ಭಾನುವಾರ, ಏಪ್ರಿಲ್ 27, 2025
HomeSportsCricketIPL 2025 Auction : ಸೂರ್ಯಕುಮಾರ್‌ಗಾಗಿ ಶ್ರೇಯಸ್‌ ಅಯ್ಯರ್‌ ಮುಂಬೈಗೆ ಮಾರಾಟಕ್ಕೆ ಸಿದ್ದವಾದ ಕೆಕೆಆರ್‌

IPL 2025 Auction : ಸೂರ್ಯಕುಮಾರ್‌ಗಾಗಿ ಶ್ರೇಯಸ್‌ ಅಯ್ಯರ್‌ ಮುಂಬೈಗೆ ಮಾರಾಟಕ್ಕೆ ಸಿದ್ದವಾದ ಕೆಕೆಆರ್‌

- Advertisement -

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (IPL) ಕೋಲ್ಕತ್ತಾ ನೈಟ್ ರೈಡರ್ಸ್‌ (KKR) ತಂಡ ಹಾಲಿ ಚಾಂಪಿಯನ್‌ ತಂಡ. ಈಗಾಗಲೇ ಕೋಚ್‌ ಗೌತಮ್‌ ಗಂಭೀರ್ (Gautham Gambir) ತಂಡವನ್ನು ತೊರೆದು ಟೀಂ ಇಂಡಿಯಾ (Indian Cricket Team) ಕೋಚ್‌ ಆಗಿದ್ದಾರೆ. ಇನ್ನೊದೆಡೆಯಲ್ಲಿ ಐಪಿಎಲ್‌ ಟ್ರೋಫಿ ಗೆಲ್ಲಿಸಿಕೊಟ್ಟ ಶ್ರೇಯಸ್ ಅಯ್ಯರ್‌ (Shreyas Iyer) ಅವರನ್ನು ಇದೀಗ ತಂಡದಿಂದ ಕೈಬಿಡಲು ಯೋಜನೆ ರೂಪಿಸಿದೆ. ಅಷ್ಟಕ್ಕೂ ಶ್ರೇಯಸ್‌ ಅಯ್ಯರ್‌ ಅವರನ್ನು ಕೈ ಬಿಡ್ತಾ ಇರೋದು ಸೂರ್ಯ ಕುಮಾರ್‌ ಯಾದವ್‌ (Surya Kumar Yadav) ಗಾಗಿ.

IPL 2025 Auction KKR ready to Trade Shreyas Iyer to Mumbai Indians for Suryakumar
Image Credit to Original Source

ಮುಂಬೈ ಇಂಡಿಯನ್ಸ್‌ ತಂಡದ ಆಟಗಾರ ಸೂರ್ಯಕುಮಾರ್‌ ಯಾದವ್‌ಗೆ ಟಿ೨೦ ಕ್ರಿಕೆಟ್‌ನಲ್ಲಿ ಬಾರೀ ಬೇಡಿಕೆ ಬಂದಿದೆ. ಕಳೆದ ಎರಡು ಅವಧಿಯಲ್ಲಿಯೂ ಸೂರ್ಯಕುಮಾರ್‌ ಯಾದವ್‌ ಉತ್ತಮ ಆಟದ ಪ್ರದರ್ಶನ ನೀಡಿದ್ದಾರೆ. ಭಾರತ ಕ್ರಿಕೆಟ್‌ ತಂಡ ಟಿ೨೦ ವಿಶ್ವಕಪ್‌ ಜಯಿಸುವಲ್ಲಿಯೂ ಮಹತ್ವದ ಪಾತ್ರವಹಿಸಿದ್ದರು. ಇದೇ ಕಾರಣಕ್ಕೆ ಮುಂದಿನ ಐಪಿಎಲ್‌ನಲ್ಲಿ ಸೂರ್ಯಕುಮಾರ್‌ ಯಾದವ್‌ ಮೇಲೆ ಹಲವು ಪ್ರಾಂಚೈಸಿಗಳು ಕಣ್ಣಿಟ್ಟಿವೆ.

ಕಳೆದ ಬಾರಿಯ ಐಪಿಎಲ್‌ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೂಡ ಸೂರ್ಯ ಕುಮಾರ್‌ ಯಾದವ್‌ ಅವರ ಮೇಲೆ ಕಣ್ಣಿಟ್ಟಿದೆ. ಕೆಕೆಆರ್‌ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಸದ್ಯ ಹೇಳಿಕೊಳ್ಳು ವಂತಹ ಫಾರ್ಮ್‌ನಲ್ಲಿ ಇಲ್ಲ, ಅಯ್ಯರ್‌ ಅವರನ್ನು ಕೈಬಿಡಲು ತಂಡ ಯೋಜನೆ ಹಾಕಿಕೊಂಡಿದೆ. ಇದೇ ಕಾರಣಕ್ಕೆ ಸೂರ್ಯಕುಮಾರ್‌ ಯಾದವ್‌ ಅವರನ್ನು ಸಂಪರ್ಕ ಮಾಡಿದ್ದು, ತಂಡದ ನಾಯಕತ್ವ ನೀಡುವ ಭರವಸೆಯನ್ನು ನೀಡಿದೆ.

ಇದನ್ನೂ ಓದಿ : IPL 2025 : ಎಂಎಸ್ ಧೋನಿ ನಿವೃತ್ತಿ: ಸಿಎಸ್‌ಕೆ ತಂಡಕ್ಕೆ ರಿಷಬ್ ಪಂತ್

ಸೂರ್ಯಕುಮಾರ್ ಕಳೆದೆರಡು ವರ್ಷಗಳಲ್ಲಿ ವಿಶ್ವದ ಅತ್ಯುತ್ತಮ T20 ಆಟಗಾರರಾಗಿ ಹೊರಹೊಮ್ಮಿದ್ದಾರೆ. ಅಲ್ಲದೇ ಭಾರತ T20I ತಂಡದ ನಾಯಕರೂ ಹೌದು. ಇದೇ ಕಾರಣದಿಂದಾಗಿ ಸೂರ್ಯ ಕುಮಾರ್‌ ಯಾದವ್‌ಗೆ ಸಹಜವಾಗಿಯೇ ಬೇಡಿಕೆ ಬಂದಿದೆ.

IPL 2025 Auction KKR ready to Trade Shreyas Iyer to Mumbai Indians for Suryakumar
Image Credit to Original Source

ಐಪಿಎಲ್‌ ಹರಾಜಿಗೂ ಮೊದಲೇ ಕೆಕೆಆರ್‌ ಹಾಗೂ ಕೋಲ್ಕತ್ತಾ ತಂಡ ನಡುವೆ ವ್ಯಾಪಾರ ನಡೆಯುವ ಸಾಧ್ಯತೆಯಿದೆ. ಸೂರ್ಯ ಕುಮಾರ್‌ ಯಾದವ್‌ ಅವರನ್ನು ಖರೀದಿಸುವ ಸಲುವಾಗಿ ಕೆಕೆಆರ್‌ ತಂಡ ಶ್ರೇಯಸ್‌ ಅಯ್ಯರ್‌ ಅವರನ್ನು ಮುಂಬೈ ಇಂಡಿಯನ್ಸ್‌ ತಂಡಕ್ಕೆ ಮಾರಾಟ ಮಾಡುವ ಸಾಧ್ಯತೆಯಿದೆ. ಇದೇ ಲೆಕ್ಕಾಚಾರ ನಡೆದ್ರೆ ಶ್ರೇಯಸ್‌ ಅಯ್ಯರ್‌ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್‌ ಕ್ಯಾಪ್‌ ತೊಡಲಿದ್ದಾರೆ.

ಇದನ್ನೂ ಓದಿ :  ಕೆಎಲ್‌ ರಾಹುಲ್‌ ನಿವೃತ್ತಿ : ಏನಿದು ಹೊಸ ಸಂಚು ?

ಮುಂಬೈ ತಂಡಕ್ಕೆ ನಾಯಕರಾಗ್ತಾರಾ ಸೂರ್ಯಕುಮಾರ್‌ ಯಾದವ್‌ ?

ಗುಜರಾತ್‌ ಟೈಟಾನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಅವರನ್ನು ಕರೆತರುವ ಸಲುವಾಗಿಯೇ ಐದು ಬಾರಿ ತಂಡಕ್ಕೆ ಐಪಿಎಲ್‌ ಟ್ರೋಫಿಯನ್ನು ಗೆಲ್ಲಿಸಿಕೊಟ್ಟಿದ್ದ ರೋಹಿತ್‌ ಶರ್ಮಾ ಅವರಿಗೆ ಮುಂಬೈ ಇಂಡಿಯನ್ಸ್‌ ತಂಡ ಕೋಕ್ ಕೊಟ್ಟಿತ್ತು. ಆದರೆ ಹಾರ್ದಿಕ್‌ ಪಾಂಡ್ಯ ಕಳೆದ ಬಾರಿ ಹೇಳಿಕೊಳ್ಳುವ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಹಾರ್ದಿಕ್‌ ಪಾಂಡ್ಯ ಅವರನ್ನು ತಂಡದಿಂದ ಕೈಬಿಡಲಾಗುತ್ತದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಇದನ್ನೂ ಓದಿ : Gautam Gambhir Warning: ಟೀಮ್ ಇಂಡಿಯಾ ಆಟಗಾರರಿಗೆ ಕೋಚ್ ಗಂಭೀರ್ ಖಡಕ್ ವಾರ್ನಿಂಗ್ 

ಹಾರ್ದಿಕ್‌ ಪಾಂಡ್ಯಗೆ ಮುಂಬೈ ಇಂಡಿಯನ್ಸ್‌ ತಂಡ ಕೋಕ್‌ ನೀಡಿದ್ರೆ ಸೂರ್ಯಕುಮಾರ್‌ ಯಾದವ್‌ ಮುಂಬೈ ಇಂಡಿಯನ್ಸ್‌ ನಾಯಕರಾಗುವ ಸಾಧ್ಯತೆಯಿದೆ. ಐದು ಬಾರಿ ಐಪಿಎಲ್‌ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರೂ ಕೂಡ ಹಾರ್ದಿಕ್‌ ಪಾಂಡ್ಯಗಾಗಿ ರೋಹಿತ್‌ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗೆ ಇಳಿಸಲಾಗಿತ್ತು. ಇದೀಗ ಸೂರ್ಯಕುಮಾರ್‌ ಯಾದವ್‌ಗಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಕೈಬಿಟ್ಟಿರೂ ಅಚ್ಚರಿಯಿಲ್ಲ.

IPL 2025 Auction: KKR ready to Trade Shreyas Iyer to Mumbai Indians for Suryakumar

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular