ಸೋಮವಾರ, ಜೂನ್ 16, 2025
HomekarnatakaViolence Against Minorities : ರಾಜ್ಯದಲ್ಲಿ ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ : ಸಿಎಂ ಬಸವರಾಜ ಬೊಮ್ಮಾಯಿಗೆ 34...

Violence Against Minorities : ರಾಜ್ಯದಲ್ಲಿ ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ : ಸಿಎಂ ಬಸವರಾಜ ಬೊಮ್ಮಾಯಿಗೆ 34 ಗಣ್ಯರ ಪತ್ರ

- Advertisement -

ಬೆಂಗಳೂರು : ಪಕ್ಷದ ಆಂತರಿಕ ಅಸಮಧಾನ, ಸಚಿವ ಸಂಪುಟ ವಿಸ್ತರಣೆ ಸರ್ಕಸ್, ಕರೋನಾ ನಿಯಮ ಸಡಿಲಿಕೆಗೆ ಒತ್ತಡ ಹೀಗೆ ನೊರೆಂಟು ತಲೆನೋವು ಗಳ ನಡುವೆ ಈಗಾಗಲೇ ಹೈರಾಣಾಗಿರುವ ಸಿಎಂ ಬೊಮ್ಮಾಯಿಗೆ ರಾಜ್ಯದಲ್ಲಿ ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ 34 ಗಣ್ಯರು ಪತ್ರ ಬರೆದಿದ್ದಾರೆ. ಈ ಪತ್ರದ ವಿಚಾರ ಈಗ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸಾಚಾರ ಕಳವಳ‌ತಂದಿದೆ (Violence Against Minorities)ಎಂದು 34 ಕ್ಕೂ ಅಧಿಕ ಗಣ್ಯರು ಸಿಎಂಗೆ ಪತ್ರ ಬರೆದಿದ್ದು, ಹಲವು ಮಹತ್ವದ ಸಂಗತಿಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ನಾವು ರಾಜ್ಯದ ಹಿರಿಯ ವಿಜ್ಞಾನಿಗಳು, ಬರಹಗಾರರು ಶಿಕ್ಷಣ ತಜ್ಞರು,ಕಲಾವಿದರ ಒಂದೆಡೆ ಸೇರಿದ್ದು, ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಎದುರಾಗಿರುವ ಸಂಕಷ್ಟ ಅರಿತು ಈ ಪತ್ರ ಬರೆಯುತ್ತಿದ್ದೇವೆ ಎಂದಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ರಾಜ್ಯದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರ ಕ್ರೂರ ಹತ್ಯೆಗಳು,ಅತಿರೇಕದ ಕೋಮು ಸಾಮರಸ್ಯ ಕದಡುವ ಭಾಷಣಗಳು,ಸಾರ್ವಜನಿಕವಾಗಿ ಬೆದರಿಕೆ ಹಾಕುವುದು. ಪೂಜೆಗೆ ಅಡ್ಡಿ ಪಡಿಸುವುದು,ಪುನರಾವರ್ತನೆಯಾಗುತ್ತಿರುವ ನೈತಿಕ ಪೊಲೀಸಗಿರಿ,ಮರ್ಯಾದಾ ಹತ್ಯೆ ಗಳು,ಧಾರ್ಮಿಕ ಸಂಘಟನೆಗಳ ನಡುವಿನ ದ್ವೇಷ ಎಲ್ಲವೂ ಭಯ ಹುಟ್ಟಿಸುವಂತಿದೆ.

ಸ್ವತಃ ಶಾಂತಿ ಕಾಪಾಡಬೇಕಾದ ಜನಪ್ರತಿನಿಧಿಗಳು, ಶಾಸಕರು, ಸಂಸದರು ನೀಡಿದ ಹಾಗೂ ನೀಡುತ್ತಿರುವ ಹಿಂಸಾತ್ಮಕ ಹೇಳಿಕೆಗಳು ಮತ್ತಷ್ಟು ಕ್ರೌರ್ಯವನ್ನು ವಿಜೃಂಭಿಸುವಂತಿದೆ. ಇದು ಸರಿಯಲ್ಲ. ಇದಕ್ಕೆ ಕಡಿವಾಣ ಹಾಕಬೇಕಾದ ಅಗತ್ಯವಿದೆ. ಪ್ರಗತಿಪರ ರಾಜ್ಯ ಎಂಬ ಹೆಗ್ಗಳಿಕೆ ಹಾಗೂ ಯಾವುದೇ ಬೇಧವಿಲ್ಲದೇ ಎಲ್ಲ ವರ್ಗದ ಜನರ ಅಭ್ಯುದಯಕ್ಕೆ ಶ್ರಮಿಸುವ ಆಡಳಿತ ನೀಡಿದ ಗೌರವ ರಾಜ್ಯಕ್ಕಿತ್ತು. ಯಾವುದೇ ಬೇಧವಿಲ್ಲದೇ ಸಮಾಜ ಕಲ್ಯಾಣದ ಯೋಜನೆಗಳನ್ನು ರೂಪಿಸಲಾಗಿದೆ.

ಈ ಹಿಂದೆ ಧಾರ್ಮಿಕ ಅಸಹಿಷ್ಣುತೆ ಹೋಗಲಾಡಿಸುವ ನಿಟ್ಟಿನಲ್ಲಿ ಬಸವಣ್ಣ, ಅಕ್ಕಮಹಾದೇವಿ, ಕನಕದಾಸ, ಪುರಂದರದಾಸ, ಶಿಶುನಾಳ ಶರೀಫರಿಂದ ಆರಂಭಿಸಿ ಬೇಂದ್ರೆ, ಕುವೆಂಪು ತನಕ ಹಲವರು ಕೃತಿ ಸಾಹಿತ್ಯದ ಮೂಲಕ ಹೋರಾಡಿದ್ದಾರೆ. ಬಹು ಸಂಸ್ಕೃತಿತ ಅಸ್ಮಿತೆಯ‌ಮೇಲೆ ರೂಪುಗೊಂಡ ಈ ಕರ್ನಾಟಕ ಈ ಅಸ್ಥಿರ ಸಾಮಾಜಿಕ ಸ್ಥಿತಿಯನ್ನು ಎದುರಿಸುತ್ತಿದೆ ಇದು ಆತಂಕಕಾರಿ ಬೆಳವಣಿಗೆ ಎಂದು ಗಣ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಜಂಟಿ ಬಹಿರಂಗ ಪತ್ರ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ತೀವ್ರ ಮುಜುಗರ ತಂದಂತಿದ್ದು, ಬಸವರಾಜ್ ಬೊಮ್ಮಾಯಿ ಪತ್ರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಪತ್ರ ವೈರಲ್ ಆಗಿದ್ದು, ಕಾಂಗ್ರೆಸ್ ಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.

ಇದನ್ನೂ ಓದಿ : ಸೋಮವಾರದಿಂದ ಬೆಂಗಳೂರಲ್ಲಿ 1 ರಿಂದ 9 ನೇ ತರಗತಿ ಆರಂಭ : ಶಾಲಾರಂಭದ ಸುಳಿವು ಕೊಟ್ಟ ಬಿ.ಸಿ.ನಾಗೇಶ್‌

ಇದನ್ನೂ ಓದಿ : ಸಿದ್ಧರಾಮಯ್ಯರನ್ನು ವಲಸಿಗರಾಮಯ್ಯ ಎಂದ ಬಿಜೆಪಿ : ಮತ್ತೆ ಶುರುವಾಯ್ತು ಟ್ವೀಟ್ ವಾರ್

( 34 Minent Personalities Writes Letter To Basavaraj Bommai On Violence Against Minorities in Karnataka)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular