ಸೋಮವಾರ, ಏಪ್ರಿಲ್ 28, 2025
HomeSpecial StoryAshadha Maas 2023 : ಆಷಾಢದಲ್ಲಿ ಪತಿ-ಪತ್ನಿ ಯಾಕೆ ದೂರವಿರಬೇಕು?

Ashadha Maas 2023 : ಆಷಾಢದಲ್ಲಿ ಪತಿ-ಪತ್ನಿ ಯಾಕೆ ದೂರವಿರಬೇಕು?

- Advertisement -

ಹಿಂದೂ ಸಂಪ್ರದಾಯದ ಪ್ರಕಾರ, ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು (Ashadha Maas 2023) ಮಾಡುವುದಿಲ್ಲ. ಇನ್ನುಆಷಾಢ ಮಾಸದಲ್ಲಿ ಹೊಸದಾಗಿ ಮದುವೆಯಾದ ಗಂಡ ಹೆಂಡತಿ ಜೊತೆಗಿರಬಾರದು ಎನ್ನುವ ವಾಡಿಕೆ ಕೂಡ ಇದೆ. ಹೀಗಾಗಿ ಈ ಸಮಯದಲ್ಲಿ ಪತ್ನಿಯನ್ನು ಅವಳ ತವರಿಗೆ ಕಳುಹಿಸಿಕೊಂಡ ಸಂಪ್ರದಾಯ ಇದೆ. ಈ ಸಂಪ್ರಾದಯವು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ.

ಕರ್ನಾಟಕದಲ್ಲಿ ಹೊಸದಾಗಿ ಮದುವೆಯಾದವರು ಗಂಡ ಹೆಂಡತಿ ಜೊತೆಗಿರಬಾರದು ಎಂದು ಹೇಳಲಾಗುತ್ತದೆ. ಇನ್ನು ಆಂಧ್ರಪ್ರದೇಶದಲ್ಲಿ ಅತ್ತೆ ಸೊಸೆ ಒಂದೇ ಮನೆಯಲ್ಲಿ ಇರಬಾರದು ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಆಷಾಢ ಮಾಸದಲ್ಲಿ ಹೊಸದಾಗಿ ಮದುವೆಯಾದವರು ಜೊತೆಗಿರಬಾರದು ಎನ್ನುವ ಉದ್ದೇಶ ಈ ಆಚರಣೆಯಲ್ಲಿ ಇರುತ್ತದೆ.

ಆದರೆ ಆಷಾಢ ಮಾಸದಲ್ಲಿ ಹೊಸದಾಗಿ ಮದುವೆ ಆಗಿರುವ ನವ ಜೋಡಿಗಳಿಗೆ ಒಂದು ರೀತಿ ವಿರಹ ವೇದನೆ ಎಂದರೆ ತಪ್ಪಗಾಲ್ಲ, ಇದು ಅನಿವಾರ್ಯ ಆಗಿರುತ್ತದೆ. ಎಲ್ಲರಲ್ಲೂ ಕಾಡುವ ಪ್ರಶ್ನೆ ಎಂದರೆ ನಮ್ಮ ಹಿರಿಯರು ಈ ರೀತಿಯ ಆಚರಣೆ ತಂದಿರುವುದರ ಹಿಂದಿನ ಉದ್ದೇಶ ಏನಿರಬಹುದು ಎನ್ನುವುದು. ಈ ಪ್ರಶ್ನೆ ಈಗೀನ ಕಾಲದವರಿಗೂ ಕಾಡುವುದುಂಟು, ಅದರಲ್ಲೂ ಹೊಸದಾಗಿ ಮದುವೆಯಾದವರಿಗೆ ಪತ್ನಿಯನ್ನು ತವರು ಮನೆಗೆ ಕಳಿಸಬೇಕು ಎಂದರೆ ಸಾಕು ಈಗೀನ ಕಾಲದಲ್ಲೂ ಈ ಆಚರಣೆಯ ಅಗತ್ಯವಿದೆಯೇ ಎಂದು ಹೇಳುತ್ತಾರೆ. ನಮ್ಮ ಪೂರ್ವಜರು ಮಾಡಿಕೊಂಡು ಬಂದ ಆಚಾರ ವಿಚಾರ ಯಾವತ್ತಿಗೂ ಸುಳ್ಳಗುವುದಿಲ್ಲ. ಗಾದೆ ಮಾತೇ ಹೇಳುವಂತೆ ವೇದ ಸುಳ್ಳಾದರೂ ಗಾದೆ ಸುಳ್ಳಗಾಲ್ಲ ಎನ್ನುವ ಮಾತಿದೆ. ಅದರಂತೆ ಹಿರಿಯರು ಮಾಡಿಕೊಂಡು ಬಂದಿರುವ ಆಚರಣೆ ಪಕ್ಕ ಲೆಕ್ಕಚಾರವಿದೆ. ಈ ಕಾರಣದಿಂದಲೇ ಈ ಸಮಯದಲ್ಲಿ ನವ ದಂಪತಿ ಜೊತೆಯಾಗಿ ಇರಬಾರು ಎನ್ನಲಾಗುತ್ತದೆ.

ಆಷಾಢದಲ್ಲಿ ಪತಿ ಪತ್ನಿ ಸೇರಬಾರದು ಏನಿದರ ಲೆಕ್ಕಾಚಾರ ?
ಸಾಮಾನ್ಯವಾಗಿ ಈ ಸಮಯದಲ್ಲಿ ಹೊಸದಾಗಿ ಮದುವೆಯಾಗಿರುವ ದಂಪತಿಗಳು ದೈಹಿಕ ಸಂಪರ್ಕ ಮಾಡಿದರೆ, ಜೂನ್‌ – ಜುಲೈ ತಿಂಗಳಲ್ಲಿ ಗರ್ಭಿಣಿಯಾದರೆ ಮಾರ್ಚ್‌ -ಏಪ್ರಿಲ್‌ ನಲ್ಲಿ ಹೆರಿಗೆಯಾಗುತ್ತದೆ. ಈ ಸಮಯದಲ್ಲಿ ಸಾಮಾನ್ಯವಾಗಿ ಬೇಸಿಗೆ ತಾಪಮಾನ ಹೆಚ್ಚು ಇರುವುದರಿಂದ ಆಗ ತಾನೇ ಹುಟ್ಟಿರುವ ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೀಗಾಗಿ ಈ ಸಮಯದಲ್ಲಿ ಹೊಸದಾಗಿ ಮದುವೆ ಆಗಿರುವ ಪತಿ-ಪತ್ನಿ ದೂರವಿರಬೇಕುವ ಎನ್ನುವ ಹಿರಿಯರ ಲೆಕ್ಕಚಾರದ ಉದ್ದೇಶವಾಗಿದೆ.

ಇದನ್ನೂ ಓದಿ : World Richest Beggar : ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ ಭರತ್ ಜೈನ್: ಭಿಕ್ಷೆ ಬೇಡಿ ಈತ ಸಂಪಾದಿಸಿದ್ದು ಬರೋಬ್ಬರಿ 7.5 ಕೋಟಿ

ಇದನ್ನೂ ಓದಿ : Guru Purnima 2023 : ಗುರು ಪೂರ್ಣಿಮಾ 2023 : ಇಂದು ದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಆಷಾಢ ಪೂರ್ಣಿಮೆ ಆಚರಣೆ

ಅದರಲ್ಲೂ ಮೊದಲ ಮಗು ಮನೆಯ ವಾರಸುದಾರ ಎನ್ನುವ ಲೆಕ್ಕಚಾರ ತುಂಬಾ ಜನರಿಗೆ ಇದೆ. ಆಷಾಢದಲ್ಲಿ ಗರ್ಭಿಣಿಯಾದರೆ ಮಗು ಚೈತ್ರ ಮಾಸದಲ್ಲಿ ಜನಿಸುತ್ತದೆ. ಚೈತ್ರ ಮಾಸದಲ್ಲಿ ಸಾಮಾನ್ಯವಾಗಿ ಮೇಷ ರಾಶಿ ಬರುತ್ತದೆ. ಆಗ ಈ ರಾಶಿಗೆ ಬುಧ ಹಾಗೂ ಶುಕ್ರ ಸೂರ್ಯಿಗೆ ಸಮೀಪದಲ್ಲಿ ಇರುತ್ತದೆ. ಈ ಸಮಯದಲ್ಲಿ ಬುಧ ದುರ್ಬಲವಾಗುವುದು, ಬುಧ ದುರ್ಬಲವಾಗಿರುವ ಸಮಯದಲ್ಲಿ ಮಗು ಜನಿಸಿದರೆ ಅದು ಅಷ್ಟು ಶುಭಕರವಲ್ಲ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಮೊದಲ ಮುಗುವಿನ ಜನನ ಆಗಬಾರದು ಎನ್ನುವ ಕಾರಣ ಕೂಡ ಇದೆ.

Ashadha Maas 2023 : Why should husband and wife stay away in Ashadha?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular