ಸೋಮವಾರ, ಜೂನ್ 16, 2025
HomekarnatakaHamsalekha Complaint : ಸಂಕಷ್ಟಕ್ಕೆ ಸಿಲುಕಿದ ಹಂಸಲೇಖ : ನಾದಬ್ರಹ್ಮನ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು

Hamsalekha Complaint : ಸಂಕಷ್ಟಕ್ಕೆ ಸಿಲುಕಿದ ಹಂಸಲೇಖ : ನಾದಬ್ರಹ್ಮನ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು

- Advertisement -

ಬೆಂಗಳೂರು : ಮೈಸೂರಿನ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಾದ ಸೃಷ್ಟಿಸಿದ ಸಂಗೀತ ನಿರ್ದೇಶಕ ಹಂಸಲೇಖ ಮತ್ತೆ ಸಂಕಷ್ಟಕ್ಕೆ ಗುರಿಯಾಗಿದ್ದು, ಹಂಸಲೇಖರಿಂದ ಬಹಿರಂಗ ಕ್ಷಮೆಯಾಚನೆಗೆ ಆಗ್ರಹಿಸಿ ಅಖಿಲ್ ಭಾರತ ಬ್ರಾಹ್ಮಣ ಸಮಾಜ ಪೊಲೀಸ್‌ ಕಮಿಷನರ್ ಕಚೇರಿ ಮೆಟ್ಟಿಲೇರಿದ್ದಾರೆ. ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿ ಕುಳಿತು ಬರುತ್ತಿದ್ದರಷ್ಟೇ, ದಲಿತರ ಮನೆಯಲ್ಲಿ ಕೋಳಿ ಕೊಟ್ಟರೇ ತಿನ್ನಲಿಕ್ಕಾಗುತ್ತದೆಯೇ ಎಂಬುದನ್ನು ಸೇರಿದಂತೆ ಅವಹೇಳನಕಾರಿ ಯಾಗಿ ಮಾತನಾಡಿದ್ದರು.

ಈ ಹಿನ್ನೆಲೆಯಲ್ಲಿ ಹಂಸಲೇಖ ವಿರುದ್ದ ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.‌ಬಳಿಕ ಎಚ್ಚೆತ್ತ ಹಂಸಲೇಖ ಕ್ಷಮೆಕೋರಿದ್ದರು. ಆದರೂ ಹಂಸಲೇಖ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹಿಸಿ ಹನುಮಂತ ನಗರ ಪೊಲೀಸ್ ಠಾಣೆಗೆ ಪೇಜಾವರ ಶ್ರೀಗಳ ಭಕ್ತರು ದೂರು ನೀಡಿದ್ದರು. ಇದೀಗ ಹಂಸಲೇಖ ವಿರುದ್ಧ ಅಖಿಲ ಭಾರತ ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ಕೃಷ್ಣ ದೂರು ನೀಡಿದ್ದು, ವಿದ್ಯಾಪೀಠ ಸರ್ಕಲ್‌ನಲ್ಲಿರುವ ಪೇಜಾವರಶ್ರೀಗಳ ಬೃಂದಾವನದ ಎದುರು ಹಂಸಲೇಖ ಕ್ಷಮೆ ಕೇಳಬೇಕು ಎಂದು ಸಮಾಜದ ಸದಸ್ಯರು ಆಗ್ರಹಿಸಿದ್ದಾರೆ.

ತುಂಬಿದ ಸಭೆಯಲ್ಲಿ ಮಾತನಾಡಿ ಈಗ ನಾಲ್ಕು ಗೋಡೆ ಮಧ್ಯೆ ಕ್ಷಮೆ ಕೇಳುವುದಲ್ಲ. ಪೇಜಾವರ ಶ್ರೀಗಳ ಬೃಂದಾವನದ ಎದುರು ಕ್ಷಮೆ ಕೇಳಬೇಕು. ಇಲ್ಲದಿದ್ದರೇ ರಸ್ತೆಗಿಳಿದು ಹೋರಾಟ ಮಾಡುವುದಾಗಿ ಸಮಾಜದ ಉಪಾಧ್ಯಕ್ಷ ಕೃಷ್ಣ ಅವರು ಎಚ್ಚರಿಸಿದ್ದಾರೆ. ದಾರಿಯಲ್ಲಿ ಚಪ್ಪಲಿ ಯಲ್ಲಿ ಹೊಡೆದು ಬಳಿಕ ಎಲ್ಲೋ ಕ್ಷಮೆ ಕೇಳೋದು ಸರಿಯಲ್ಲ. ಎಲ್ಲಿ ಅವಮಾನ ಮಾಡಿದ್ದಾರೋ ಅಲ್ಲೆ ಕ್ಷಮೆಕೇಳಬೇಕೆಂದು ಅಖಿಲ ಭಾರತ ಬ್ರಾಹ್ಮಣ ಸಮಾಜ ಆಗ್ರಹಿಸಿದೆ.


ಸೋಷಿಯಲ್ ಮೀಡಿಯಾ ದಲ್ಲೂ ಹಂಸಲೇಖ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು ಹಂಸಲೇಖ ಅವರು ಪೇಜಾವರ ಶ್ರೀಗಳ ಅಪಾರ ಭಕ್ತವೃಂದದ ಆಕ್ರೋಶಕ್ಕೂ ಗುರಿಯಾಗಿದ್ದಾರೆ. ಉಡುಪಿಯ ಪೇಜಾವರ ಮಠದ ಕಿರಿಯ ಶ್ರೀಗಳು ಕೂಡ ಹಂಸಲೇಖ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ : Hamsalekha : ಪೇಜಾವರ ಶ್ರೀಗಳನ್ನು ಹಿಯಾಳಿಸಿದ ಹಂಸಲೇಖ : ಎರಡೆರಡು ಬಾರಿ ಕ್ಷಮೆಕೋರಿದ ನಾದಬ್ರಹ್ಮ

ಇದನ್ನೂ ಓದಿ : Ashwini Puneeth Rajkumar : ಪುನೀತ್‌ ಅಗಲಿಕೆಯ ನೋವಲ್ಲೂ ಅಭಿಮಾನಿಗಳ ಕಾಳಜಿ : ಪತ್ರದಲ್ಲಿ ಅಶ್ವಿನಿ ಹೇಳಿದ್ದೇನು ಗೊತ್ತಾ?

( complaint Lodged against composer Hamsalekha for remark on late Pejawara Sree)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular