ಭಾನುವಾರ, ಜೂನ್ 15, 2025
HomekarnatakaAnitha Kumaraswamy : ಮುಂದಿನ ಚುನಾವಣೆಯಲ್ಲಿ ಅನಿತಾ ಸ್ಪರ್ಧಿಸಲ್ಲ: ಎಚ್‌ಡಿ ಕುಮಾರಸ್ವಾಮಿ ಘೋಷಣೆ ಹಿಂದಿದ್ಯಾ ಪುತ್ರ...

Anitha Kumaraswamy : ಮುಂದಿನ ಚುನಾವಣೆಯಲ್ಲಿ ಅನಿತಾ ಸ್ಪರ್ಧಿಸಲ್ಲ: ಎಚ್‌ಡಿ ಕುಮಾರಸ್ವಾಮಿ ಘೋಷಣೆ ಹಿಂದಿದ್ಯಾ ಪುತ್ರ ವ್ಯಾಮೋಹದ ನಂಟು

- Advertisement -

ಬೆಂಗಳೂರು : ರಾಜ್ಯದಲ್ಲಿ ಸದ್ದಿಲ್ಲದೇ ಮುಂದಿನ ವಿಧಾನಸಭೆ ಚುನಾವಣೆಕಣ ರಂಗೇರುತ್ತಿದೆ. ಒಂದೆಡೆ ಪಕ್ಷಾಂತರದ ಚರ್ಚೆಗಳು ಆರಂಭಗೊಂಡಿದ್ದರೇ, ಇನ್ನೊಂದೆಡೆ ಯಾರಿಗೆ ಯಾವ ಕ್ಷೇತ್ರ ಎಂಬ ಚರ್ಚೆಯೂ ಗರಿಗೆದರಿದೆ.ಈ ಮಧ್ಯೆ ಕುಟುಂಬ ರಾಜಕಾರಣದ ಆರೋಪಗಳಿಂದ ಬೇಸತ್ತಿರೋ ಮಾಜಿ ಸಿಎಂ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ಮುಂದಿನ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ (Anitha Kumaraswamy) ಕಣಕ್ಕಿಳಿಸುವ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳ ಜೊತೆ ನಡೆದ ನೆಲಜಲನಾಡು ನುಡಿ ಕುರಿತಾಗಿನ ಸಂವಾದದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಕೆಲ ಹೋರಾಟಗಾರರು ನಮ್ಮ ಕುಟುಂಬ ರಾಜಕಾರಣದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಮ್ಮ ಕುಟುಂಬದ ಬಗ್ಗೆ ಚರ್ಚೆಗಳು ನಡೆಯುತ್ತವೇ ಇವೆ. ಈಗ ಅದರ ಬಗ್ಗೆ ಮಾತನಾಡುವುದು ಅಪ್ರಸ್ತುತ ಎಂದಿದ್ದಾರೆ. ಅಲ್ಲದೇ ತಮ್ಮ ರಾಜಕಾರಣಕ್ಕೆ ಬಂದ ಸಂದರ್ಭವನ್ನು ಉಲ್ಲೇಖಿಸಿರುವ ಎಚ್. ಡಿ‌.ಕುಮಾರಸ್ವಾಮಿ, ನಾನು ರಾಜಕಾರಣಕ್ಕೆ ಬರದೇ ಇದ್ದಿದ್ದರೇ ಇಂದು ನಮ್ಮ ಪಕ್ಷ ಇರುತ್ತಿರಲಿಲ್ಲ. ನಮ್ಮ ಪಕ್ಷವನ್ನು ಉಳಿಸಿಕೊಳ್ಳಲು ನನ್ನ ಪತ್ನಿಯನ್ನು ಚುನಾವಣಾ ಕಣಕ್ಕಿಳಿಸಬೇಕಾಯಿತು. ಆದರೆ ಮುಂದಿನ ಚುನಾವಣೆಗೆ ಅವರನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ.

ಅನಿತಾ ಕುಮಾರಸ್ವಾಮಿ ಮುಂದಿನ ಎಲೆಕ್ಷನ್ ಗೆ ನಿಲ್ಲೋದಿಲ್ಲ ಎಂದು ಎಚ್ಡಿಕೆ ನೇರವಾಗಿ ಹೇಳಿರೋದು ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇನ್ನು ಈ ವಿಚಾರಕ್ಕೆ ದೆಹಲಿಯಲ್ಲಿ ನೇರವಾಗಿ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ ಹೀಗೆ ನೇರವಾಗಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುವುದಿಲ್ಲ ಎಂದು ಹೇಳ ಬಾರದು. ಅವರು ಗೆದ್ದ ಅಭ್ಯರ್ಥಿ. ಒಂದೊಮ್ಮೆ ಬೇರೆಯವರು ಸ್ಪರ್ಧಿಸಲು ಮುಂದೇ ಬಂದರೇ ಅವಕಾಶ ನೀಡುತ್ತೇವೆ ಎಂದರು. ಆದರೆ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಲ್ಲ ಎಂದಿರೋದು ರಾಜಕೀಯ ವಲಯದಲ್ಲಿ ಬೇರೆ ರೀತಿಯದ್ದೇ ಚರ್ಚೆಗೆ ವೇದಿಕೆ ಒದಗಿಸಿದೆ‌

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರೋ ಪುತ್ರ ನಿಖಿಲ್ ಕುಮಾರಸ್ವಾಮಿಗಾಗಿ ಎಚ್ಡಿಕೆ ಹಾಗೂ ಅನಿತಾ ಕುಮಾರಸ್ವಾಮಿ ತ್ಯಾಗ ಕ್ಕೆ ಮುಂದಾಗಿದ್ದಾರೆ ಎನ್ನಲಾಗ್ತಿದೆ. ಅನಿತಾ ಕುಮಾರಸ್ವಾಮಿ ತಾವು ಗೆದ್ದ ರಾಮನಗರ ಕ್ಷೇತ್ರವನ್ನು ಮಗನಿಗಾಗಿ ತ್ಯಾಗ ಮಾಡಲಿದ್ದು, ರಾಮನಗರದಿಂದ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸುವ ಪ್ಲ್ಯಾನ್ ಮಾಡಿದ್ದಾರಂತೆ‌‌. ಇದಕ್ಕಾಗಿಯೇ ಎಚ್ಡಿಕೆ ಈಗಾಗಲೇ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಲ್ಲ ಎಂಬುದನ್ನು ಘೋಷಿಸಿದ್ದಾರೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ನಿಖಿಲ್ 2023 ರ ಚುನಾವಣೆಯಲ್ಲಿ ಮತ್ತೆ ಕಣಕ್ಕಿಳಿಯೋದಿಕ್ಕೆ ಸಿದ್ಧತೆ ಆರಂಭಗೊಂಡಿರೋದಿಕ್ಕೆ ಎಚ್ಡಿಕೆ ಮಾತು ಸಾಕ್ಷಿ ಒದಗಿಸಿದೆ.

ಇದನ್ನೂ ಓದಿ : ಮಹಿಳೆಯರ ಬಟ್ಟೆಯಿಂದ್ಲೇ ಪುರುಷರು ಉದ್ರೇಕಿತರಾಗ್ತಾರೇ ! ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ

ಇದನ್ನೂ ಓದಿ : Hijab Row Hearing : ಹಿಜಾಬ್ ವಿಚಾರಣೆಗೆ ತ್ರೀಸದಸ್ಯ ಪೀಠ : ಇಂದು ಮಂಡನೆಯಾಗಲಿದೆ ವಾದ-ಪ್ರತಿವಾದ

( Anitha Kumaraswamy will not contest the next election, HD Kumaraswamy declares)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular