ನವದೆಹಲಿ : ಸೆಪ್ಟೆಂಬರ್ 1ರ ಇಂದಿನಿಂದ ಸಾರ್ವಜನಿಕರ ಜನ ಜೀವನದ ಮೇಲೆ ಪರಿಣಾಮ ಬೀರುವಂತ ಕೆಲ ನಿಯಮಗಳಲ್ಲಿ ಬದಲಾವಣೆ ಆಗುತ್ತಿವೆ. ಅದರಲ್ಲೂ ಕಾರ್ಮಿಕರ ಭವಿಷ್ಯ ನಿಧಿ ಚಂದಾದಾರರಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡೋದು ಕಡ್ಡಾಯವಾಗಿದೆ. ಇದಲ್ಲದೇ ಇಂದು ಅನಿಲ ದರ ಕೂಡ ಪರಿಷ್ಕರಣೆಯಾಗಿದ್ದು, ಗ್ಯಾಸ್ ಬಳಕೆದಾರರಿಗೆ ಬಿಗ್ ಶಾಕ್ ಕೂಡ ನೀಡಲಾಗಿದೆ. ಹಾಗಾದ್ರೇ. ಇಂದಿನಿಂದ ಯಾವೆಲ್ಲಾ ನಿಯಮ ಬದಲು ಎನ್ನುದು ಇಲ್ಲಿದೆ.
ಪಿಎಫ್ ಖಾತೆಗೆ ನೋಂದಾಯಿತ ಕಾರ್ಮಿಕರು ಆಧಾರ್ ಸಂಖ್ಯೆ ಜೋಡಿಸೋದು ಕಡ್ಡಾಯವಾಗಿದೆ. ಈ ಕೆಲಸ ಮಾಡಲಿಲ್ಲ ಅಂದ್ರೇ.. ಪಿಎಫ್ ಖಾತೆದಾರರು ವಂತಿಗೆಯನ್ನು ಜಮೆ ಮಾಡೋದಕ್ಕೆ ಆಗೋದಿಲ್ಲ. ಅಲ್ಲದೇ ತಮ್ಮ ಖಾತೆಯಲ್ಲಿನ ಹಣವನ್ನು ವಾಪಾಸ್ ತೆಗೆಯೋದಕ್ಕೂ ಆಗೋದಿಲ್ಲ. ಜಿಎಸ್ ಟಿಆರ್-1 ಸಲ್ಲಿಕೆ ಬದಲು – ಕೇಂದ್ರೀಯ ಜಿಎಸ್ಟಿಗೆ ಸಂಬಂಧಿಸಿದಂತೆ 59(6)ನೇ ನಿಯಮಗಳಲ್ಲಿ ಸೆಪ್ಟೆಂಬರ್ ನ ಈ ತಿಂಗಳಿನಿಂದ ನಿಯಮಗಳು ಬದಲಾವಣೆಗೊಳ್ಳುತ್ತಿವೆ. ಹೊಸ ನಿಯಮಗಳ ಅನ್ವಯ ಜಿಎಸ್ ಟಿಆರ್-3ಬಿ ನಮೂನೆಯನ್ನು ಸಲ್ಲಿಸದ ತೆರಿಗೆದಾರರಿಗೆ ಜಿಎಸ್ ಟಿ ಆರ್-1 ಸಲ್ಲಿಸೋದಕ್ಕೆ ಅವಕಾಶ ಇರೋದಿಲ್ಲ.
ಇದನ್ನೂ ಓದಿ: ದೇಶದಲ್ಲಿ ಮಿತಿಮೀರಿದ ವಾಯುಮಾಲಿನ್ಯ ; ಕಡೆಮೆಯಾಗುತಂತೆ ಜೀವಿತಾವಧಿ !
ಪಾಸಿಟಿವ್ ಪೇ ಸಿಸ್ಟಂ ನಲ್ಲಿ ಕೂಡ ಬದಲಾವಣೆ ಇಂದಿನಿಂದ ಆಗಲಿದ್ದು, ಬ್ಯಾಂಕ್ ವಂಚನೆಗೆ ಬ್ರೇಕ್ ಹಾಕೋದಕ್ಕೆ, ಚೆಕ್ ನಗದೀಕರಣದ ನಿಯಮವನ್ನುಆರ್ ಬಿಐ ಬಿಗಿಗೊಳಿಸಿದೆ. ಈ ನಿಯಮದಂತೆ 50 ಸಾವಿರಕ್ಕೂ ಅಧಿಕ ಚೆಕ್ ನಗದೀಕರಣ ಕುರಿತಂತೆ ಗ್ರಾಹಕರು ಬ್ಯಾಂಕ್ ಗೆ ಸೂಚಿಸೋದು ಕಡ್ಡಾಯವಾಗಿದೆ. ಹೀಗೆ ಮಾಹಿತಿ ನೀಡದೇ ಇದ್ದರೇ.. ಚೆಕ್ ಬೌನ್ಸ್ ಆದ್ರೇ ಬ್ಯಾಂಕ್ ಕಾರಣವಲ್ಲ ಎಂಬುದಾಗಿ ಹೇಳಿದೆ. ಈ ನಿಯಮವನ್ನು ಈಗಾಗಲೇ ಆಕ್ಸಿಸ್ ಬ್ಯಾಂಕ್ ಅಳವಡಿಸಿಕೊಂಡಿದೆ. ಇಂತಹ ನಿಯಮದ ಅಧಿಸೂಚನೆ ಜನವರಿಯಲ್ಲೇ ಹೊರಡಿಸಲಾಗಿತ್ತುದ. ಇದು ಇಂದಿನಿಂದ ಜಾರಿಯಾಗಲಿದೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಪತ್ತೆಯಾಯ್ತು 1200 ವರ್ಷ ಹಳೆಯ ದುರ್ಗಾಮಾತೆ ಪ್ರತಿಮೆ
(The new rule passed from today)