ಸೋಮವಾರ, ಏಪ್ರಿಲ್ 28, 2025
HomekarnatakaBlck Magic Murder : ನಿಧಿ ಆಸೆಯಿಂದ ಪತ್ನಿಯ ಹತ್ಯೆ : 9 ತಿಂಗಳ ಬಳಿಕ...

Blck Magic Murder : ನಿಧಿ ಆಸೆಯಿಂದ ಪತ್ನಿಯ ಹತ್ಯೆ : 9 ತಿಂಗಳ ಬಳಿಕ ಬಯಲಾಯ್ತು ವೈದ್ಯನ ಮುಖವಾಡ

- Advertisement -

ದಾವಣಗೆರೆ‌ : ನಿಧಿ ಆಸೆಯಿಂದ ವಾಮಾಚಾರ ನಡೆಸೋ ಸಲುವಾಗಿ ಪತ್ನಿಯನ್ನೇ ಹತ್ಯೆ ಮಾಡಿದ ವೈದ್ಯ ಪತಿಯ ಮುಖವಾಡ ಕಳಚಿ ಬಿದ್ದಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ರಾಮಪೀಡಿಸುತ್ತಿದ್ದ ೆದಿದ್ದ ಡಾಕ್ಟರ್ ಪತ್ನಿಯ ಕೊಲೆ ರಹಸ್ಯ ಬರೋಬ್ಬರಿ 9 ತಿಂಗಳ ನಂತರ ಬಯಲಾಗಿದೆ.

ಕಳೆದ ಫೆಬ್ರವರಿ 11ರಂದು ರಾಮಶ್ವೇರ ಗ್ರಾಮದ ಡಾ. ಚನ್ನೇಶಪ್ಪ‌ ಅವರ ಪತ್ನಿ ಶಿಲ್ಪಾ ಅನುನಾನಾಸ್ಪದವಾಗಿ ಸಾವನ್ನಪ್ಪಿದ್ದರು. ಕಡಿಮೆ ರಕ್ತದೊತ್ತಡದಿಂದ ಸಾವನ್ನಪ್ಪಿದ್ದಾಳೆ ಎಂದು ಪತಿ ಚೆನ್ನೇಶಪ್ಪ ಪೋಷಕರಿಗೆ ತಿಳಿಸಿದ್ದ. ಆದರೆ ಶಿಲ್ಪಾ ಸಾವಿನ ಬಗ್ಗೆ ಮನೆಯವರಿಗೆ ಅನುಮಾನ ಮೂಡಿತ್ತು. ಶಿಲ್ಪಾ ಕೈಯಲ್ಲಿ ಇಂಜೆಕ್ಷನ್ ನೀಡಿದ್ದ ಗುರುತು ಪತ್ತೆಯಾದ ಹಿನ್ನೆಲೆಯಲ್ಲಿ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಶಿಲ್ಪಾ ಪೋಷಕರು ಪ್ರಕರಣವನ್ನು ದಾಖಲು ಮಾಡಿದ್ದರು.

ಇದನ್ನೂ ಓದಿ: ಬಿರಿಯಾನಿ ಆಸೆಗೆ 2 ಲಕ್ಷ ರೂಪಾಯಿ ಕಳೆದುಕೊಂಡ ಆಟೋ ಚಾಲಕ !

ಸುದೀರ್ಘವಾಗಿ 9 ತಿಂಗಳ ಕಾಲ ವಿಚಾರಣೆಯನ್ನು ನಡೆಸಿದ್ದ ನ್ಯಾಮತಿ ಪೊಲೀಸರು ಕೊನೆಗೂ ಸಾವಿನ ರಹಸ್ಯವನ್ನು ಬೇಧಿಸಿದ್ದಾರೆ. ವೈದ್ಯ ಚೆನ್ನೇಶಪ್ಪ ತನ್ನ ಪತ್ನಿ ಶಿಲ್ಪಾಗೆ ಹೈ ಡೋಸ್ ಲಸಿಕೆ ನೀಡಿ ಕೊಲೆ ಮಾಡಿರುವುದು ಎಫ್ಎಸ್ಎಲ್ ವರದಿಯಿಂದ ಬಯಲಾಗಿದೆ.

ನಿಧಿಯಾಸೆಗೆ ಪತ್ನಿಯನ್ನೇ ಬಲಿಕೊಟ್ಟನಾ ವೈದ್ಯ !

ವೃತ್ತಿಯಲ್ಲಿ ವೈದ್ಯನಾಗಿದ್ದರೂ ಕೂಡ ಚೆನ್ನೇಶಪ್ಪ ವಿಪರೀತ ಕುಡಿತದ ದಾಸನಾಗಿದ್ದ. ಮನೆಯಲ್ಲಿ ಪದೇ ಪದೇ ನಿಧಿ ಸಿಗುವ‌ ಬಗ್ಗೆ ಮಾತನಾಡುತ್ತಿದ್ದ. ಅಲ್ಲದೇ ಮಂತ್ರವಾದಿಗಳನ್ನು ಕರೆಯಿಸಿ ಪೂಜೆ ಮಾಡಿಸುತ್ತಿದ್ದ. ಹೀಗಾಗಿಯೇ ಪತಿ ಚೆನ್ನೇಶಪ್ಪ ನಿಧಿ ಆಸೆಯಿಂದಲೇ ಪತ್ನಿ ಶಿಲ್ಪಾಳನ್ನು ಹತ್ಯೆ ಮಾಡಿದ್ದಾನೆ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.

ಅದ್ದೂರಿ‌ ಮದುವೆಯಾಗಿದ್ದರೂ ತೀರದ ಧನದ ಮೋಹ !

ಇದನ್ನೂ ಓದಿ: River 2 Death : ಬ್ರಹ್ಮಾವರದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನದಿಯಲ್ಲಿ ಮುಳುಗಿ ಸಾವು

ಬೆಳಗುತ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯನಾಗಿದ್ದ ಡಾ.ಚೆನ್ನೇಶಪ್ಪನಿಗೆ ಶಿಲ್ಪಾಳನ್ನು ಮದುವೆ ಮಾಡಿಕೊಡಲಾಗಿತ್ತು. ಅಲ್ಲದೇ ಮದುವೆಯ ವೇಳೆಯಲ್ಲಿ ಚೆನ್ನೇಶಪ್ಪನ ಬೇಡಿಕೆಯಂತೆ ಶಿಲ್ಪಾ ಪೋಷಕರು 700 ಗ್ರಾಂ ಬಂಗಾರ, ಒಂದು ಕೆಜಿ ಬೆಳ್ಳಿ ಮತ್ತು 7 ಲಕ್ಷ ರೂಪಾಯಿ ನೀಡಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಆದರೆ ಕುಡಿತದ ಜೊತೆಗೆ ಕ್ಯಾಸಿನೋ ಹುಚ್ಚು ಅಂಟಿಸಿಕೊಂಡಿದ್ದ ಚೆನ್ನೇಶಪ್ಪ ಪದೇ ಪದೇ ವರದಕ್ಷಿಣೆ ತರುವಂತೆ ಶಿಲ್ಪಾಳಿಗೆ ಪೀಡಿಸುತ್ತಿದ್ದ ಎಂದು ಶಿಲ್ಪಾ ಪೋಷಕರು ಆರೋಪಿಸಿದ್ದಾರೆ.

(Blck Magic Murder: Wife killed in hope of treasure: 9 months later exposed doctor’s mask)

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular