ಶನಿವಾರ, ಜೂನ್ 14, 2025
Homekarnatakaಪರಶುರಾಮನ ಶಿಲ್ಪಿ ಮನೆಗೆ ಮುನಿಯಾಲು ಬಂದಿದ್ಯಾಕೆ ? ಬಿಲ್ಲವನಾಗಿ ಹುಟ್ಟಿದ್ದೇ ತಪ್ಪಾ? ಪರಶುರಾಮ ಪ್ರತಿಮೆ ಮಾಡಿದ್ದಕ್ಕೆ...

ಪರಶುರಾಮನ ಶಿಲ್ಪಿ ಮನೆಗೆ ಮುನಿಯಾಲು ಬಂದಿದ್ಯಾಕೆ ? ಬಿಲ್ಲವನಾಗಿ ಹುಟ್ಟಿದ್ದೇ ತಪ್ಪಾ? ಪರಶುರಾಮ ಪ್ರತಿಮೆ ಮಾಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳಬೇಕಾ

- Advertisement -

Karkala Parashurama theme park Controversy  : ಬೆಂಗಳೂರು : ಕಾರ್ಕಳದ ಪರಶುರಾಮ ಥೀಮ್‌ ಪಾರ್ಕ್‌ ಇದೀಗ ವಿವಾದ ಕೇಂದ್ರವಾಗಿದೆ. ನಿರ್ಮಾಣ ಹಂತದಲ್ಲಿದ್ದ ಪರಶುರಾಮನ ಪ್ರತಿಮೆಯನ್ನು ಕಾರ್ಕಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಶಿಲ್ಪಿ ಕೃಷ್ಣ ನಾಯ್ಕ್‌ ಅವರ ಮನೆಗೆ ಪೊಲೀಸರ ಜೊತೆಗೆ ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ ಭೇಟಿ ಕೊಟ್ಟಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಜೊತೆಗೆ ತನಗೆ ಕೃಷ್ಣ ಶೆಟ್ಟಿ, ಉದಯ್‌ ಕುಮಾರ್‌ ಶೆಟ್ಟಿ ಮುನಿಯಾಲು ಕಿರುಕುಳ ನೀಡಿರುವ ಕುರಿತು ಶಿಲ್ಪಿ ಕೃಷ್ಣ ನಾಯ್ಕ್‌ ಗಂಭೀರ ಆರೋಪ ಮಾಡಿದ್ದಾರೆ.

ದೇಶದ ಗಮನ ಸೆಳೆದಿರುವ ಕಾರ್ಕಳದ ಪರಶುರಾಮ ಥೀಮ್‌ ಪಾರ್ಕ್‌ ಸದ್ಯ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ. ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಯುತ್ತಿದ್ದು, ಚೆಂಡು ಸದ್ಯ ನ್ಯಾಯಾಲಯದ ಅಂಗಳದಲ್ಲಿದೆ. ಇನ್ನೊಂದೆಡೆಯಲ್ಲಿ ಪರಶುರಾಮನ ಪ್ರತಿಮೆ ನಿರ್ಮಾಣದಲ್ಲಿ ಕಳಪೆಯಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಕೃಷ್ಣ ಶೆಟ್ಟಿ ನೀಡಿದ ದೂರಿನ ಮೇರೆಗೆ ಕಾರ್ಕಳ ಪೊಲೀಸರು ಬೆಂಗಳೂರಿನ ಕ್ರಿಶ್‌ ಆರ್ಟ್‌ ವರ್ಕ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಪರಶುರಾಮನ ಮೂರ್ತಿಯನ್ನು ವಶಕ್ಕೆ ಪಡೆದಿದ್ದಾರೆ.

Karkala Parashurama theme park Controversy Updates Artist Krishna Naik Exclusive Video
Image Credit : News Next Live

ಶಿಲ್ಪಿ ಕೃಷ್ಣ ನಾಯ್ಕ್‌ ಅವರ ಮನೆಗೆ ಪೊಲೀಸರ ಜೊತೆಗೆ ಕಾಂಗ್ರೆಸ್‌ ಮುಖಂಡ ಉದಯ್‌ ಕುಮಾರ್‌ ಮುನಿಯಾಲು ಭೇಟಿ ಕೊಟ್ಟಿದ್ದರು. ಈ ವೇಳೆಯಲ್ಲಿ ಕೃಷ್ಣ ನಾಯ್ಕ್‌ ಅವರು ಮುನಿಯಾಲು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಉದಯ್‌ ಕುಮಾರ್‌ ಮುನಿಯಾಲು ತನಗೆ ಬೆದರಿಕೆಯೊಡ್ಡಿದ್ದಾರೆ. ಅಲ್ಲದೇ ಜಾತಿ ವಿಚಾರದಲ್ಲಿ ಅವಮಾನ ಮಾಡಿದ್ದಾರೆ ಎಂದು ಕೃಷ್ಣ ನಾಯ್ಕ್‌ ಅವರು ಆರೋಪ ಮಾಡಿದ್ದಾರೆ. ಸದ್ಯ ಮುನಿಯಾಲು ಭೇಟಿ ಕೊಟ್ಟಿರುವ ವಿಡಿಯೋ ನ್ಯೂಸ್‌ ನೆಕ್ಸ್ಟ್‌ಗೆ ಲಭ್ಯವಾಗಿದೆ.

ಶಿಲ್ಪಿಯಿಂದ ಸುಳ್ಳು ಹೇಳಿಸಲು ಯತ್ನಿಸಿದ್ರಾ ಮುನಿಯಾಲು ?

ಪರಶುರಾಮ ಥೀಮ್‌ ಪಾರ್ಕ್‌ ವಿಚಾರಕ್ಕೆ ಸಂಬಂಧಿಸಿದಂತೆ ದೂರುದಾರ ಕೃಷ್ಣ ನಾಯ್ಕ್‌ ಹಾಗೂ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ ತನ್ನಿಂದ ಸುಳ್ಳು ಹೇಳಲು ಒತ್ತಾಯ ಹೇಳಿದ್ದಾರೆ. ಅಲ್ಲದೇ ವಿಧಾನ ಪರಿಷತ್‌ ಸದಸ್ಯ ಮಂಜುನಾಥ್‌ ಭಂಡಾರಿ ಅವರ ಮನೆಗೆ ಕರೆದಯ್ದು ತನ್ನ ಬಳಿ ಬಲವಂತ ಮಾಡಿದ್ದಾರೆ ಎಂದು ಕೃಷ್ಣ ನಾಯ್ಕ್‌ ಅವರು ಗಂಭೀರ ಆರೋಪ ಮಾಡಿದ್ದಾರೆ.

ಬಿಲ್ಲವನಾಗಿ ಹುಟ್ಟಿದ್ದೇ ತಪ್ಪಾ ? ಪ್ರತಿಮೆ ನಿರ್ಮಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳಬೇಕಾ ?

ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ ಜಾತಿ ಹೆಸರಲ್ಲಿ ಅವಮಾನ ಮಾಡಿದ್ದಾರೆ ಅಂತಾ ಕೃಷ್ಣ ನಾಯ್ಕ್‌ ಅವರು ಆರೋಪಿಸಿದ್ದಾರೆ. ತಾನು ಬಿಲ್ಲವನಾಗಿ ಹುಟ್ಟಿದ್ದೇ ತಪ್ಪಾ ? ನೀವು ಯಾವ ನಾಯಕ ಎಂದು ಮುನಿಯಾಲು ಅವಮಾನಿಸಿದ್ದಾರೆ. ಪರಶುರಾಮನ ಪ್ರತಿಮೆ ನಿರ್ಮಿಸಿದ ಬಳಿಕ ತನಗೆ ನೆಮ್ಮದಿಯೇ ಇಲ್ಲವಾಗಿದೆ. ಸಿದ್ದಗಂಗಾ ಸ್ವಾಮೀಜಿ, ಬಿ.ಆರ್‌.ಅಂಬೇಡ್ಕರ್‌ ಸೇರಿದಂತೆ ಹಲವರ ಪ್ರತಿಮೆ ನಿರ್ಮಿಸಿದ್ದೇನೆ. ಸರಕಾರಕ್ಕೂ ಪ್ರತಿಮೆ ನಿರ್ಮಿಸಿ ಕೊಟ್ಟಿದ್ದೆ ಆದರೆ ಎಲ್ಲಿಯೂ ಹೀಗೆ ಆಗಿಲ್ಲ. ಎಲ್ಲಾ ಕಡೆಯಿಂದಲೂ ಕಿರುಕುಳ ಆಗ್ತಿದೆ. ಮೂರ್ತಿ ನಿರ್ಮಿಸಿದ್ದಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾ ಎಂದು ಕೃಷ್ಣ ನಾಯ್ಕ್‌ ಪ್ರಶ್ನಿಸಿದ್ದಾರೆ.

ಪರಶುರಾಮನ ಪ್ರತಿಮೆ ಶಿಫ್ಟ್‌ ವೇಳೆ ಶಿಲ್ಪಿ ಕಣ್ಣೀರು

ನ್ಯಾಯಾಲಯದ ಆದೇಶದ ಮೇರೆಗೆ ಕಾರ್ಕಳದಿಂದ ಪರಶುರಾಮನ ಅರ್ಧ ಪ್ರತಿಮೆಯನ್ನು ತಂದು ಕೃಷ್ಣ ನಾಯ್ಕ್‌ ಅವರು ಪುನರ್‌ ನಿರ್ಮಾಣ ಕಾರ್ಯ ನಡೆಸುತ್ತಿದ್ದರು. ಆದರೆ ಖಾಸಗಿ ವ್ಯಕ್ತಿ ನೀಡಿದ ದೂರಿನ ಮೇರೆಗೆ ಕಾರ್ಕಳ ಪೊಲೀಸರು ಪ್ರತಿಮೆಯನ್ನು ವಶಕ್ಕೆ ಪಡೆದಿದ್ದಾರೆ. ತನ್ನ ಕೈಯಿಂದ ಹಣವನ್ನು ಸುರಿದು ನಿರ್ಮಾಣ ಮಾಡುತ್ತಿದ್ದ ಪ್ರತಿಮೆಯನ್ನು ವಶಕ್ಕೆ ಪಡೆಯುವ ವೇಳೆಯಲ್ಲಿ ಪೊಲೀಸರು ಕೂಡ ಕಿರುಕುಳ ನೀಡಿದ್ದಾರೆಂಬ ಆರೋಪ ಕೇಳಿಬಂದಿದೆ. ಜೊತೆಗೆ ಪರಶುರಾಮನ ಮೂರ್ತಿ ಶಿಫ್ಟ್‌ ವೇಳೆಯಲ್ಲಿ ಶಿಲ್ಪಿ ಕೃಷ್ಣನಾಯ್ಕ್‌ ಅವರು ಕಣ್ಣೀರು ಇಟ್ಟಿದ್ದಾರೆ.

ಇದನ್ನೂ ಓದಿ :ಭೂಕುಸಿತ ಹೆಚ್ಚಳ, LSM ಮ್ಯಾಪಿಂಗ್‌ಗೆ ಹೆಚ್ಚಿನ ಬಜೆಟ್‌ ಮೀಸಲಿಡಿ : ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಮನವಿ

ಪರಶುರಾಮ ಮೂರ್ತಿ ನಕಲಿ ಅಲ್ಲ : ಕೃಷ್ಣ ನಾಯ್ಕ್‌

ಕಾರ್ಕಳದ ಥೀಮ್‌ ಪಾರ್ಕ್ ನಲ್ಲಿ ನಿರ್ಮಾಣಗೊಂಡಿರುವ ಪ್ರತಿಮೆ ನಕಲಿ ಅಲ್ಲಾ. ಥೀಮ್‌ ಪಾರ್ಕ್‌ ಯೋಜನೆಯಡಿ ಪರಶುರಾಮನ ಪ್ರತಿಮೆಗೆ ನಿರ್ಮಿತಿ ಕೇಂದ್ರ ನೀಡಿರುವುದು ಕೇವಲ 2 ಕೋಟಿ ರೂಪಾಯಿ. ಅದರಲ್ಲೂ ಸರಕಾರ ನೀಡಿರುವುದು 1.25 ಕೋಟಿ ರೂಪಾಯಿ ಮಾತ್ರ. ಇಂತಹ ಪ್ರತಿಮೆಯನ್ನು 2 ಕೋಟಿ ರೂಪಾಯಿ ವೆಚ್ಚದಲ್ಲಿ ಭಾರತದ ಯಾವುದೇ ಶಿಲ್ಪಿಯಿಂದ ನಿರ್ಮಾಣ ಮಾಡಲು ಸಾಧ್ಯವಿಲ್ಲ. ತನ್ನೂರಿನಲ್ಲಿ ಪರಶುರಾಮನ ಮೂರ್ತಿ ಸ್ಥಾಪಿಸಬೇಕೆಂಬ ಕಾರಣಕ್ಕೆ ಶ್ರಮವಹಿಸಿ, ಕೈಯಿಂದ ಹಣ ಸುರಿದು ಪ್ರತಿಮೆ ನಿರ್ಮಿಸಿದ್ದೇನೆ. ತನ್ನ ಮಕ್ಕಳ ಮೇಲಾಣೆಗೂ ಪ್ರತಿಮೆ ನಿರ್ಮಾಣದಲ್ಲಿ ಮೋಸ ಮಾಡಿಲ್ಲ ಎಂದು ಶಿಲ್ಪಿ ಕೃಷ್ಣ ನಾಯ್ಕ್‌ ಅವರು ಅಳಲು ತೋಡಿಕೊಂಡಿದ್ದಾರೆ.

Karkala Parashurama theme park Controversy Updates Artist Krishna Naik Exclusive Video
Image Credit : News Next Live

ಶಿಲ್ಪಿ ಕೃಷ್ಣ ನಾಯ್ಕರಿಗೆ ಸುಳ್ಳು ಹೇಳಿದ್ರಾ ಕಾರ್ಕಳ ಪೊಲೀಸರು ?

ಪರಶುರಾಮ ಥೀರ್ಮ ಪಾರ್ಕ್‌ ಅವ್ಯವಹಾರದ ಆರೋಪ ಕೇಳಿಬಂದ ಬೆನ್ನಲ್ಲೇ ನ್ಯಾಯಾಲಯದ ಆದೇಶದ ಮೇರೆಗೆ ಶಿಲ್ಪಿ ಕೃಷ್ಣ ನಾಯ್ಕ್‌ ಅವರು ಪರಶುರಾಮನ ಅರ್ಧ ಮೂರ್ತಿಯನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಹೊಸದಾಗಿಯೇ ಪ್ರತಿಮೆ ನಿರ್ಮಾಣ ಮಾಡುತ್ತಿದ್ದರು. ಖಾಸಗಿ ದೂರಿನ ವಿಚಾರಣೆಯ ಹಿನ್ನೆಲೆಯಲ್ಲಿ ಶಿಲ್ಪಿ ಕೃಷ್ಣ ನಾಯ್ಕ್‌ ಅವರನ್ನು ಕಾರ್ಕಳಕ್ಕೆ ವಿಚಾರಣೆಗೆ ಕರೆದಿದ್ದ ಪೊಲೀಸರು ಕೇವಲ ಮೂರ್ತಿಯನ್ನು ಮಹಜರು ಮಾಡುವುದಾಗಿ ತಿಳಿಸಿದ್ದರು. ಆದರೆ ಬೆಂಗಳೂರಿಗೆ ಬಂದ ಪೊಲೀಸರು ಮೂರ್ತಿಯನ್ನೇ ಜಪ್ತಿ ಮಾಡಿದ್ದಾರೆ. ಈ ಮೂಲಕ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : Gruha Lakshmi Scheme : ಗೃಹಲಕ್ಷ್ಮೀ ಯೋಜನೆ ಯಜಮಾನಿಯರಿಗೆ ಭರ್ಜರಿ ಗುಡ್‌ನ್ಯೂಸ್‌

Karkala Parashurama theme park Controversy Updates Artist Krishna Naik Exclusive Video

 

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular