Tಕೊರೋನಾ ಎರಡನೇ ಅಲೆ ಹಾಗೂ ಲಾಕ್ ಡೌನ್ ನಿಂದ ಬಡವರು, ಕೂಲಿ ಕಾರ್ಮಿಕರು ಸಂಕಷ್ಟಕ್ಕಿಡಾಗಿದ್ದಾರೆ. ಹೀಗಾಗಿ ಬಡವರ ಹಸಿವು ನೀಗಿಸಲು ಶರವಣ್, ಅಪ್ಪಾಜಿ ಕ್ಯಾಂಟೀನ್ ಕಾರ್ಯಾರಂಭ ಮಾಡಲಿದ್ದು, ದೇವೇಗೌಡರ್ ಹುಟ್ಟುಹಬ್ಬದಂದು ಯೋಜನೆ ಆರಂಭವಾಗಲಿದೆ.

ಬಡವರ ಹಾಗೂ ಅಗತ್ಯ ಉಳ್ಳವರ ಹಸಿವು ನೀಗಿಸಲು ಮಾಜಿ ವಿಧಾನ್ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಟಿ.ಎ. ಶರವಣ್ ಮೇ 17 ರಿಂದ ಅಪ್ಪಾಜಿ ಕ್ಯಾಂಟೀನ್ ಆರಂಭಿಸಲಿದ್ದಾರೆ.

ಉಚಿತವಾಗಿ ಊಟ ವಿತರಿಸಲು ಜೆಡಿಎಸ್ ಮುಖಂಡ ಶರವಣ್ ನಿರ್ಧರಿಸಿದ್ದು ನಾಳೆ ಮಧ್ಯಾಹ್ನ 12 ಗಂಟೆಗೆ ಕೆ.ಆರ್.ಮಾರ್ಕೆಟ್ ಬಳಿ ಇರುವ ವಿಕ್ಟೋರಿಯಾ ಆಸ್ಪತ್ರೆ ಮುಂಭಾಗದ ಗೇಟ್ ಬಳಿ ಊಟ ವಿತರಣೆಗೆ ಚಾಲನೆ ಸಿಗಲಿದೆ.

ಈ ಕ್ಯಾಂಟೀನ್ ಗೆ ಶರವಣ್ ಅಪ್ಪಾಜಿ ಸಂಚಾರಿ ಕ್ಯಾಂಟೀನ್ ಎಂದು ಹೆಸರಿಟ್ಟಿದ್ದು, ನಾಳೆ ಮಾಜಿ ಪ್ರಧಾನಿ ದೇವೇಗೌಡರ್ 89 ನೇ ಹುಟ್ಟುಹಬ್ಬದ ಪ್ರಯುಕ್ತ ಈ ಯೋಜನೆ ಉದ್ಘಾಟನೆಗೊಳ್ಳ ಲಿದೆ.

ಕೆಲವರ್ಷಗಳಿಂದ ಬೆಂಗಳೂರಿನ ಹನುಮಂತ ನಗರದಲ್ಲಿ ಅಪ್ಪಾಜಿ ಕ್ಯಾಂಟೀನ್ ನಡೆಸುತ್ತಿದ್ದ ಶರವಣ್ ಇತ್ತೀಚಿಗೆ ಆ ಕ್ಯಾಂಟೀನ್ ಬಾಗಿಲು ಮುಚ್ಚಿದ್ದರು.
