ಶುಕ್ರವಾರ, ಜೂನ್ 13, 2025
Homedistrict Newsದುಬೈನಲ್ಲಿ 6 ವರ್ಷಗಳ ಯುವಕ ದಿಗ್ಬಂಧನಕ್ಕೆ ಮುಕ್ತಿ ದೊರಕಿಸಿದ ಶಾಸಕ ಸುನಿಲ್‌ ಕುಮಾರ್‌

ದುಬೈನಲ್ಲಿ 6 ವರ್ಷಗಳ ಯುವಕ ದಿಗ್ಬಂಧನಕ್ಕೆ ಮುಕ್ತಿ ದೊರಕಿಸಿದ ಶಾಸಕ ಸುನಿಲ್‌ ಕುಮಾರ್‌

ಉಡುಪಿ ಜಿಲ್ಲೆಯ ಕಾರ್ಕಳದ ತೆಳ್ಳಾರು ನಿವಾಸಿ ಆಗಿರುವ ಸಂದೀಪ್‌ ದುಬೈನಲ್ಲಿ ಬದುಕು ಕಟ್ಟಿಕೊಂಡಿದ್ದರು. ಆದರೆ ವ್ಯಕ್ತಿಯೋರ್ವರಿಗೆ ವೀಸಾ ನೀಡಿದ ಆರೋಪದಡಿಯಲ್ಲಿ ಸಂದೀಪ್‌ ದುಬೈ ಸರಕಾರ ಬಾರೀ ಪ್ರಮಾಣದಲ್ಲಿ ದಂಡ ವಿಧಿಸಿತ್ತು.

- Advertisement -

ಕಾರ್ಕಳ : ಆತ ಕಳೆದ ಆರು ವರ್ಷಗಳಿಂದ ದುಬೈನಲ್ಲಿ ದಿಗ್ಬಂಧನದಲ್ಲಿದ್ದ. ಎಷ್ಟೇ ಪ್ರಯತ್ನಿಸಿದ್ರೂ ಯುವಕನಿಗೆ ತಾಯ್ನಾಡಿಗೆ ಮರಳೋದಕ್ಕೆ ಸಾಧ್ಯವಾಗಲೇ ಇಲ್ಲ. ಕೊನೆಗೆ ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ (Karkala BJP MLA Sunil Kumar) ಅವರ ಪ್ರಯತ್ನ ಫಲಕೊಟ್ಟಿದೆ. ಆರು ವರ್ಷಗಳ ಬಳಿಕ ಯುವಕ ಇದೀಗ ಕಾರ್ಕಳದ ಮನೆ ಸೇರಿದ್ದಾನೆ. ಶಾಸಕರ ಕಾರ್ಯಕ್ಕೀಗ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಉಡುಪಿ ಜಿಲ್ಲೆಯ ಕಾರ್ಕಳದ ತೆಳ್ಳಾರು ನಿವಾಸಿ ಆಗಿರುವ ಸಂದೀಪ್‌ ದುಬೈನಲ್ಲಿ ಬದುಕು ಕಟ್ಟಿಕೊಂಡಿದ್ದರು. ಆದರೆ ವ್ಯಕ್ತಿಯೋರ್ವರಿಗೆ ವೀಸಾ ನೀಡಿದ ಆರೋಪದಡಿಯಲ್ಲಿ ಸಂದೀಪ್‌ ದುಬೈ ಸರಕಾರ ಬಾರೀ ಪ್ರಮಾಣದಲ್ಲಿ ದಂಡ ವಿಧಿಸಿತ್ತು. ಆದರೆ ಈ ಹಣ ಪಾವತಿಸೋದಕ್ಕೆ ಸಂದೀಪ್‌ ಬಳಿಯಲ್ಲಿ ಹಣ ಇರಲಿಲ್ಲ. ತನ್ನ ಸ್ನೇಹಿತರಲ್ಲಿ ಸಹಾಯಕ್ಕೆ ಮೊರೆಯಿಟ್ರೂ ಪ್ರಯೋಜನವಾಗಲಿಲ್ಲ.

ದಿಕ್ಕು ತೋಚದಂತಾದ ಸಂದೀಪ್‌ ಪೋಷಕರು ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಅವರ ಮೊರೆ ಹೋಗಿದ್ರ, ತನ್ನ ಮಗನಿಗೆ ದಿಗ್ಬಂಧನದಿಂದ ಮುಕ್ತಿ ದೊರಕಿಸುವಂತೆ ಮನವಿ ಮಾಡಿದ್ರು. ಕೂಡಲೇ ಕಾರ್ಯಪ್ರವೃತ್ತರಾದ ಶಾಸಕ ಸುನಿಲ್‌ ಕುಮಾರ್‌ ಅವರು ದುಬೈನಲ್ಲಿರುವ ತನ್ನ ಸ್ನೇಹಿತ ಪ್ರತಾಪ್‌ ಶೆಟ್ಟಿ ಅವರನ್ನು ಸಂಪರ್ಕಿಸಿದ್ದರು. ಸಂದೀಪ್‌ ಮೇಲೆ ದುಬೈ ಸರಕಾರ ವಿಧಿಸಿರುವ ದಂಡದ ಮಾಹಿತಿ ಪಡೆದುಕೊಂಡ್ರು.

Also Read :ಪಿಎಂ ಕಿಸಾನ್ 20ನೇ ಕಂತು ಬಿಡುಗಡೆ : ಹೊಸ ರೈತರಿಗೆ ಅರ್ಜಿ ಸಲ್ಲಿಸಲು ಅವಕಾಶ, ಇಲ್ಲಿದೆ ಮಾಹಿತಿ

ದುಬೈ ಸರಕಾರದ ಬಳಿ ಮನವಿ ಮಾಡಿಕೊಂಡು, ದಂಡವನ್ನು ಕಡಿತಗೊಳಿಸಿ, ಸಂದೀಪ್‌ ಪಾವತಿಸಬೇಕಾಗಿದ್ದ ದಂಡದ ಮೊತ್ತವನ್ನೇ ತಾವೇ ಪಾವತಿಸುವ ಮೂಲಕ ಶಾಸಕ ಸುನಿಲ್‌ ಕುಮಾರ್‌ ಅವರು ಸಂದೀಪ್‌ ಅವರನ್ನು ತಾಯ್ನಾಡಿಗೆ ಕರೆ ತಂದಿದ್ದಾರೆ. ಸಂದೀಪ್‌ ಇದೀಗ ಕಾರ್ಕಳ ಶಾಸಕರನ್ನು ಭೇಟಿಯಾಗಿ ಧನ್ಯವಾದ ಸಮರ್ಪಿಸಿದ್ದಾರೆ.

ಸಂದೀಪ್‌ಗೆ ಸಂಕಷ್ಟ ಎದುರಾಗಿದ್ದು ಹೇಗೆ ?

ಕಾರ್ಕಳದ ನಿವಾಸಿ ಆಗಿರುವ ಸಂದೀಪ್‌ ಮಂಗಳೂರು ನಗರದ ಶಕ್ತಿನಗರದ ವ್ಯಕ್ತಿಯೋರ್ವರಿಗೆ ವೀಸಾ ಪ್ರತಿಯನ್ನು ನೀಡಿದ್ದರು. ಈ ವ್ಯಕ್ತಿ ವೀಸಾ ಪ್ರತಿಯನ್ನು ದುರ್ಬಳಕೆ ಮಾಡಿದ್ದ. ಇದರಿಂದಾಗಿ ದುಬೈ ಸರಕಾರ ತನಗೆ ದಂಡ ವಿಧಿಸಿತ್ತು. ಹೀಗಾಗಿ ನಾನು ಸಂಕಷ್ಟಕ್ಕೆ ಒಳಗಾಗಿದ್ದೆ. ವಾಪಾಸ್‌ ಊರಿಗೆ ಬರ್ತೇನೆ ಅನ್ನೋ ನಂಬಿಕೆಯೇ ನನಗೆ ಇಲ್ಲವಾಗಿತ್ತು ಆದರೆ ಶಾಸಕ ಸುನಿಲ್‌ ಕುಮಾರ್‌ ಅವರ ಸಹಕಾರದಿಂದ ಊರಿಗೆ ಸುರಕ್ಷಿತವಾಗಿ ಬಂದಿದ್ದೇನೆ ಎಂದಿದ್ದಾರೆ ಸಂದೀಪ್‌.

ಜನಪ್ರತಿನಿಧಿ ಆದವರಿಗೆ ಜನರ ಬಗ್ಗೆ ಕಾಳಜಿ ಇದ್ರೆ ಮಾತ್ರ ಜನರು ನೆಮ್ಮದಿ ಆಗಿ ಇರೋದಕ್ಕೆ ಸಾಧ್ಯ ಅನ್ನೋದು ಈ ಘಟನೆಯಿಂದ ಸಾಬೀತಾಗಿದೆ. ತನ್ನ ಕ್ಷೇತ್ರದ ಜನರು ಸಂಕಷ್ಟದಲ್ಲಿದ್ದಾಗ ಸ್ಪಂದಿಸೋದನ್ನು ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ರೂಢಿಸಿಕೊಂಡಿದ್ದಾರೆ. ತನ್ನದೇ ಹಣದಲ್ಲಿ ತನ್ನೂರಿನ ಯುವಕನ್ನು ದುಬೈನಿಂದ ಮರಳಿ ಕರೆತಂದಿರುವ ಕಾರ್ಯಕ್ಕೆ ಬಾರೀ ಜನ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Also Read : Lakhpati Didi Yojana : ಬಡ್ಡಿಯಿಲ್ಲದೇ ಮಹಿಳೆಯರಿಗೆ 5 ಲಕ್ಷ ರೂ ಸಾಲ : ಕೇಂದ್ರ ಸರಕಾರದ ಹೊಸ ಯೋಜನೆ ಜಾರಿ

Karkala BJP MLA Sunil Kumar, who was released from 6 years of youth detention in Dubai

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular