ಶನಿವಾರ, ಜೂನ್ 14, 2025
HomepoliticsMinister Sunil Kumar : ಜನ ಮೆಚ್ಚುಗೆಗೆ ಪಾತ್ರವಾಯ್ತು ಸಚಿವ ಸುನಿಲ್‌ ಕುಮಾರ್‌ ಕಾರ್ಯ

Minister Sunil Kumar : ಜನ ಮೆಚ್ಚುಗೆಗೆ ಪಾತ್ರವಾಯ್ತು ಸಚಿವ ಸುನಿಲ್‌ ಕುಮಾರ್‌ ಕಾರ್ಯ

- Advertisement -

ಉಡುಪಿ : ಮೊದಲ ಬಾರಿಗೆ ಸಚಿವರಾಗಿ ಆಯ್ಕೆಯಾಗಿರುವ ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಮಾಡಿದ ಆ ಒಂದು ಕಾರ್ಯ ಇದೀಗ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಇಂಧನ, ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ತಮ್ಮ ಹುಟ್ಟುಹಬ್ಬದ ದಿನದಂದು ಮೆಸ್ಕಾಂನ ಲೈನ್ ಮ್ಯಾನ್ ಗಳ ಜೊತೆ ಊಟ ಸಿಹಿ ಊಟವನ್ನು ಸವಿದು ಖುಷಿಪಟ್ಟಿದ್ದಾರೆ.

ಪ್ರಥಮ ಬಾರಿಗೆ ಸಚಿವರಾದರೂ ಕೂಡ ಇಂಧನ ಖಾತೆಯ ಜೊತೆಗೆ ಕನ್ನಡ ಸಂಸ್ಕೃತಿ ಇಲಾಖೆಯ ಜವಾಬ್ದಾರಿಯನ್ನೂ ಸುನಿಲ್‌ ಕುಮಾರ್‌ ಹೊತ್ತುಕೊಂಡಿದ್ದಾರೆ. ಸ್ವಾತಂತ್ರ್ಯೋತ್ಸವದ ದಿನವೇ ಸಚಿವ ಸುನಿಲ್‌ ಕುಮಾರ್‌ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಇಂಧನ ಇಲಾಖೆಯ ಜವಾಬ್ದಾರಿ ಹೊತ್ತಿದ್ದ ಸಚಿವ ಸುನಿಲ್‌ ಕುಮಾರ್‌ ಹುಟ್ಟುಹಬ್ಬದ ದಿನವೂ ತಮ್ಮ ಕರ್ತವ್ಯವನ್ನು ಮರೆಯಲಿಲ್ಲ. ಮೆಸ್ಕಾಂ ಇಲಾಖೆಯ ಲೈನ್‌ಮ್ಯಾನ್‌ಗಳನ್ನು ತಮ್ಮ ಮನೆಗೆ ಕರೆಯಿಸಿ ಹುಟ್ಟುಹಬ್ಬದ ಊಟ ಹಾಕಿಸಿದ್ದಾರೆ.

ಲೈನ್‌ಮ್ಯಾನ್‌ಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು. ಸಮಸ್ಯೆಯ ಈಡೇರಿಕಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿಯೂ ತಿಳಿಸಿದ್ದಾರೆ. ನಂತರ ಊಟ ಸವಿದು ಸಚಿವ ಸುನಿಲ್‌ ಕುಮಾರ್‌ ಖುಷಿಪಟ್ಟಿದ್ದಾರೆ. ಇಂಧನ ಇಲಾಖೆಯಲ್ಲಿ ಲೈನ್‌ಮ್ಯಾನ್‌ಗಳ ಪಾತ್ರ ಬಹುಮುಖ್ಯವಾದುದು. ಅದೇ ಕಾರಣಕ್ಕೆ ಅವರ ಸಮಸ್ಯೆಯನ್ನು ಆಲಿಸಿ, ಹಬ್ಬದೂಟ ಸವಿದಿದ್ದೇನೆ ಎಂದಿದ್ದಾರೆ ಸಚಿವ ಸುನಿಲ್‌ ಕುಮಾರ್.‌

ಸಚಿವರು ಮಾಡಿರೋ ಈ ಕಾರ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಇಂಧನ ಇಲಾಖೆಯ ಸಮಸ್ಯೆಯನ್ನು ಪರಿಹಾರ ಮಾಡುವ ಜೊತೆಗೆ ಜನೋಪಯೋಗಿಯಾಗಿರುವ ಇನ್ನಷ್ಟು ಯೋಜನೆಯನ್ನು ಸಚಿವ ಸುನಿಲ್‌ ಕುಮಾರ್‌ ಅವರು ಜಾರಿಗೆ ತರಲಿ ಅನ್ನೋ ಮಾತುಗಳು ಕೇಳಿಬಂದಿವೆ.

ಇದನ್ನೂ ಓದಿ : ನನಗೆ ಝೀರೋ ಟ್ರಾಫಿಕ್‌ ಬೇಡ ಎಂದ ಸಿಎಂ ಬೊಮ್ಮಾಯಿ

ಇದನ್ನೂ ಓದಿ : ಸಕ್ರೀಯ ರಾಜಕಾರಣಕ್ಕೆ ಸಿ.ಟಿ.ರವಿ ಪತ್ನಿ : ವಿಧಾನಸಭೆ, ಲೋಕಸಭೆ ಚುನಾವಣೆಗೆ ಸ್ಪರ್ಧಿಸ್ತಾರಾ ಪಲ್ಲವಿ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular