ಮಂಗಳವಾರ, ಏಪ್ರಿಲ್ 29, 2025
HomeSpecial StorySleeping Hanuman : ಮಲಗಿದ ರೂಪದಲ್ಲಿದ್ದಾನೆ ಹನುಮಂತ ; ಭಕ್ತನ ಕೋರಿಕೆಗಾಗಿ ಈ ರೂಪ

Sleeping Hanuman : ಮಲಗಿದ ರೂಪದಲ್ಲಿದ್ದಾನೆ ಹನುಮಂತ ; ಭಕ್ತನ ಕೋರಿಕೆಗಾಗಿ ಈ ರೂಪ

- Advertisement -

Sleeping Hanuman : ಆಂಜನೇಯ, ವಿಶಾಲ ದೇಹಿ. ಈತ ಭಗವಂತನೂ ಹೌದು ಭಕ್ತನೂ ಹೌದು . ಭಕ್ತರ ಪಾಲಿಗಂತೂ ವಾಯುಪುತ್ರ ಬಿಗ್ ಬಾಸ್ . ಗದೆಯನ್ನು ಹಿಡಿದು ನಿಂತ ಗಾಂಭೀರ್ಯವನ್ನು ನೋಡಿದ್ರೆ ಎಂಥವರಿಗಾದರೂ ಮೈ ಜುಂ ಅನಿಸದೇ ಇರದು . ಅವನು ಒಂದು ಬಾರಿ ಒಲಿದ್ರೆ ಅಲ್ಲಿ ದುಷ್ಟ ಶಕ್ತಿಗಳಿಗೆ ಜಾಗವಿಲ್ಲ. ಆದ್ರೆ ಈ ದೇವಾಲಯದಲ್ಲಿ ಮಾತ್ರ ಅಂಜನೀಪುತ್ರ ಈ ಗಾಂಭೀರ್ಯದ ರೂಪವನ್ನು ಬಿಟ್ಟು ಶಾಂತ ರೀತಿಯಲ್ಲಿ ಮಲಗಿದ್ದಾನೆ.

ಹೌದು, ಸಾಮಾನ್ಯವಾಗಿ ನಮ್ಮ ದೇವಾಲಯದಲ್ಲಿ ಕಾಣೋ ಹನುಮಂತನ ರೂಪ ಅಂದ್ರೆ ಅದು ಗದೆಯನ್ನು ಹಿಡಿದು ನಿಂತಿರುವ ವಿರಾಟ ರೂಪವನ್ನು. ಆದ್ರೆ ಈ ದೇವಾಲಯದಲ್ಲಿ ಮಾತ್ರ ನಿಂತಿರುವ ವಿಗ್ರಹದ ಬದಲಾಗಿ ಮಲಗಿದ ರೂಪದಲ್ಲಿ ವಾಯುಪುತ್ರ ನಮಗೆ ದರ್ಶನ ನೀಡುತ್ತಾನೆ. ಕೇವಲ ಭಾರತದ ಮೂರು ದೇವಾಲಯದಲ್ಲಿ ಈ ರೂಪದ ಹನುಮನ ವಿಗ್ರಹವನ್ನು ಕಾಣಬಹುದು.

ಇಲ್ಲಿ ಹನುಮಂತ ಶಿಲಾರೂಪದಲ್ಲಿ ನೆಲೆ ನಿಂತಿದ್ದಾನೆ. ಇಲ್ಲಿ ಸ್ವತಹ ಹನುಮಂತನೇ ಮಲಗಿದ್ದಾನೆ (Sleeping Hanuman) ಎಂಬ ನಂಬಿಕೆ ಇದೆ. ಹೀಗಾಗಿ ಭಕ್ತರು ತಮ್ಮ ಕಷ್ಟವನ್ನು ನಿವಾರಿಕೊಳ್ಳಲು ಇಲ್ಲಿಗೆ ಬರುತ್ತಾರೆ . ಇನ್ನು ಈ ಉದ್ಬವ ಶಿಲೆಯನ್ನು ಹನುಂತನೇ ಅಂದು ಕೊಳ್ಳಲು ಕೂಡಾ ಒಂದು ಕಾರಣವಿದೆ . ಪೌರಾಣಿಕ ಕಥೆಗಳ ಪ್ರಕಾರ ಈ ದೇವಾಲಯ ವಿರೊ ಮಹಾರಾಷ್ಟ್ರದ ಕುಲ್ಹಬಾದ್ ನಗರ ಮೊದಲು ಭದ್ರಾವತಿ ಎಂದು ಕರೆಸಿಕೊಳ್ಳುವ ರಾಜ್ಯವಾಗಿತ್ತಂತೆ . ಇಲ್ಲಿ ಭದ್ರಸೇನಾ ಅನೋ ರಾಜ ಆಳುತ್ತಿದ್ದ . ಅವನು ರಾಮ ನ ಪರಮ ಭಕ್ತನಾಗಿದ್ದ, ಜೊತೆಗೆ ಆತ ಪ್ರತಿ ದಿನ ರಾಮನ ಕುರಿತು ಹಾಡುಗಳನ್ನು ಹಾಡುತ್ತಿದ್ದ.

ಒಂದು ದಿನ ಅದೇ ದಾರಿಯಲ್ಲಿ ತೆರಳುತ್ತಿದ್ದ ಹನುಮಂತ ಆತನ ಹಾಡಿಗೆ ಮನಸೋತು ನಿದ್ರಾಭಂಗಿಯಲ್ಲಿ ಭಾವ ಸಮಾಧಿಗೆ ಇಳಿದನಂತೆ . ಆಗ ಭದ್ರಸೇನನು ಆಂಜನೇಯ ಸ್ವಾಮಿಯ ಬಳಿ ಇಲ್ಲಿ ನೆಲೆಸಿ ಭಕ್ತರು ಹಾಗೂ ರಾಜ್ಯವನ್ನು ಕಾಯವಂತೆ ಕೇಳಿಕೊಂಡನಂತೆ . ಅಂದಿನಿಂದ ಈ ಶೀಲಾರೂಪದಲ್ಲಿ ಹನುಮಂತ ಇಲ್ಲೇ ನೆಲೆಸಿದ ಅನ್ನೋ ನಂಬಿಕೆ ಭಕ್ತರದು.

ಇನ್ನು ಈ ದೇವಾಲಯವು ಹಳೆಯ ದೇವಾಲಯ ವಾಗಿದ್ದರೂ , ಇದಕ್ಕೆ ಜೀರ್ಣೋಧಾರ ಮಾಡಿ ಹೊಸ ರೂಪ ನೀಡಲಾಗಿದೆ. ಇಲ್ಲಿಯ ಛಾವಣಿಗೆ ಬಣ್ಣದ ಹರಳುಗಳನ್ನು ಅಳವಡಿಸಲಾಗಿದ್ದು, ಛಾವಣಿಯ ತುಂಬೆಲ್ಲಾ ಹನುಮಾನ್ ಚಾಲೀಸ ದ ಬರಹಗಳನ್ನು ಕೆತ್ತಲಾಗಿದೆ. ಇದು ಭಕ್ತರನು ಮಂತ್ರಮಗ್ದ ಗೊಳಿಸುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಇಲ್ಲಿ ಹನುಮಜಯಂತಿ, ರಾಮ ನವಮಿ ಹಾಗೂ ಶನಿವಾರದಂದು ಹೆಚ್ಚಾಗಿ ಜನರು ಬರುತ್ತಾರೆ.

ಇನ್ನು ಈ ದೇವಾಲಯವು ಗೃಷ್ಣೇಶ್ವರ ಜೋತಿರ್ಲಿಂಗದ ಬಳಿ ಇರೋದ್ರಿಂದ ಅಲ್ಲಿಗೆ ಬರೋ ಭಕ್ತರು ತಪ್ಪದೇ ಇಲ್ಲಿಗೂ ಬಂದು ಹೋಗುತ್ತಾರೆ .ಇಲ್ಲಿಂದ ಗೃಷ್ಣೇಶ್ವರ ಜೋತಿರ್ಲಿಂಗ ಸುಮಾರು 4 ಕಿಲೋ ಮೀಟರದ ದೂರದಲ್ಲಿದೆ. ಇನ್ನು ಇದರ ಪಕ್ಕವೇ ಎಲ್ಲೋರ ಗುಹೆಗಳು ಕೂಡಾ ಇದ್ದು ಅದು ಕೂಡಾ 4 ಕಿಮೀ ನಷ್ಟು ದೂರದಲ್ಲಿದೆ. ನೀವು ಇಲ್ಲಿಗೆ ಬಂದ್ರೆ 4 ಸ್ಥಳಗಳನ್ನು ಒಟ್ಟಿಗೆ ಸಂದರ್ಶಿಸಬಹುದು.

ಇದನ್ನೂ ಓದಿ : ಶಿವರಾತ್ರಿಯ ರಾತ್ರಿ ಜಾಗರಣೆಯಿಂದ ಮೋಕ್ಷ ಪ್ರಾಪ್ತಿ

ಇದನ್ನೂ ಓದಿ : Halu Rameshwara Temple : ಪುರಾಣ ಪ್ರಸಿದ್ಧ ತಾಣ ಹಾಲು ರಾಮೇಶ್ವರ

Sleeping Hanuman Temple At Khuldabad Maharashtra

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular