ಚೆನ್ನೈ : ನಿಫಾ ವೈರಸ್ ಸೋಂಕು ಕೇರಳದಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಇತ್ತ ಕರ್ನಾಟಕ, ತಮಿಳುನಾಡಲ್ಲಿಯೂ ನಿಫಾ ಆತಂಕ ಶುರುವಾಗಿದೆ. ಈ ನಡುವಲ್ಲೇ ಇದೀಗ ನಿಫಾ ಭೀತಿ ಭಯದಲ್ಲಿ ತಮಿಳುನಾಡು ಸರ್ಕಾರ ಹಬ್ಬ, ಸಭೆ, ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಿದೆ.
ಕೊರೊನಾ ಮೂರನೇ ಅಲೆ ಆತಂಕದ ನಡುವೆ ಕೇರಳದಲ್ಲಿ ನಿಫಾ ವೈರಸ್ ಹೆಚ್ಚುತ್ತಿದ್ದು, ಸೋಂಕು ಹರಡದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಿಫಾ ಆತಂಕ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಹಬ್ಬಗಳ ಆಚರಣೆ, ರಾಜಕೀಯ ಸಮಾವೇಶ, ಸಭೆ, ಸಮಾರಂಭ, ಧಾರ್ಮಿಕ ಸಭೆಗಳ ಮೇಲೆ ಸಿಎಂ ಎಂ.ಕೆ.ಸ್ಟಾಲಿನ್ ಸರ್ಕಾರ ಸಂಪೂರ್ಣ ನಿರ್ಬಂಧ ವಿಧಿಸಿದೆ.
ಇದನ್ನೂ ಓದಿ: ನಿಫಾ’ಕ್ಕೂ ಬರಲಿದೆ ‘ಕೋವಿಶೀಲ್ಡ್’ ಮಾದರಿ ಲಸಿಕೆ
ಅಕ್ಟೋಬರ್ 31ರವರೆಗೆ ತಮಿಳುನಾಡಿನಲ್ಲಿ ಯಾವುದೇ ಸಮಾರಂಭ, ಸಮಾವೇಶಗಳನ್ನು ಮಾಡುವಂತಿಲ್ಲ. ಸರ್ಕಾರದ ನಿರ್ಧಾರವನ್ನು ಜನರು ಗೌರವಿಸಿ ಹಬ್ಬಗಳ ಆಚರಣೆಯನ್ನು ತಮ್ಮ ತಮ್ಮ ಮನೆಗಳಲ್ಲಿ ಮಾತ್ರ ಮಾಡುವಂತೆ ಸಿಎಂ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ನಿಫಾ ವೈರಸ್ ಲಕ್ಷಣಗಳು ಹೇಗಿರುತ್ತೆ ಗೊತ್ತಾ?
(Nifa Virus: Meeting-Ceremony Restriction Until October 31st)