆ ಬರುತ್ತಿದ್ದಂತೆಯೇ ಮನೆಯ ಒಳಗಿಂದ ವಾಸನೆ ಬರೋದಕ್ಕೆ ಶುರುವಾಗಿತ್ತು. ಇದರಿಂದ ಅನುಮಾನಗೊಂಡು ಮನೆಯೊಳಗೆ ಹೋಗಿ ನೋಡಿದಾಗ ಇಂದಿರಾ ಹಾಸಿಗೆ ಮೇಲೆ ಶವವಾಗಿ ಮಲಗಿದ್ದರು. ಏನೋ ಅನಾಹುತ ನಡೆದಿರೋ ಕುರಿತು ಅನುಮಾನಗೊಂಡು ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಅಲ್ಲದೇ ಮನೆಯಲ್ಲಿ 13 ರ್ಷ ಹಾಗೂ 9 ವರ್ಷದ ಮಕ್ಕಳ ಜೊತೆಯಲ್ಲಿ ಇಂದಿರಾ ತಂಗಿ ಹಾಗೂ ಸುದರ್ಶನ್ ಎಂಬ ಪೂಜಾರಿ ಕೂಡ ಇದ್ದಿದ್ದ. ಅಲ್ಲದೇ ಶವದ ಸುತ್ತಲೂ ಪೂಜೆಯ ಸಾಮಗ್ರಿಗಳು ಪತ್ತೆಯಾಗಿತ್ತು. ಇದು ಪೊಲೀಸರಿಗೆ ಅನುಮಾನ ಮೂಡಿಸಿತ್ತು. ಕೂಡಲೇ ಪೊಲೀಸರು ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದಾಗ ಸತ್ಯವನ್ನು ಬಾಯ್ಬಿಟ್ಟಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಡಿಸೆಂಬರ್ 7 ರಂದು ಇಂದಿರಾ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. ಈ ವೇಳೆಯಲ್ಲಿ ಪೂಜಾರಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸುವುದು ಬೇಡಾ. ಆಸ್ಪತ್ರೆಗೆ ದಾಖಲಿಸಿದ್ರೆ ದೇವರು ಮುನಿಸಿಕೊಳ್ಳುವುದಾಗಿ ಹೇಳಿದ್ದಾನೆ. ಆದರೆ ಕೆಲ ಹೊತ್ತಲ್ಲೇ ಇಂದಿರಾ ಸಾವನ್ನಪ್ಪಿದ್ದಾಳೆ. ಆದರೆ ಪೂಜಾರಿ ಆಕೆಯನ್ನು ವಾಪಾಸ್ ಕರೆತರುವುದಾಗಿಯೂ ಹೇಳಿದ್ದಾನೆ. ಇದಕ್ಕಾಗಿ ಪೂಜಾರಿ ಮನೆಯಲ್ಲಿಯೇ ಶವವಿಟ್ಟು ಕಳೆದ 20 ದಿನಗಳಿಂದಲೂ ಪೂಜೆ ಸಲ್ಲಿಸುತ್ತಿದ್ದ ಅಂತಾ ವಿಚಾರಣೆಯ ವೇಳೆಯಲ್ಲಿ ಬಾಯ್ಬಿಟ್ಟಿದ್ದಾನೆ.
ಪೊಲೀಸರು ಇದೀಗ ಪೂಜಾರಿ ಹಾಗೂ ಇಂದಿರಾ ತಂಗಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇಂದಿರಾ ಶವ ಪೂಜೆಯನ್ನು ಯಾವ ಕಾರಣಕ್ಕೆ ಮಾಡಿದ್ದಾರೆ. ನಿಜಕ್ಕೂ ಇಂದಿರಾ ಸಾವಿನ ಕಾರಣ ಇನ್ನಷ್ಟೇ ತಿಳಿದುಬರಬೇಕಾಗಿದೆ.