ಸೋಮವಾರ, ಜೂನ್ 16, 2025
HomekarnatakaRamesh Jarakiholi master Stroke : ಪಕ್ಷಕ್ಕೆ ಸೋಲು, ಸಹೋದರನಿಗೆ ಗೆಲುವು : ಒಂದೇ...

Ramesh Jarakiholi master Stroke : ಪಕ್ಷಕ್ಕೆ ಸೋಲು, ಸಹೋದರನಿಗೆ ಗೆಲುವು : ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡದ್ರಾ ರಮೇಶ್ ಜಾರಕಿಹೊಳಿ

- Advertisement -

ಬೆಳಗಾವಿ : ಬಿಜೆಪಿಯ ಪಾಲಿಗೆ ಪ್ರತಿಷ್ಠೆಯ ಕಣವಾಗಿದ್ದ ಬೆಳಗಾವಿಯಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಒಂದೊಂದು ಸ್ಥಾನಗಳನ್ನು ಕಾಂಗ್ರೆಸ್ ಹಾಗೂ ಪಕ್ಷೇತರರು ಹಂಚಿಕೊಂಡಿದ್ದಾರೆ. ಆ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪಕ್ಷದ (Ramesh Jarakiholi master Stroke) ವಿರುದ್ಧ ಸೇಡು ತೀರಿಸಿಕೊಂಡು ಸಹೋದರನನ್ನು(Lakan Jarakiholi) ಗೆಲ್ಲಿಸಿ ಕೊಂಡಿದ್ದಾರೆ. ಆ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದಾರೆ. ಆದರೆ ಸಹೋದರನ ಗೆಲುವು ರಮೇಶ್ ಪಾಲಿಗೆ ಸಂಕಷ್ಟ ತರೋ ಲಕ್ಷಣ ದಟ್ಟ ವಾಗಿದೆ.

ಬೆಳಗಾವಿ ಯಲ್ಲಿ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ಎದುರು ಮಂಡಿಯೂರಿದ್ದು ಮಹಾಂತೇಶ್ ಕವಠಗಿಮಠ ಸೋಲು ಕಂಡಿದ್ದಾರೆ. ಆದರೆ ಈ ಸೋಲಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾರಣ ಎಂಬ ವಿಚಾರ ಈಗ ಮುನ್ನಲೆಗೆ ಬಂದಿದೆ. ಹೀಗಾಗಿ ಮಾಜಿ ಸಚಿವ‌ ರಮೇಶ್ ಜಾರಕಿಹೊಳಿ ವಿರುದ್ಧ ಬಿಜೆಪಿ ಕ್ರಮಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಬಿಜೆಪಿಯಿಂದ ಲಖನ್ ಜಾರಕಿಹೊಳಿಗೆ ಟಿಕೇಟ್ ಕೊಡಿಸಲು ರಮೇಶ್ ಮತ್ತು ಬಾಲಚಂದ್ರ ಜಾರಕಿಹೊಳಿ ಪ್ರಯತ್ನಿಸಿದ್ದರು.

ಆದರೆ ಬಿಜೆಪಿ ಮಹಾಂತೇಶ್ ಕವಠಗಿಮಠ್ ಗೆ ಟಿಕೆಟ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಬಂಡಾಯ ಎದ್ದಿದ್ದ ಲಖನ್ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಹೀಗಾಗಿ ಪಕ್ಷೇತರವಾಗಿ ಕಣಕ್ಕಿಳಿದ ಸಹೋದರನನ್ನು ಗೆಲ್ಲಿಸಲು ರಮೇಶ್ ಮತ್ತು ಬಾಲಚಂದ್ರ ಜಾರಕಿಹೊಳಿ ಪಕ್ಷದ ಚೌಕಟ್ಟು ಮೀರಿ ಕೆಲಸ‌ಮಾಡಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದೆ. ಚುನಾವಣೆ ಗೂ ಮುನ್ನ ಮಾತನಾಡಿದ್ದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಸೋಲಿಸುವುದು ನನ್ನ ಪರಮಗುರಿ. ಆದರೇ ಮಹಾಂತೇಶ್ ಮತ್ತು ಲಖನ್ ಅವರನ್ನು ಗೆಲ್ಲಿಸುವುದಾಗಿ ರಮೇಶ್ ಜಾರಕಿಹೊಳಿ ಹಲವು ಭಾರಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಆದರೆ ಅಂತರಿಕವಾಗಿ ರಮೇಶ್ ಜಾರಕಿಹೊಳಿ ಕೇವಲ ತಮ್ಮ‌ಸಹೋದರ ಲಖನ್ ಗೆಲುವಿಗಾಗಿ‌ಮಾತ್ರ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ಹೀಗಾಗಿ ಬೆಳಗಾವಿ ಬಿಜೆಪಿ ನಾಯಕರು ಹಾಗೂ ಮಹಾಂತೇಶ್ ಕವಠಗಿಮಠ್ ಹೈಕಮಾಂಡ್ ಗೆ ದೂರು ನೀಡಲು ಸಿದ್ಧವಾಗಿದ್ದಾರೆ. ಬಾಲಚಂದ್ರ ಹಾಗೂ ರಮೇಶ್ ಜಾರಕಿಹೊಳಿ ವಿರುದ್ಧ ಹೈಕಮಾಂಡ್ ಗೆ ದೂರು ನೀಡಿ ಸೋಲಿಗೆ ಅವರೇ ಕಾರಣವಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರಂತೆ. ಮೂಲಗಳ ಮಾಹಿತಿ ಪ್ರಕಾರ ತಮಗೆ ಸಚಿವ ಸ್ಥಾನ ಹಾಗೂ ಸಹೋದರನಿಗೆ ಪರಿಷತ್ ಟಿಕೇಟ್ ಸ್ಥಾನ ನೀಡದ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಲು ರಮೇಶ್ ಜಾರಕಿಹೊಳಿ ಸಖತ್ ಪ್ಲ್ಯಾನ್ ಮಾಡಿದ್ದಾರೆ.

ಮಹಾಂತೇಶ್ ಪರ ಪ್ರಚಾರ ಮಾಡುವ ನೆಪದಲ್ಲೇ ಸಹೋದರನ ಗೆಲುವಿಗೆ ಸರ್ಕಸ್ ನಡೆಸಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಸದ್ಯ ಬಿಜೆಪಿ ಶಿಸ್ತು ಕಮಿಟಿ ಜಾರಕಿಹೊಳಿ ಬ್ರದರ್ಸ್ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದೆ. ರಮೇಶ್ ಹಾಗೂ ಬಾಲಚಂದ್ರ ತಲೆದಂಡ ಪಡೆಯೋ ತಾಕತ್ತಿದೆಯಾ ಎಂದು ಕಾಂಗ್ರೆಸ್ ಕೂಡ ಕುಟುಕಿರೋದರಿಂದ ಬಿಜೆಪಿಗೆ ಜಾರಕಿಹೊಳಿ ಬ್ರದರ್ಸ್ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ.

ಇದನ್ನೂ ಓದಿ : The law of conversion : ಕಾಂಗ್ರೆಸ್ ವಿರೋಧದ ನಡುವೆಯೂ ಬಿಜೆಪಿ ಧೃಡ ನಿರ್ಧಾರ: ಜಾರಿಯಾಗಲಿದೆ ಮತಾಂತರ ಕಾನೂನು

ಇದನ್ನೂ ಓದಿ : KGF Babu Dream : ಕೋಟಿ ಒಡೆಯನಿಗೆ ಸೋಲು ಕಟ್ಟಿ ಕೊಟ್ಟ ಬಿಜೆಪಿ : ಕನಸಾಗೇ ಉಳಿತು ಕೆಜಿಎಫ್ ಬಾಬು ಪರಿಷತ್ ಕನಸು

(Defeat for bjp, victory for Lakan Jarakiholi Ramesh Jarakiholi master Stroke)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular