ಬುಧವಾರ, ಜೂನ್ 18, 2025
HomeCorona UpdatesKarnataka Covid-19 Updates : ಕರ್ನಾಟಕದಲ್ಲಿಂದು 8,449 ಕೊರೊನಾ ಕೇಸ್ : ಬೆಂಗಳೂರು, ದ.ಕ., ಮೈಸೂರು,...

Karnataka Covid-19 Updates : ಕರ್ನಾಟಕದಲ್ಲಿಂದು 8,449 ಕೊರೊನಾ ಕೇಸ್ : ಬೆಂಗಳೂರು, ದ.ಕ., ಮೈಸೂರು, ಉಡುಪಿಯಲ್ಲಿ ಕೊರೊನಾರ್ಭಟ

- Advertisement -

ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ವೈರಸ್‌ ಸೋಂಕು (Karnataka Covid-19 Updates )ಸ್ಪೋಟಗೊಂಡಿದೆ. ರಾಜ್ಯದಲ್ಲಿ ಇಂದು ಒಂದೇ ದಿನ ಬರೋಬ್ಬರಿ 8,449 ಪ್ರಕರಣ ದಾಖಲಾಗಿದೆ. ಅದ್ರಲ್ಲೂ ಬೆಂಗಳೂರಲ್ಲಿ ೬,೮೧೨ ಹೊಸ ಪ್ರಕರಣ ದೃಢಪಟ್ಟಿದೆ. ಜೊತೆಗೆ ದಕ್ಷಿಣ ಕನ್ನಡ, ಮೈಸೂರು, ಉಡುಪಿ, ಮಂಡ್ಯ, ಬೆಳಗಾವಿಯಲ್ಲಿ ಕೊರೊನಾರ್ಭಟ ಜೋರಾಗಿದೆ.

ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಿಗುತ್ತಿಲ್ಲ. ದಿನೇ ದಿನೇ ಸೋಂಕಿತ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಇಂದು 6,812 ಹೊಸ ಪ್ರಕರಣ ಪತ್ತೆಯಾಗಿದ್ದು, ಮೂವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಬೆಂಗಳೂರಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 25,570 ಕ್ಕೆ ಏರಿಕೆ ಕಂಡಿದೆ. ಈ ಮೂಲಕ ಕೊರೊನಾ ಸೋಂಕಿತರ ಪಟ್ಟು ಸಂಖ್ಯೆ 1283186 ದಾಟಿದೆ. ಕೊರೊನಾ ಜೊತೆ ಜೊತೆ ಓಮಿಕ್ರಾನ್‌ ಪ್ರಕರಣ ಏರಿಕೆ ಕಾಣುತ್ತಿರುವುದು ರಾಜ್ಯ ಸರಕಾರ ತಲೆನೋವು ತರಿಸಿದೆ.

ಇನ್ನೊಂದೆಡೆಯಲ್ಲಿ ರಾಜ್ಯ ದಕ್ಷಿಣ ಕನ್ನಡ, ಮೈಸೂರು, ಉಡುಪಿ, ಮಂಡ್ಯ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ಧಾರವಾಡ ಜಿಲ್ಲೆಗಳಲ್ಲಿ ಕೊರೊನಾ ಆರ್ಭಟಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಮತ್ತೆ ದಾಖಲೆಯ ಸಂಖ್ಯೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೊಂಕಿತರ ಸಂಖ್ಯೆ ದ್ವಿಶಕತದ ಗಡಿದಾಟಿದೆ. ಜಿಲ್ಲೆಯಲ್ಲಿಂದು 211 ಮಂದಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ರೆ, ಮೈಸೂರಿನಲ್ಲಿ ಒಂದೇ ದಿನ 219 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ.

ಕೃಷ್ಣನಗರಿ ಉಡುಪಿಯಲ್ಲಿಯೂ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಇಂದು ಜಿಲ್ಲೆಯಲ್ಲಿ 149 ಮಂದಿ ಕೊರೊನಾ ಸೋಂಕು ದೃಢಪಟ್ಟಿದೆ. ಉಳಿದಂತೆ ಮಂಡ್ಯದಲ್ಲಿ 129, ಬೆಳಗಾವಿಯಲ್ಲಿ 114, ತುಮಕೂರು 98, ಹಾಸನದಲ್ಲಿ 89, ಕಲಬುರಗಿ 43,ಬೆಂಗಳೂರು ಗ್ರಾಮಾಂತರ 78, ಧಾರವಾಡ 66, ಬೆಳ್ಳಾರಿ 62 ಶಿವಮೊಗ್ಗ 43, ಉತ್ತರ ಕನ್ನಡ 36, ವಿಜಯಪುರ 36, ಕೊಡಗು 29, ಚಿಕ್ಕಮಗಳೂರು 24, ಚಿಕ್ಕಬಳ್ಳಾಪುರ 21, ರಾಮನಗರ 20, ಬೀದರ್‌ 20, ದಾವಣಗೆರೆ 18, ಗದಗ 10, ಚಾಮರಾಜನಗರ 7, ಕೊಪ್ಪಳ 5, ಬಾಗಲಕೋಟೆ 2, ರಾಯಚೂರು 2, ಯಾದಗಿರಿ 1 ಹಾಗೂ ಹಾವೇರಿ ಜಿಲ್ಲೆಯಲ್ಲಿ ಶೂನ್ಯ ಕೊರೊನಾ ಪ್ರಕರಣ ದಾಖಲಾಗಿದೆ.

Today Corona Report 2

ರಾಜ್ಯದಲ್ಲಿಂದು ಒಟ್ಟು 2,03,260 ಮಂದಿಯಲ್ಲಿ ಕೊರೊನಾ ತಪಾಸಣೆಗೆ ಒಳಪಡಿಸಲಾಗಿತ್ತು. ರಾಜ್ಯದಲ್ಲಿ ಒಂದೇ ದಿನ ಕೊರೊನಾ ಸ್ಪೋಟ ಸಂಭವಿಸಿದ ಹಿನ್ನೆಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ 4.15 %ಕ್ಕೆ ಏರಿಕೆ ಕಂಡಿದೆ. ಇನ್ನು ರಾಜ್ಯದಲ್ಲಿಂದು ಹೊಸದಾಗಿ 107 ಓಮಿಕ್ರಾನ್‌ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆ 333 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ : Omicron : ಹೆಚ್ಚುತ್ತಿರುವ ಓಮಿಕ್ರಾನ್​ ಪ್ರಕರಣಗಳ ಬಗ್ಗೆ ಆತಂಕ ಹೊರಹಾಕಿದ ತಜ್ಞರು

ಇದನ್ನೂ ಓದಿ : ಕಂದಾಯ ಸಚಿವ ಆರ್​.ಅಶೋಕ್​ಗೆ ಕೊರೊನಾ:ಆಸ್ಪತ್ರೆಗೆ ದಾಖಲು

( Karnataka covid-19 updates : today 8449 corona case, Bangalore, dk, Udupi, Mysore corona blast)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular