ಸೋಮವಾರ, ಏಪ್ರಿಲ್ 28, 2025
HomeNationalKashi Vishwanath Temple : ಸೂತಕದ ನಡುವೆಯೂ ಕಾಶಿ ವಿಶ್ವನಾಥನಿಗೆ ಪೂಜೆ ! ಅರ್ಚಕನ ವಿರುದ್ಧ...

Kashi Vishwanath Temple : ಸೂತಕದ ನಡುವೆಯೂ ಕಾಶಿ ವಿಶ್ವನಾಥನಿಗೆ ಪೂಜೆ ! ಅರ್ಚಕನ ವಿರುದ್ಧ ದೂರು

- Advertisement -

Kashi Vishwanath Temple :ಹಿಂದೂ ಧರ್ಮದಲ್ಲಿ ಯಾವುದೇ ಕುಟುಂಬದಲ್ಲಿ ವ್ಯಕ್ತಿಯು ಸತ್ತರೆ ಅಥವಾ ಜನಿಸಿದರೆ ಕೆಲವು ದಿನಗಳ ಕಾಲ ದೇವರ ಪೂಜೆ ಹಾಗೂ ಪುನಸ್ಕಾರಗಳನ್ನು ಆಚರಿಸಲು ನಿಷಿದ್ಧ ಹೇರಲಾಗುತ್ತದೆ. ಇದನ್ನೇ ನಾವು ಸೂತಕ ಎಂದು ಕರೆಯುತ್ತೇವೆ. ಯಾವುದೇ ಜಾತಿ ಬೇಧವೆನ್ನದೇ ಈ ಆಚರಣೆಯನ್ನು ಪ್ರತಿಯೊಬ್ಬ ಹಿಂದೂವು ಆಚರಿಸುತ್ತಾರೆ. ಆದರೆ ಈ ಆಚರಣೆಯನ್ನು ಸುಪ್ರಸಿದ್ಧ ಶ್ರೀ ಕಾಶಿ ವಿಶ್ವನಾಥ ದೇಗುಲದ ಅರ್ಚಕರು ಮುರಿದಿದ್ದಾರೆ ಎಂಬ ಆರೋಪ ಎದುರಾಗಿದೆ.


ಡಿಸೆಂಬರ್ 13ರಂದು ಸೂತಕ ಹೊಂದಿದ್ದ ಅರ್ಚಕರೊಬ್ಬರು ದೇಗುಲದ ಗರ್ಭಗುಡಿಯಲ್ಲಿ ಕುಳಿತು ಪ್ರಧಾನಿ ಮೋದಿಯಿಂದ ಪೂಜೆ ಮಾಡಿಸಿದ್ದಾರೆ. ಈ ಸಂಬಂಧ ಆ ಅರ್ಚಕರ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಅರ್ಚಕ ಶ್ರೀಕಾಂತ್​ ಮಿಶ್ರಾ ಎಂಬವರ ವಿರುದ್ಧ ಇಂತಹದ್ದೊಂದು ಗಂಭೀರ ಆರೋಪ ಎದುರಾಗಿದೆ. ಡಿಸೆಂಬರ್​ 13ರಂದು ಕಾಶಿ ವಿಶ್ವನಾಥ ಧಾಮವನ್ನು ಉದ್ಘಾಟನೆ ಮಾಡಲಾಗಿತ್ತು. ಆ ದಿನದಂದು ಪ್ರಧಾನಿ ಮೋದಿ ವಿಶ್ವನಾಥ ದೇಗುಲದ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸಿದ್ದರು. ಈ ಸಮಯದಲ್ಲಿ ಉಪಸ್ಥಿತರಿದ್ದ ಅರ್ಚಕ ಶ್ರೀಕಾಂತ್​ ಮಿಶ್ರಾಗೆ ಡಿಸೆಂಬರ್​ 5ರಂದು ಸೋದರಳಿಯನ ಅಗಲಿಕೆ ಸಂಭವಿಸಿತ್ತು. ರಸ್ತೆ ಅಪಘಾತವೊಂದರಲ್ಲಿ ಪ್ರಕಾಶ್​ ಮಿಶ್ರಾ ನಿಧನರಾಗಿದ್ದರು.

ಆದರೆ ಈ ಸುದ್ದಿ ಯಾರಿಗೂ ತಿಳಿದಿರಿಲಿಲ್ಲ. ಯಾವುತ್ತು ಪ್ರಕಾಶ್​ ಮಿಶ್ರಾ ಅವರ 13ನೇ ದಿನ ಪುಣ್ಯಸ್ಮರಣೆಯ ಆಮಂತ್ರಣ ಪತ್ರಿಕೆಯನ್ನು ಹಂಚಲಾಯ್ತೋ ಅಂದು ಈ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಬರುತ್ತಿದ್ದಂತೆಯೇ ಘಟನೆಯ ಸಂಪೂರ್ಣ ವಿವರಣೆ ಸಮೇತ ದೂರನ್ನು ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್​ನ ಮಾಜಿ ಸದಸ್ಯ ಪ್ರದೀಪ್​ ಕುಮಾರ್​ ಬಜಾಜ್​​ ಅವರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಹಾಗೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಂಬಂಧಪಟ್ಟವರಿಗೆ ಕಳುಹಿಸಿಕೊಟ್ಟಿದ್ದಾರೆ.


ಇನ್ನು ಈ ವಿಚಾರವಾಗಿ ಮಾತನಾಡಿರುವ ಪ್ರದೀಪ್​ ಕುಮಾರ್​ ಬಜಾಜ್​, ಸೂತಕದ ಅವಧಿಯಲ್ಲಿಯೇ ಅರ್ಚಕ ಶ್ರೀಕಾಂತ್​ ಮಿಶ್ರಾ ಕಾಶಿ ವಿಶ್ವನಾಥನಿಗೆ ಪೂಜೆ ಸಲ್ಲಿಸಿದ್ದಾರೆ. ಡಿಸೆಂಬರ್​ 5ರಂದು ಅವರ ಸೋದರಳಿಯ ಮಧ್ಯಪ್ರದೇಶದಲ್ಲಿ ನಿಧನರಾಗಿದ್ದಾರೆ. ಅವರಿಗೆ ಡಿಸೆಂಬರ್​ 6ರಂದು ಅಂತ್ಯಕ್ರಿಯೆ ಮಾಡಲಾಗಿತ್ತು. ಹೀಗಾಗಿ ಸೂತಕವಿದ್ದರೂ ಸಹ ಅರ್ಚಕ ಶ್ರೀಕಾಂತ್​ ಶರ್ಮಾ ಹಿಂದೂ ಸಂಪ್ರದಾಯವನ್ನು ಮುರಿದಿದ್ದಾರೆ ಎಂದು ಆರೋಪಿಸಿದರು.

ಇದನ್ನು ಓದಿ : Rare Pink Fish : ಸಮುದ್ರದಾಳದಲ್ಲಿ ಪತ್ತೆಯಾಯ್ತು ನಡೆದಾಡುವ ಅಪರೂಪದ ಮೀನು

ಇದನ್ನೂ ಓದಿ : Omicron Cases India Surge: ಭಾರತದಲ್ಲಿ ಓಮಿಕ್ರಾನ್‌ ಸ್ಪೋಟ : 578 ಪ್ರಕರಣ

Kashi Vishwanath Temple : varanasikashi Vishwanath mandir corridor poojan by pm modi was done in sutakkal action against pandit

RELATED ARTICLES

Most Popular