ಭಾನುವಾರ, ಏಪ್ರಿಲ್ 27, 2025
Homekarnatakaಕೋಟೇಶ್ವರ : ಕಾರು ಚಾಲಕನ ನಿರ್ಲಕ್ಷ್ಯ : ಟಿಪ್ಪರ್‌ ಅಪಘಾತದಿಂದ ವಿದ್ಯಾರ್ಥಿ ಸಾವು - Video

ಕೋಟೇಶ್ವರ : ಕಾರು ಚಾಲಕನ ನಿರ್ಲಕ್ಷ್ಯ : ಟಿಪ್ಪರ್‌ ಅಪಘಾತದಿಂದ ವಿದ್ಯಾರ್ಥಿ ಸಾವು – Video

Koteshwara Kageri Tipper Accident : ಕೋಟೇಶ್ವರ - ಹಾಲಾಡಿ ರಸ್ತೆಯಲ್ಲಿ ವಾಹನಗಳ ಚಾಲಕರು ಅತೀ ವೇಗದಿಂದ ಸಂಚಾರ ಮಾಡುತ್ತಿದ್ದಾರೆ. ನಿತ್ಯವೂ ಸಾವಿರಾರು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ನಡೆದುಕೊಂಡು ಸಾಗುವುದರಿಂದ ಅಪಘಾತಗಳು ನಡೆಯುತ್ತಿದೆ.

- Advertisement -

ಕುಂದಾಪುರ : ರಸ್ತೆ ಚಾಲನೆಯಲ್ಲಿ ನಿರ್ಲಕ್ಷ್ಯ ವಹಿಸಿದ್ರೆ ಎಂತಹಾ ಅನಾಹುತ ನಡೆಯುತ್ತೆ ಅನ್ನೋದಕ್ಕೆ ಈ ಘಟನೆಯೇ ಬೆಸ್ಟ್‌ ಎಕ್ಸಾಂಪಲ್.‌ ಆ ವಿದ್ಯಾರ್ಥಿ ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ. ಆದರೆ ಕಾರು ಚಾಲಕ ಮಾಡಿದ ಎಡವಟ್ಟಿನಿಂದಾಗಿ ಟಿಪ್ಪರ್‌ ಹರಿದು ವಿದ್ಯಾರ್ಥಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ. ಸದ್ಯ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ನಡೆದ ಅಪಘಾತದ ವಿಡಿಯೋ ವೈರಲ್‌ ಆಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿಂದು ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಕುಂದಾಪುರದಿಂದ ಹಾಲಾಡಿಗೆ ಕಡೆಗೆ ಚಲಿಸುತ್ತಿದ್ದ ಕಾರನ್ನು ಚಾಲಕ ತನ್ನ ನಿರ್ಲಕ್ಷ್ಯದಿಂದ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ, ಆದರೆ ಇದೇ ವೇಳೆಯಲ್ಲಿ ಕೋಟೇಶ್ವರದ ಕಡೆಗೆ ವೇಗವಾಗಿ ಬರುತ್ತಿದ್ದ ಟಿಪ್ಪರ್‌ ನಿಯಂತ್ರಣ ತಪ್ಪಿದೆ. ಈ ವೇಳೆಯಲ್ಲಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಯ ಮೇಲೆ ಟಿಪ್ಪರ್‌ ಹರಿದಿದ್ದು, ವಿದ್ಯಾರ್ಥಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಮೃತ ವಿದ್ಯಾರ್ಥಿಯನ್ನು ಧನುಷ್‌ ಎಂದು ಗುರುತಿಸಲಾಗಿದೆ. ಬೈಂದೂರು ತಾಲೂಕಿನ ನಾವುಂದ ನಿವಾಸಿಯಾಗಿರುವ ಧನುಷ್‌ ಕೋಟೇಶ್ವರದ ಕಾಗೇರಿ ಬಳಿಯಲ್ಲಿರುವ ವರದರಾಜ ಶೆಟ್ಟಿ ಸರಕಾರಿ ಪದವಿ ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾರ್ಥಿ ಆಗಿದ್ದಾನೆ. ಕಾಲೇಜು ಮುಗಿಸಿ ಮನೆಗೆ ತೆರಳುವ ಸಲುವಾಗಿ ತನ್ನ ಇಬ್ಬರು ಸ್ನೇಹಿತರ ಜೊತೆಗೆ ಕಾಲೇಜಿನಿಂದ ಕೋಟೇಶ್ವರದ ಬಸ್‌ ನಿಲ್ದಾಣದ ಕಡೆಗೆ ನಡೆದುಕೊಂಡು ಬರುತ್ತಿದ್ದ. ಈ ವೇಳೆಯಲ್ಲಿ ಟಿಪ್ಪರ್‌ ಒಮ್ಮಿಂದೊಮ್ಮೆಲೆ ವಿದ್ಯಾರ್ಥಿಯ ಮೇಲೆ ಹರಿದಿದೆ.

ಇದನ್ನೂ ಓದಿ : ದಸರಾ ಹಬ್ಬ ಸಮೀಪದಲ್ಲೇ ಮೈಸೂರಿನಲ್ಲಿ ನಡೆಯಿತಾ ರೇವ್ ಪಾರ್ಟಿ?

ಧನುಷ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಆದರೆ ಆತ ಜೊತೆಗಿದ್ದ ಇಬ್ಬರು ವಿದ್ಯಾರ್ಥಿಗಳು ಪವಾಡ ಸದೃಶವಾಗಿ ಪಾರಾಗಿದ್ದಾರೆ. ಇನ್ನು ತನ್ನ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿದೆ ಅನ್ನೋದನ್ನು ಅರಿತ ಕಾರು ಚಾಲಕ ಸ್ಥಳದಿಂದ ಕಾರು ಸಮೇತ ಎಸ್ಕೇಪ್‌ ಆಗಿದ್ದಾನೆ. ಆದರೆ ವಿದ್ಯಾರ್ಥಿಗಳು ಬೈಕ್ ನಲ್ಲಿ ಎಸ್ಕೇಪ್‌ ಆಗುತ್ತಿದ್ದ ಕಾರು ಚಾಲಕನನ್ನು ಅಡ್ಡಗಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಬಿಗ್ ಬಾಸ್ ಹನ್ನೊಂದನೇ ಸೀಸನ್ ಗ್ರ್ಯಾಂಡ್ ಓಪನಿಂಗ್ ದಿನವೇ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಸೀಸನ್ ಐದರ ಸ್ಪರ್ಧಿ!

ಕೋಟೇಶ್ವರ – ಹಾಲಾಡಿ ರಸ್ತೆಯಲ್ಲಿ ವಾಹನಗಳ ಚಾಲಕರು ಅತೀ ವೇಗದಿಂದ ಸಂಚಾರ ಮಾಡುತ್ತಿದ್ದಾರೆ. ನಿತ್ಯವೂ ಸಾವಿರಾರು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ನಡೆದುಕೊಂಡು ಸಾಗುವುದರಿಂದ ಅಪಘಾತಗಳು ನಡೆಯುತ್ತಿದೆ. ಪೊಲೀಸರು ಯಮಸ್ವರೂಪಿ ಟಿಪ್ಪರ್‌ ಸೇರಿದಂತೆ ವಾಹನಗಳ ಮಿತಿಗೆ ಬ್ರೇಕ್‌ ಹಾಕಬೇಕಾಗಿದೆ.

ಇದನ್ನೂ ಓದಿ : HD Kumaraswamy vs IGP Chandrashekhar : ಎಚ್‌ಡಿ ಕುಮಾರಸ್ವಾಮಿಗೆ ಆಕ್ಷೇಪಾರ್ಯ ಪದ ಬಳಕೆ : ಐಜಿಪಿ ಚಂದ್ರಶೇಖರ್‌ ವಿರುದ್ದ ಕ್ರಮಕ್ಕೆ ಸೂಚನೆ

Koteshwara Kageri Tipper Accident BSC Student Danush Death

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular