ಭಾನುವಾರ, ಜೂನ್ 15, 2025
HomeSportsCricketBCCI Ignored Sanju Samson : ನತದೃಷ್ಟ ಸಂಜು ಸ್ಯಾಮ್ಸನ್ ! ಮುಂಬೈಕರ್ ಭವಿಷ್ಯಕ್ಕಾಗಿ ಕೇರಳ...

BCCI Ignored Sanju Samson : ನತದೃಷ್ಟ ಸಂಜು ಸ್ಯಾಮ್ಸನ್ ! ಮುಂಬೈಕರ್ ಭವಿಷ್ಯಕ್ಕಾಗಿ ಕೇರಳ ಆಟಗಾರನಿಗೆ ಇದೆಂಥಾ ಅನ್ಯಾಯ ?

- Advertisement -

ಲಂಡನ್: ಭಾರತೀಯ ಕ್ರಿಕೆಟ್”ನಲ್ಲಿ ಮುಂಬೈ ಲಾಬಿ ಕೆಲಸ ಮಾಡುವುದು ಇವತ್ತು ನಿನ್ನೆಯದ್ದಲ್ಲ. ಅದಕ್ಕೆ ದೊಡ್ಡ ಇತಿಹಾಸವೇ ಇದೆ. ಮುಂಬೈ ಆಟಗಾರರ ಭವಿಷ್ಯಕ್ಕಾಗಿ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳ ಆಟಗಾರರನ್ನು ಕಡೆಗಣಿಸುವುದು ಹಲವಾರು ವರ್ಷಗಳಿಂದ ನಡೆಯುತ್ತಲೇ ಬಂದಿವೆ. ಆ ಸಾಲಿಗೆ ಈಗ ಹೊಸ ಸೇರ್ಪಡೆ ಕೇರಳದ ಪ್ರತಿಭಾನ್ವಿತ ವಿಕೆಟ್ ಕೀಪರ್ ಬ್ಯಾಟ್ಸ್’ಮನ್, ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ (BCCI Ignored Sanju Samson).

ಕ್ರಿಕೆಟ್”ನಲ್ಲಿ ಅವಕಾಶ ಸಿಗ್ಬೇಕು ಅಂದ್ರೆ ಪ್ರತಿಭೆಯ ಜೊತೆ ಅದೃಷ್ಟವೂ ಮುಖ್ಯ. ಪ್ರತಿಭೆಯಿದ್ದೂ ಅದೃಷ್ಟವಿಲ್ಲದಿದ್ದರೆ ಆಟಗಾರನೊಬ್ಬನ ಪರಿಸ್ಥಿತಿ ಏನು ಎಂಬುದಕ್ಕೆ ಒಳ್ಳೆಯ ಉದಾಹರಣೆ ಕೇರಳದ ಸಂಜು ಸ್ಯಾಮ್ಸನ್. ಮುಂಬೈ ಆಟಗಾರ ಶ್ರೇಯಸ್ ಅಯ್ಯರ್ ಅವರ ಹಿತ ಕಾಯುವ ಸಲುವಾಗಿ ಸಂಜು ಸ್ಯಾಮ್ಸನ್ ಅವರಿಗೆ ಬಿಸಿಸಿಐ ಮತ್ತೊಮ್ಮೆ ಅನ್ಯಾಯ ಮಾಡಿದೆ. ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಆಯ್ಕೆ ಮಾಡಲಾಗಿರುವ ಭಾರತ ತಂಡದಿಂದ ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಲಾಗಿದ್ದು, ಔಟ್ ಆಫ್ ಫಾರ್ಮ್ ಶ್ರೇಯಸ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಶ್ರೇಯಸ್ ಅಯ್ಯರ್ ಭವಿಷ್ಯಕ್ಕಾಗಿ ಸಂಜು ಸ್ಯಾಮ್ಸನ್ ಅವರನ್ನು ಬಲಿ ಕೊಡಲಾಗಿದೆ ಎಂದು ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್, ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಕಿಡಿ ಕಾರಿದ್ದಾರೆ.

28 ವರ್ಷದ ಶ್ರೇಯಸ್ ಅಯ್ಯರ್ ಕಳೆದ 8 ಅಂತಾರಾಷ್ಟ್ರೀಯ ಇನ್ನಿಂಗ್ಸ್”ಗಳಲ್ಲಿ ಕನಿಷ್ಠ ಅರ್ಧಶತಕವನ್ನೂ ಬಾರಿಸಿಲ್ಲ.

ಕಳೆದ 8 ಅಂತಾರಾಷ್ಟ್ರೀಯ ಇನ್ನಿಂಗ್ಸ್”ಗಳಲ್ಲಿ ಶ್ರೇಯಸ್ ಅಯ್ಯರ್:
36 Vs ದಕ್ಷಿಣ ಆಫ್ರಿಕಾ ( ಟಿ20)
40 Vs ದಕ್ಷಿಣ ಆಫ್ರಿಕಾ ( ಟಿ20)
14 Vs ದಕ್ಷಿಣ ಆಫ್ರಿಕಾ ( ಟಿ20)
04 Vs ದಕ್ಷಿಣ ಆಫ್ರಿಕಾ ( ಟಿ20)
0* Vs ದಕ್ಷಿಣ ಆಫ್ರಿಕಾ ( ಟಿ20)
15 Vs ಇಂಗ್ಲೆಂಡ್ (ಟೆಸ್ಟ್)
19 Vs ಇಂಗ್ಲೆಂಡ್ (ಟೆಸ್ಟ್)
28 Vs ಇಂಗ್ಲೆಂಡ್ ( ಟಿ20)

28 ವರ್ಷದ ಸಂಜು ಸ್ಯಾಮ್ಸನ್ ಐರ್ಲೆಂಡ್ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯದಲ್ಲಿ ಕೇವಲ 42 ಎಸೆತಗಳಲ್ಲಿ 77 ರನ್ ಸಿಡಿಸಿದ್ದರು. ಮೊದಲ ಪಂದ್ಯದಲ್ಲಿ ಸಂಜುಗೆ ಆಡುವ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ.

ಟಿ20 ಯಲ್ಲಿ ಸಂಜು ಸ್ಯಾಮ್ಸನ್”ಗೆ ನೀಡಲಾಗಿರುವ ಅವಕಾಶ:
1 ಟಿ20 Vs ಜಿಂಬಾಬ್ವೆ, 2015 ಜುಲೈ
1 ಟಿ20 Vs ಶ್ರೀಲಂಕಾ , 2020 ಜನವರಿ
2 ಟಿ20 Vs ನ್ಯೂಜಿಲೆಂಡ್, 2020 ಫೆಬ್ರವರಿ
3 ಟಿ20 Vs ಆಸ್ಟ್ರೇಲಿಯಾ, 2020 ಡಿಸೆಂಬರ್
3 ಟಿ20 Vs ಶ್ರೀಲಂಕಾ , 2021 ಜುಲೈ
2 ಟಿ20 Vs ಶ್ರೀಲಂಕಾ , 2022 ಫೆಬ್ರವರಿ
1 ಟಿ20 Vs ಐರ್ಲೆಂಡ್, 2022 ಜೂನ್

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟು ಔಟ್ ಆಫ್ ಫಾರ್ಮ್ ಶ್ರೇಯಸ್ ಅಯ್ಯರ್”ಗೆ ಅವಕಾಶ ನೀಡಿರುವುದಕ್ಕೆ ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

“ಈಗ ಫಾರ್ಮ್ ಅಥವಾ ರನ್ ಗಳಿಸುವ ಮಾನದಂಡದ ಮೇಲೆ ಭಾರತ ತಂಡವನ್ನು ಆಯ್ಕೆ ಮಾಡಲಾಗುತ್ತಿಲ್ಲ. ಬಿಸಿಸಿಐ ಬಾಸ್”ಗಳ ಫೇವರಿಟ್ ಆಟಗಾರರನ್ನಷ್ಟೇ ತಂಡಕ್ಕೆ ಆಯ್ಕೆ ಮಾಡಲಾಗುತ್ತಿದೆ. ಆಡಿದ ಕಡೆಯ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 77 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲ, ಕೊನೆಯ 3 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 134 ರನ್ ಕಲೆ ಹಾಕಿದ್ದಾರೆ. ವೇಗದ ಬೌಲಿಂಗ್ ಹಾಗೂ ಶಾರ್ಟ್ ಬಾಲ್ ವಿರುದ್ಧ ಪರಿಣಾಮಕಾರಿ ಆಡುವ ಬ್ಯಾಟ್ಸ್”ಮನ್”ಗಳಲ್ಲಿ ಸಂಜು ಸ್ಯಾಮ್ಸನ್ ಕೂಡ ಒಬ್ಬರು” ಎಂದು ಕ್ರಿಕೆಟ್ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

https://twitter.com/kingashu1008/status/1547510602217578498?s=20&t=DEiNpK9_O-NzUrZ17netDA
https://twitter.com/cricklover99/status/1547510733084057601?s=20&t=DEiNpK9_O-NzUrZ17netDA

ಇದನ್ನೂ ಓದಿ : Sourav Ganguly backs Virat Kohli : ವಿರಾಟ್ ಬಗ್ಗೆ ಯಾರೂ ಕಮಕ್ ಕಿಮಕ್ ಅನ್ನಂಗಿಲ್ಲ,ಕೊಹ್ಲಿಗೆ ಸಿಕ್ತು ದಾದಾ ಸಪೋರ್ಟ್ !

ಇದನ್ನೂ ಓದಿ : Robin Uthappa blessed with a baby girl : ರಾಬಿನ್ ಉತ್ತಪ್ಪಗೆ ಹೆಣ್ಣು ಮಗು, 2ನೇ ಮಗುವಿಗೆ ತಂದೆಯಾದ ಕೊಡಗಿನ ವೀರ

BCCI Ignored Sanju Samson for Shreyas Iyer

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular