ಭಾನುವಾರ, ಜೂನ್ 15, 2025
Homekarnatakaಕಾಳಿನದಿ ಸೇತುವೆ ಕುಸಿತ, ಚಾಲಕನ ಸಮೇತ ನದಿಗೆ ಉರುಳಿದ ಲಾರಿ : ಗೋವಾ- ಕಾರವಾರ ಸಂಪರ್ಕ...

ಕಾಳಿನದಿ ಸೇತುವೆ ಕುಸಿತ, ಚಾಲಕನ ಸಮೇತ ನದಿಗೆ ಉರುಳಿದ ಲಾರಿ : ಗೋವಾ- ಕಾರವಾರ ಸಂಪರ್ಕ ಕಡಿತ

- Advertisement -

Bridge Collapses In Kali river  : ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತ ಪ್ರಕರಣದ ಬೆನ್ನಲ್ಲೇ 60 ವರ್ಷಗಳಷ್ಟು ಹಳೆಯ ಸೇತುವೆ ಕುಸಿದಿದೆ. ಸೇತುವೆಯಲ್ಲಿ ಸಂಚಾರ ಮಾಡುತ್ತಿದ್ದ ತಮಿಳುನಾಡಿನ ಲಾರಿ ಚಾಲಕ ಲಾರಿ ಸಮೇತನಾಗಿ ಕಾಳಿ ನದಿಗೆ ಉರುಳಿ ಬಿದ್ದಿದ್ದಾನೆ. ಆದರೆ ಮೀನುಗಾರರು ಚಾಲಕನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Bridge Collapses In Kali river Karwar - Goa Travel ban
Image Credit : Namma UK /Facebook

ಕಾರವಾರದ ಕೋಡಿಬಾಗ್‌ ಎಂಬಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ 60 ವರ್ಷಗಳಷ್ಟು ಹಳೆಯ ಸೇತುವೆ ಇದಾಗಿದ್ದು, ನಿನ್ನೆ ಮಧ್ಯರಾತ್ರಿ ಸೇತುವೆ ಏಕಾಏಕಿ ಕುಸಿದಿದೆ. ರಾತ್ರಿಯ ಸಮಯವಾಗಿದ್ದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಜನರ ಸಂಚಾರ ಇರಲಿಲ್ಲ. ಇದರಿಂದಾಗಿ ಸಂಭವಿಸಬಹುದಾಗಿದ್ದ ಬಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಇದನ್ನೂ ಓದಿ : ಟೀಮ್‌ ಕುಂದಾಪುರಿಯನ್ಸ್‌ : ಸಿಲಿಕಾನ್‌ ಸಿಟಿಯಲ್ಲಿ ಮನಗೆದ್ದ ಆಸಾಡಿ ಹಬ್ಬ

ಸೇತುವೆ ಕುಸಿಯುವ ವೇಳೆಯಲ್ಲಿ ತಮಿಳುನಾಡಿನ ಲಾರಿ ಚಾಲಕ ಮುರುಗನ್‌ ಎಂಬಾತ ಸೇತುವೆಯ ಮೇಲೆ ಲಾರಿಯನ್ನು ಚಲಾಯಿಸುತ್ತಿದ್ದ. ಆದರೆ ಒಮ್ಮಿಂದೊಮ್ಮೆಲೆ ಸೇತುವೆ ತುಂಡಾಗಿ ನದಿಗೆ ಉರುಳಿದ ಹಿನ್ನೆಲೆಯಲ್ಲಿ ಮುರುಗನ್‌ ಲಾರಿ ಸಮೇತ ನದಿಗೆ ಬಿದ್ದಿದ್ದಾನೆ. ಈ ವೇಳೆಯಲ್ಲಿ ಪೊಲೀಸರು ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಲಾರಿ ಚಾಲಕನನ್ನು ರಕ್ಷಿಸುವಲ್ಲಿ ಯಶಸ್ವಿ ಆಗಿದ್ದಾರೆ. ಸದ್ಯ ಚಾಲಕ ಮುರುಗನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Bridge Collapses In Kali river Karwar - Goa Travel ban
Image Credit : Namma UK /Facebook

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಘಟನೆ ನಡೆದಿದ್ದು, ಗೋವಾ ಹಾಗೂ ಕಾರವಾರ ನಡುವೆ ಸಂಪರ್ಕ ಕಡಿತಗೊಂಡಿದೆ. ಹಳೆಯ ಸೇತುವೆ ಕುಸಿದಿದ್ದು, ಹೊಸ ಸೇತುವೆಯ ಮೇಲೆ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ. ಸದ್ಯ ಒಂದು ಲಾರಿ ನದಿಗೆ ಲಾರಿ ಉರುಳಿ ಬಿದ್ದಿದ್ದು, ಇನ್ನಷ್ಟು ವಾಹನಗಳು ನದಿಗೆ ಉರುಳಿ ಬಿದ್ದಿವೆಯಾ ಅನ್ನೋ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ : ಪರಶುರಾಮನ ಶಿಲ್ಪಿ ಮನೆಗೆ ಮುನಿಯಾಲು ಬಂದಿದ್ಯಾಕೆ ? ಬಿಲ್ಲವನಾಗಿ ಹುಟ್ಟಿದ್ದೇ ತಪ್ಪಾ? 

ಕಳೆದ ಒಂದು ತಿಂಗಳಿನಿಂದಲೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಕಳೆದ ಹತ್ತು ದಿನಗಳ ಹಿಂದೆಯಷ್ಟೇ ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ಗುಡ್ಡ ಕುಸಿತ ದುರಂತ ಸಂಭವಿಸಿದ್ದು, ಲಾರಿ ಚಾಲಕ ಸೇರಿದಂತೆ ನಾಪತ್ತೆಯಾಗಿರುವ ಮೂರು ಮಂದಿಯ ಸುಳಿವು ಇನ್ನೂ ದೊರೆತಿಲ್ಲ. ಈ ನಡುವಲ್ಲೇ ಮತ್ತೊಂದು ಘಟನೆ ಸಂಭವಿಸಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಹಣ ಯಾವಾಗ ಬಿಡುಗಡೆ ಆಗುತ್ತೆ ? ಇಲ್ಲಿದೆ ಮಹತ್ವದ ಸುದ್ದಿ

Bridge Collapses In Kali river Karwar – Goa Travel ban

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular