ಭಾನುವಾರ, ಏಪ್ರಿಲ್ 27, 2025
HomeNationalಕೇರಳದಲ್ಲಿ ಕಟುಕ ದುರ್ಯೋಧನನಿಗೂ ಇದೆ ದೇವಾಲಯ – ಇಲ್ಲಿನ ಜನಾಂಗಕ್ಕೆ ಇವನೇ ಆರಾಧ್ಯ ದೈವ

ಕೇರಳದಲ್ಲಿ ಕಟುಕ ದುರ್ಯೋಧನನಿಗೂ ಇದೆ ದೇವಾಲಯ – ಇಲ್ಲಿನ ಜನಾಂಗಕ್ಕೆ ಇವನೇ ಆರಾಧ್ಯ ದೈವ

- Advertisement -

Duryodhana temple kerala : ದುರ್ಯೋಧನ ಅಂದ್ರೆ ಸಾಕು ನಮಗೆ ಹಠ ಕೋಪ , ಮಾತ್ಸರ್ಯದ ನೆನಪಾಗುತ್ತೆ . ಪಾಂಡವರ ಅವನತಿಗಾಗಿ ಪ್ರತಿ ಕ್ಷಣ ಬಯಸಿದಾತ. ಅದಕ್ಕಾಗಿ ಯಾವ ಮಟ್ಟಕ್ಕೆ ಅಂದ್ರೆ ಒಂದು ಹೆಣ್ಣಿನ ಮರ್ಯಾದಾ ಹಾನಿ ಮಾಡೋಕು ಆತ ಹಿಂದೆ ಮುಂದೆ ನೋಡಿರಲಿಲ್ಲ . ಕೊನೆ ಉಸಿರೋ ವರೆಗೂ ತನ್ನ ಹಠವನ್ನು ಬಿಟ್ಟು ಕೊಡದೇ ಹೋರಾಡುತ್ತಾ ಮಡಿದಾತ. ಜೊತೆಯಲ್ಲಿ ಸಾವಿನಂಚಿನಲ್ಲಿ ಇದ್ದಾಗಲೂ ಪಾಂಡವರ ಸಾವನ್ನೇ ಬಯಸಿದ್ದ . ಇದನ್ನೆಲ್ಲಾ ಕೇಳಿದ್ರೆ ಎಂಥಾ ಕಟುಕ ಅಂತ ಅನ್ನಿಸದೇ ಇರೋದಿಲ್ಲ. ಆದ್ರೆ ಅಂಥಹ ಕಟುಕ ದುರ್ಯೋಧನನಿಗೂ ದೇವಾಲಯವಿದೆ ಗೊತ್ತಾ ? ಅದೆಲ್ಲಿ ಅಂದ್ರೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ.

Duryodhana temple kerala There is also a temple for the butcher Duryodhana in Kerala - he is the idol of the people here
Image Credit to Original Source

ಹೌದು ಕೇರಳ ಹಾಗೂ ಉತ್ತರಾಖಾಂಡ್ ನ ಬುಡಕಟ್ಟು ಜನಾಂಗಗಳಿಗೆ ಇಂದೂ ದುರ್ಯೋಧನ ಆರಾಧ್ಯ ದೈವ . ಕಾರಣ ಆತ ಅಂದು ಈ ಜನಾಂಗವನ್ನು ಆದರದಿಂದ ಕಂಡಿದ್ದನಂತೆ . ಇದೇ ಕಾರಣಕ್ಕೆ ಕೇರಳದಲ್ಲಿ ದುರ್ಯೋಧನನ ದೇವಾಲಯ ತಲೆ ಎತ್ತಿ ನಿಂತಿದೆ. ಇದು ಇಂದು, ನಿನ್ನೆ ನಿರ್ಮಾಣವಾದ ದೇವಾಲಯವಲ್ಲ.ಬದಲಾಗಿ ಈ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಅಂದ್ರೆ ನೀವು ನಂಬಲೇಬೇಕು .

ಹೌದು ಈ ದೇವಾಲಯವು ದುರ್ಯೋಧನನ ಸಾವಿನ ನಂತರ ನಿರ್ಮಾಣವಾದ ದೇವಾಲಯ . ಇಲ್ಲಿ ವಾಸಿಸುವ ಕುರವ ಎನ್ನುವ ಜನಾಂಗ ದುರ್ಯೋಧನನನ್ನು ತಮ್ಮ ವಂಶಜನ ರೂಪದಲ್ಲಿ ಪೂಜಿಸಿಕೊಂಡು ಬಂದಿದ್ದಾರೆ . ಇಲ್ಲಿನ ಸ್ಥಳ ಪುರಾಣದ ಪ್ರಕಾರ ಒಂದು ಬಾರಿ ದುರ್ಯೋಧನ ಪಾಂಡವರನ್ನು ಅರಸಿಕೊಂಡು ಕೇರಳದ ಈ ಪ್ರದೇಶಕ್ಕೆ ತನ್ನಪರಿವಾರ ಸಮೇತನಾಗಿ ಬಂದಿದ್ದನಂತೆ. ಆಗ ಈ ಕುರವ ಜನಾಂಗ ಆತನನ್ನು ಸತ್ಕರಿಸಿತ್ತಂತೆ .

Duryodhana temple kerala There is also a temple for the butcher Duryodhana in Kerala - he is the idol of the people here
Image Credit to Original Source

ಇದರಿಂದ ಖುಷಿಯಾದ ಸುಯೋಧನ, ತನ್ನ ಕುಲದ ಹೆಸರಿನಿಂದಲೇ ನಿಮ್ಮ ಕುಲವನ್ನು ಕರೆಯಲಿ ಅಂತ ಹರಸಿ ಭೂಮಿ ನೀಡಿದ್ದನಂತೆ. ಅವನ ಮರಣಾ ನಂತರ ಇದೇ ಜಾಗದಲ್ಲಿ ಈ ದೇವಾಲಯ ನಿರ್ಮಾಣ ಮಾಡಲಾಗಿದೆ ಅಂತಾರೆ ಇಲ್ಲಿನ ಸ್ಥಳೀಯರು.ಇನ್ನೊಂದು ಕಥೆಯ ಪ್ರಕಾರ ಒಂದು ಬಾರಿ ದುರ್ಯೋಧನ ಪಾಂಡವರನ್ನು ಅರಸಿಕೊಂಡು ಈ ಜಾಗಕ್ಕೆ ಬಂದಾಗ ಅತೀವ ಬಾಯಾರಿಕೆ ಆಯಿತಂತೆ.

ಇದನ್ನೂ ಓದಿ : ಭಾರತದಲ್ಲೇ ಹುಟ್ಟಿದ್ದನಂತೆ ರಾವಣ – ರಾವಣನಿಗೂ ಭಾರತದಲ್ಲಿವೆ ಹಲವು  ದೇವಾಲಯಗಳು 

ಆಗ ಅಲ್ಲೇ ಇದ್ದ ಮುದುಕಿಯೊಬ್ಬಳು ಹೆಂಡವನ್ನು ನೀಡಿದಳಂತೆ . ತದ ನಂತರ ಆಕೆಗೆ ಒಂದು ಯೋಚನೆಯಾಯಿತಂತೆ ತನ್ನಂತ ಕೀಳು ಜಾತಿಯವಳು ರಾಜನಿಗೆ ಹೆಂಡ ಕೊಟ್ಟಿದ್ದು ತಪ್ಪು ಎಂಬುದಾಗಿ ಮರುಗಿದಳಂತೆ . ಆಗ ದುರ್ಯೋಧನ ತಾಯಿ, ಬಾಯಾರಿಕೆ ನೀಗಿಸಿದ ನಿನ್ನನ್ನು ಜಾತಿಯಿಂದ ನಾನು ನೋಡುವುದಿಲ್ಲ ಎಂದನಂತೆ . ಹಾಗೂ ಆಕೆಯ ಜನಾಂಗವೂ ತನ್ನ ಜನಾಂಗದ ಹೆಸರಿನಲ್ಲಿ ಬೆಳೆಯಲಿ ಎಂದನಂತೆ . ಜೊತೆಗೆ ಆಕೆಗೆ ಭೂಮಿ ಹಾಗೂ ಸಂಪತ್ತು ಕೂಡಾ ದಾನ ನೀಡಿದ ಎಂಬ ನಂಬಿಕೆ ಇದೆ . ಹೀಗಾಗಿ ಈ ದೇವಾಲಯದಲ್ಲಿ ಹೆಂಡವನ್ನು ಭಕ್ತರು ನೈವೇದ್ಯವಾಗಿ ನೀಡುತ್ತಾರೆ .

Duryodhana temple kerala There is also a temple for the butcher Duryodhana in Kerala - he is the idol of the people here
Image Credit to Original Source

ಈ ದೇವಾಲಯದ ಮತ್ತೊಂದು ವಿಶೇಷ ಅಂದ್ರೆ ಇಲ್ಲಿ ದುರ್ಯೋಧನ ಯಾವುದೇ ವಿಗ್ರಹವೂ ಕೂಡಾ ಇಲ್ಲ . ಬದಲಾಗಿ ಬೃಂದಾವನ ಮಾದರಿ ಅಂದ್ರೆ ಎತ್ತರದ ಕಟ್ಟೆಯನ್ನು ನಿರ್ಮಿಸಿ ಅದಕ್ಕೆ ಪೂಜೆಯನ್ನು ಸಲ್ಲಿಸುತ್ತಾರೆ. ಈ ದೇವಾಲಯಕ್ಕೆ ಪೊರುವಾಝೈ ಪೆರುವಿರುತ್ತೈ ಮಲನಾದ ಅಂತ ಕರೆಯುತ್ತಾರೆ . ಇನ್ನು ಇಲ್ಲಿ ಪ್ರತಿ ವರ್ಷ ಮಾರ್ಚ್ನಲ್ಲಿ ರಥೋತ್ಸವನ್ನು ನಡೆಸಲಾಗುತ್ತೆ . ಇದನ್ನು ನೋಡೋಕೆ ಅಂತಾನೆ ಲಕ್ಷಾಂತ ಮಂದಿ ಇಲ್ಲಿಗೆ ಆಗಮಿಸುತ್ತಾರೆ.

ಇದನ್ನೂ ಓದಿ : ಇದು ವಾಮನ ಮಹಿಮೆಯನ್ನು ಸಾರುವ ಕ್ಷೇತ್ರ : ಇಲ್ಲೇ ವಾಮನ ಬಲಿಚಕ್ರವರ್ತಿ ಪಾತಾಳಕ್ಕೆ ತುಳಿದಿದ್ದನಂತೆ

ಹಾಗೂ ಇಲ್ಲಿ ಹರಕೆ ಕಟ್ಟಿಕೊಂಡ್ರೆ ಸಕಲ ಇಷ್ಟಾರ್ಥಗಳು ಈಡೇರುತ್ತೆ ಅನ್ನೋದು ಇಲ್ಲಿನ ನಂಬಿಕೆ . ಇನ್ನು ಈ ದೇವಾಲಯದ ವಿಚಾರಕ್ಕೆ ಬರೋದಾದ್ರೆ ಇದು ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಮಲ್ಲಂಗದಲ್ಲಿದೆ. ಕೊಲ್ಲಂ ನಿಂದ ಖಾಸಗಿ ವಾಹನದ ಮೂಲಕ ಇಲ್ಲಿಗೆ ತಲುಪಬಹುದು. ಇನ್ನು ಇಲ್ಲಿ ಪಕ್ಕದಲ್ಲೇ ಶಕುನಿ ದೇವಾಲಯವಿದ್ದು, ಅಲ್ಲಿಗೂ ನೀವು ಭೇಟಿ ನೀಡಬಹುದು .

Duryodhana temple kerala There is also a temple for the butcher Duryodhana in Kerala – he is the idol of the people here

Vandana kommunje | ವಂದನಾ ಕೊಮ್ಮುಂಜೆ
Vandana Kommunje Senior Content Writer. Working in more than 10 Years in Kannada Famous News Channesl. Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular