ಸೋಮವಾರ, ಏಪ್ರಿಲ್ 28, 2025
HomeSportsCricketHardik Pandya captaincy: ಟಿ20 ಸರಣಿ: ವಿಂಡೀಸ್ ವಿರುದ್ಧ ಭಾರತದ ಸರಣಿ ಸೋಲಿಗೆ ಹಾರ್ದಿಕ್ ಪಾಂಡ್ಯನೇ...

Hardik Pandya captaincy: ಟಿ20 ಸರಣಿ: ವಿಂಡೀಸ್ ವಿರುದ್ಧ ಭಾರತದ ಸರಣಿ ಸೋಲಿಗೆ ಹಾರ್ದಿಕ್ ಪಾಂಡ್ಯನೇ ಕಾರಣ

- Advertisement -

ಫ್ಲೋರಿಡಾ: Hardik Pandya captaincy : ಭಾರತ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ 8 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿರುವ ವೆಸ್ಟ್ ಇಂಡೀಸ್, 5 ಪಂದ್ಯಗಳ ಟಿ20 ಸರಣಿಯನ್ನು (India Vs West Indies t20 series) 3-2 ಅಂತರದಲ್ಲಿ ಗೆದ್ದುಕೊಂಡಿದೆ. ಇದು 2021ರ ನಂತರ ಟಿ20 ದ್ವಿಪಕ್ಷೀಯ ಸರಣಿಯಲ್ಲಿ ಭಾರತಕ್ಕೆ ಎದುರಾಗಿರುವ ಮೊದಲ ಸರಣಿ ಸೋಲು. ಫ್ಲೋರಿಡಾದಲ್ಲಿರುವ ಲಾಡರ್’ಹಿಲ್ ಮೈದಾನದಲ್ಲಿ ಭಾನುವಾರ ನಡೆದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ, ನಿಗದಿತ 20 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಕಲೆ ಹಾಕಿತು.

ಗೆಲ್ಲಲು ಭಾರತ ಒಡ್ಡಿದ 166 ರನ್’ಗಳ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್, ಓಪನರ್ ಬ್ರೆಂಡನ್ ಕಿಂಗ್ 55 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್’ಗಳ ನೆರವಿನಿಂದ ಬಾರಿಸಿದ ಸ್ಫೋಟಕ ಅಜೇಯ 85 ರನ್ ಹಾಗೂ ನಿಕೊಲಸ್ ಪೂರನ್ 35 ಎಸೆತಗಳಲ್ಲಿ 4 ಸಿಕ್ಸರ್’ಗಳ ನೆರವಿನಿಂದ ಸಿಡಿಸಿದ 47 ರನ್’ಗಳ ಬಲದಿಂದ 8 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿತು.

5ನೇ ಟಿ20 ಪಂದ್ಯದಲ್ಲಿ ಭಾರತದ ಸೋಲಿಗೆ ಹಾರ್ದಿಕ್ ಪಾಂಡ್ಯ ಅವರ ಕಳಪೆ ನಾಯಕತ್ವವೇ ಕಾರಣ. ಇಡೀ ಇನ್ನಿಂಗ್ಸ್’ನಲ್ಲಿ ಪಾಂಡ್ಯ, ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಅವರಿಗೆ ನೀಡಿದ್ದು ಒಂದೇ ಒಂದು ಓವರ್. ವಿಂಡೀಸ್ ಗೆಲುವಿಗೆ 30 ಎಸೆತಗಳಲ್ಲಿ 34 ರನ್ ಬೇಕಿದ್ದಾಗ ಯುಜ್ವೇಂದ್ರ ಚಹಲ್’ಗೆ 16ನೇ ಓವರ್’ನಲ್ಲಿ ಬೌಲಿಂಗ್ ಮಾಡಿದ ಪಾಂಡ್ಯ, ಭಾರತದ ಸೋಲಿಗೆ ಕಾರಣರಾದರು. ಈ ಓವರ್’ನಲ್ಲಿ ಚಹಲ್ 2 ಸಿಕ್ಸರ್’ಗಳ ಸಹಿತ 16 ರನ್ ಬಿಟ್ಟುಕೊಟ್ಟರು. ಅಷ್ಟೇ ಅಲ್ಲ, ತಮ್ಮ 4 ಓವರ್’ಗಳಲ್ಲಿ 51 ರನ್ ನೀಡಿ ದುಬಾರಿಯಾದರು.

ಇನ್ನು 17ನೇ ಓವರ್’ನಲ್ಲಿ ಪಾರ್ಟ್’ಟೈಮರ್ ತಿಲಕ್ ವರ್ಮಾಗೆ ಪಾಂಡ್ಯ ಬೌಲಿಂಗ್ ನೀಡಿದರು. ಆ ಓವರ್’ನಲ್ಲಿ 12 ರನ್ ಬಂದ್ರೆ, 18ನೇ ಓವರ್’ನಲ್ಲಿ ಮತ್ತೊಬ್ಬ ಪಾರ್ಟ್ ಟೈಮ್ ಬೌಲರ್ ಯಶಸ್ವಿ ಜೈಸ್ವಾಲ್ 11 ರನ್ ನೀಡಿ ಭಾರತದ ಸೋಲಿಗೆ ಕಾರಣರಾದರು. ಅನುಭವಿ ಅಕ್ಷರ್ ಪಟೇಲ್ ಅವರನ್ನು ಕಡೆಗಣಿಸಿ ಸ್ಲಾಗ್ ಓವರ್’ಗಳಲ್ಲಿ ಚಹಲ್, ತಿಲಕ್ ವರ್ಮಾ ಮತ್ತು ಯಶಸ್ವಿ ಜೈಸ್ವಾಲ್’ಗೆ ಬೌಲಿಂಗ್ ನೀಡುವ ಮೂಲಕ ನಾಯಕ ಹಾರ್ದಿಕ್ ಪಾಂಡ್ಯ ಭಾರತ ತಂಡದ ಸೋಲಿಗೆ ನೇರ ಕಾರಣರಾಗಿದ್ದಾರೆ. ಪಾಂಡ್ಯ ಅವರ ಕಳಪೆ ನಾಯಕತ್ವವನ್ನು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕಾಮೆಂಟರಿ ವೇಳೆ ಕಟುವಾಗಿ ಟೀಕಿಸಿದ್ದಾರೆ. ಇದನ್ನೂ ಓದಿ : Hardik Pandya Nicholas Pooran: ಪೂರನ್’ಗೆ ಚಾಲೆಂಜ್ ಹಾಕಿ ಸಿಕ್ಸರ್ ಚಚ್ಚಿಸಿಕೊಂಡ ಬಿಲ್ಡಪ್ ರಾಜ ಪಾಂಡ್ಯ

“ಹಾರ್ದಿಕ್ ಪಾಂಡ್ಯನ ನಾಯಕತ್ವ, ಆತ ಏನು ಮಾಡುತ್ತಿದ್ದಾನೆ ಎಂಬುದು ಅರ್ಥವೇ ಆಗುತ್ತಿಲ್ಲ. ಐಪಿಎಲ್’ನಲ್ಲಿ ಆತ ಉತ್ತಮ ನಾಯಕನಂತೆ ಕಾಣುತ್ತಾನೆ. ಕಾರಣ ಆತನಿಗೆ ಸಲಹೆ ನೀಡಲು ಬೌಂಡರಿ ಗೆರೆಯ ಬಳಿ ಆಶಿಶ್ ನೆಹ್ರಾ ನಿಂತಿರುತ್ತಾರೆ. ಆದರೆ ಭಾರತ ತಂಡದ ನಾಯಕನಾಗಿ ಇಲ್ಲಿಯವರೆಗೆ ಪಾಂಡ್ಯ ಸಂಪೂರ್ಣ ಖಾಲಿ ತಲೆಯವನಾಗಿ ಕಾಣುತ್ತಿದ್ದಾನೆ” ಎಂದು ಆಕಾಶ್ ಚೋಪ್ರಾ ಅಭಿಪ್ರಾಯ ಪಟ್ಟಿದ್ದಾರೆ.

Hardik Pandya captaincy: T20 series: Hardik Pandya is responsible for India’s series defeat against West Indies

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular