ಭಾನುವಾರ, ಏಪ್ರಿಲ್ 27, 2025
Homepoliticsಕೆಪಿಸಿಸಿ ಕಾನೂನು, ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕುಗಳ ವಿಭಾಗದ ಅಧ್ಯಕ್ಷರಾಗಿ ಕೊಡಗಿನ ಎ.ಎಸ್ ಪೊನ್ನಣ್ಣ

ಕೆಪಿಸಿಸಿ ಕಾನೂನು, ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕುಗಳ ವಿಭಾಗದ ಅಧ್ಯಕ್ಷರಾಗಿ ಕೊಡಗಿನ ಎ.ಎಸ್ ಪೊನ್ನಣ್ಣ

- Advertisement -

ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾನವ ಹಾಗೂ ಮಾಹಿತಿ ಹಕ್ಕುಗಳ ವಿಭಾಗದ ಅಧ್ಯಕ್ಷರಾಗಿ ಮಾಜಿ ಅಡಿಷನಲ್ ಅಡ್ವಕೇಟ್ ಜನರಲ್ ಕೊಡಗಿನ ಎ.ಎಸ್ ಪೊನ್ನಣ್ಣ ರವರನ್ನು ಎಐಸಿಸಿ ಆಯ್ಕೆ ಮಾಡಿದೆ.

ಎ.ಎಸ್ ಪೊನ್ನಣ್ಣ ಈ ಮೊದಲು ರಾಜ್ಯ ಹೈಕೋರ್ಟಿನ ಅಡಿಷನಲ್ ಅಡ್ವಕೇಟ್ ಜನರಲ್ ಆಗಿ ಕಾರ್ಯನಿರ್ವಹಿಸಿದರು. ಮೂಲತಃ ಕೊಡಗಿನವರಾದ ಎ.ಎಸ್ ಪೊನ್ನಣ್ಣ ಖ್ಯಾತ ನ್ಯಾಯವಾದಿ ಹಾಗೂ ರಾಜಕೀಯ ನಾಯಕರಾದ ದಿವಂಗತ ಎ.ಕೆ.ಸುಬ್ಬಯ್ಯನವರ ಸುಪುತ್ರರಾಗಿದ್ದಾರೆ.

ಲಾಕ್ಡೌನ್ ಸಂದರ್ಭದಲ್ಲಿ ಕೊಡಗಿನಲ್ಲಿ ತೊಂದರೆಗೊಳಗಾದವರಿಗೆ ತನ್ನ ಟ್ರಸ್ಟಿನ ಮೂಲಕ ಸಹಾಯ ಹಸ್ತ ಚಾಚುವ ಮೂಲಕ ಜನಪರ ಕಾಳಜಿಯನ್ನು ತೋರ್ಪಡಿಸಿದ್ದಾರೆ. ಕೊಡಗಿನಲ್ಲಿ ದಿವಂಗತ ಎ.ಕೆ.ಸುಬ್ಬಯ್ಯನವರು ಜನಪರ ಕಾಳಜಿ, ಬಡವರಪರ ನಿಲುವಿನ ನಾಯಕನಾಗಿ ಜನರ ಮನಸ್ಸಿನಲ್ಲಿ ಇಂದಿಗೂ ನೆಲೆನಿಂತಿದ್ದಾರೆ. ಅಂತಹ ಜನ ಕಾಳಜಿಯ ಹಿನ್ನಲೆಯ ಎ.ಎಸ್.ಪೊನ್ನಣ್ಣ ರವರಿಗೆ ಈಗ ರಾಜ್ಯ ಕಾಂಗ್ರೆಸ್ಸಿನಲ್ಲಿ ಮಹತ್ವದ ಹುದ್ದೆ ಲಭಿಸಿರುವುದು ಜನಪರ ಕಾಳಜಿಯ ನೆಲೆಯಲ್ಲಿ ಇದು ಮಹತ್ವ ಪಡೆದಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular