ಮಂಗಳವಾರ, ಜೂನ್ 17, 2025
HomeBreakingDKS: ಪಕ್ಕದಲ್ಲಿ ಬಂದ ಕಾರ್ಯಕರ್ತನಿಗೆ ಡಿಕೆಶಿ ಥಳಿತ : ರಾಜಕಾರಣಿಯೋ ಅಥವಾ ರೌಡಿಯೋ ಎಂದ ಬಿಜೆಪಿ

DKS: ಪಕ್ಕದಲ್ಲಿ ಬಂದ ಕಾರ್ಯಕರ್ತನಿಗೆ ಡಿಕೆಶಿ ಥಳಿತ : ರಾಜಕಾರಣಿಯೋ ಅಥವಾ ರೌಡಿಯೋ ಎಂದ ಬಿಜೆಪಿ

- Advertisement -

ಬೆಂಗಳೂರು : ಪಕ್ಕದಲ್ಲಿ ಬಂದು ನಿಂತ ಕಾಂಗ್ರೆಸ್‌ ಕಾರ್ಯಕರ್ತನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಥಳಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಇದರ ಬೆನ್ನಲ್ಲೇ ಬಿಜೆಪಿ ನೀವು ರಾಜಕಾರಣಿಯೋ ಅಥವಾ ರೌಡಿಯೋ ಎಂದು ಪ್ರಶ್ನಿಸಿದೆ.

ಜಿ.ಮಾದೇಗೌಡ ಅವರ ಆರೋಗ್ಯ ವಿಚಾರಿಸುವ ಸುಲುವಾಗಿ ಡಿ.ಕೆ.ಶಿವಕುಮಾರ್‌ ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿಗೆ ಭೇಟಿ ನೀಡಿದ್ದರು. ಈ ವೇಳೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತನೋರ್ವ ಡಿ.ಕೆ. ಶಿವ ಕುಮಾರ್‌ ಅವರ ಸೆಲ್ಪಿ ತೆಗೆಯಲು ಮುಂದಾಗಿದ್ದ. ಹಿಂಬದಿಯಿಂದ ಬಂದು ಡಿಕೆಶಿ ಹೆಗಲ ಮೇಲೆ ಕೈ ಇಡುತ್ತಿದ್ದಂತೆಯೇ ಕಾರ್ಯಕರ್ತನ ಕೆನ್ನೆಗೆ ಬಾರಿಸಿದ್ದಾರೆ. ವಿಡಿಯೋ ಮಾಡ್ತೀಯಾ, ಕಾಮನ್‌ ಸೆನ್ಸ್‌ ಇಲ್ವಾ ಅಂತಾ ಗದರಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೇ ಕಾಂಗ್ರೆಸ್‌ ಕಾರ್ಯಕರ್ತರಿಗೂ ಡಿಕೆಶಿ ವರ್ತನೆ ಬೇಸರವನ್ನು ತರಿಸಿದೆ.

ಇದರ ಬೆನ್ನಲ್ಲೇ ಬಿಜೆಪಿ ಡಿ.ಕೆ.ಶಿವಕುಮಾರ್‌ ಅವರ ವರ್ತನೆಯನ್ನು ಖಂಡಿಸಿದೆ. ಟ್ವೀಟರ್‌ ನಲ್ಲಿ ಸಾರ್ವಜನಿಕ ಜೀವನದಲ್ಲಿದ್ದುಕೊಂಡು ಒಬ್ಬ ವ್ಯಕ್ತಿಯ ಮೇಲೆ ಸಾರ್ವಜನಿಕವಾಗಿ, ಮಾಧ್ಯಮಗಳ ಎದುರು ಹಲ್ಲೆ ಮಾಡುವುದು ಡಿ.ಕೆ.ಶಿವಕುಮಾರ್‌ ಅವರ ಉಗ್ರ ಮನಸ್ಥಿತಿಯನ್ನು ತೋರಿಸುತ್ತಿದೆ. ಈ ಹಿಂದೆ ಸೆಲ್ಪಿ ತೆಗೆಯಲು ಬಂದ ಕಾರ್ಯಕರ್ತನ ಮೇಲೆ ಡಿಕೆಶಿ ಹಲ್ಲೆ ಮಾಡಿದ್ದರು. ಡಿಕೆಶೀಯವರೆ ನೀವು ರಾಜಕಾರಣಿಯೋ ಅಥವಾ ರೌಡಿಯೋ ಎಂದು ಬಿಜೆಪಿ ಟ್ಭೀಟ್‌ ಮಾಡಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular