ಮಂಗಳವಾರ, ಜೂನ್ 17, 2025
HomeBreakingಜೆಡಿಎಸ್-ಬಿಜೆಪಿ ಹೊಸ ದೋಸ್ತಿಯ ಸ್ಫೋಟಕ ರಹಸ್ಯ..?

ಜೆಡಿಎಸ್-ಬಿಜೆಪಿ ಹೊಸ ದೋಸ್ತಿಯ ಸ್ಫೋಟಕ ರಹಸ್ಯ..?

- Advertisement -
Soudha Suli

ದೋಸ್ತಿ ಮಾಡಿಕೊಳ್ಳುವುದು ತಪ್ಪಲ್ಲ. ಆದರೆ ಅದನ್ನು ನಿಭಾಸುವಲ್ಲಿ ಯಡುವುದು ತಪ್ಪು. ದೋಸ್ತಿ ಹೆಸರಲ್ಲಿ ರಾಜಕಾರಣ ಮಾಡುವುದು ತಪ್ಪಲ್ಲ. ಆದರೆ ಡೈವೋರ್ಸ್ ಕೊಡುವುದು ತಪ್ಪು ಹಾಗಂತ ರಾಜಕೀಯ ವಿಶ್ಲೇಷಕರು ವ್ಯಾಖ್ಯಾಸುತ್ತಿದ್ದಾರೆ. ರಾಜ್ಯ ರಾಜಕೀಯದಲ್ಲಿ ತೀರಾ ಸಾಮಾನ್ಯ ಎನ್ನುವವರೂ ಇದ್ದಾರೆ. ಇದಕ್ಕೆ ಅನೇಕ ಉದಾಹರಣೆ ಕಣ್ಮುಂದೆ ಇದೆ. ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಿದ್ದರು.50-50 ಆಡಳಿತ ಆಗುವುದಕ್ಕೆ ಮುಂಚೆಯೇ ಭಾರತೀಯ ಜನತಾ ಪಕ್ಷದ ಯಡಿಯೂರಪ್ಪ ಹಾಗೂ ಜಾತ್ಯತೀತ ಜನತಾದಳದ ವರಿಷ್ಠ ದೇವೇಗೌಡರ ನಡುವೆ ವೈಮನಸು ಉಂಟಾಗಿ ಸರ್ಕಾರ ಬಿದ್ದು ಹೋಯಿತು. ಜೆಡಿಎಸ್‌ನ ಒಂದು ಸಣ್ಣ ಯಡವಟ್ಟಿನಿಂದ ಭವಿಷ್ಯದಲ್ಲಿ ಬಿಜೆಪಿ ವಿಜೃಂಭಿಸಲು ಕಾರಣವಾದದ್ದನ್ನು ಇಲ್ಲಿ ಪಟ್ಟಿ ಮಾಡುವ ಅಗತ್ಯವಿಲ್ಲ. ಆನಂತರ ವಿಧಾನ ಸಭೆ ಚುನಾವಣೆ ನಡೆದು ಯಾರಿಗೂ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಯಿತು.

Devegowda And Modi

ಕೋಮುವಾದಿ ಅಂತ ಬಿಜೆಪಿಯನ್ನು ಜರಿದ ಸಿದ್ದರಾಮಯ್ಯನವರು ಜಾತ್ಯತೀತ ಜನತಾದಳ ಜೊತೆ ದೋಸ್ತಿ ಮಾಡಿಕೊಂಡರು. ಕೋಮುವಾದಿ ಶಕ್ತಿಗಳನ್ನು ದೂರ ಇಡುವುದೇ ನಮ್ಮ ಗುರಿ ಅಂತ ಸಮರ್ಥಿಸಿಕೊಂಡರು. ಅತಿ ಹೆಚ್ಚು ಸ್ಥಾನಗಳಿಸಿದ್ದ ಕಾಂಗ್ರೆಸ್ ಫಸ್ಟ್ ಕ್ಲಾಸ್‌ನಲ್ಲಿತ್ತು. ಕಡಿಮೆ ಸ್ಥಾನದಲ್ಲಿದ್ದ ಜೆಡಿಎಸ್ ಥರ್ಡ್ಕ್ಲಾಸ್‌ಗೆ ಸೀಮಿತವಾಗಿತ್ತು. ರಾಜಕೀಯ ವೈಶಿಷ್ಟ್ಯ ಹಾಗೂ ವೈರುಧ್ಯವೆಂದರೆ ಫಸ್ಟ್ ಕ್ಲಾಸ್‌ನಲ್ಲಿದ್ದವರು ಥರ್ಡ್ ಕ್ಲಾಸ್‌ಗೂ, ಥರ್ಡ್ ಕ್ಲಾಸ್‌ನಲ್ಲಿದ್ದವರು ಫಸ್ಟ್ ಕ್ಲಾಸ್‌ಗೂ ಬಡ್ತಿ ಪಡೆದ್ರು ಅಂತ ವಿರೋಧಿಗಳು ನಗೆಚಾಟಿ ಬೀಸಿದ್ದರು. ಅಲ್ಲಿಗೆ ದೋಸ್ತಿಗಳು ಪುಕ್ಕಟೆ ರಂಜನೆಗೆ ಪ್ರೇರಣೆ ಒದಗಿಸಿದ್ದು ಹಳೆಯ ವಿಷಯ.

Backword Class Hdk Siddu And Yediyurappa

ಆದರೆ ಜೆಡಿಎಸ್‌ನ ಕುಮಾರಸ್ವಾಮಿಯ ಸರ್ಕಾರದ ಪ್ರತಿಯೊಂದು ಹಂತದಲ್ಲೂ ‘ಕೈ’ಕಟ್ಟಿ ಹಾಕಿದ್ದರಿಂದ ಆಡಳಿತ ನಡೆಸುವುದೇ ಕಡು ಕಷ್ಟವಾಗಿತ್ತು. ನನ್ನ ಕತೆ ಒಬ್ಬ ಕ್ಲರ್ಕ್ ಗಿಂತಲೂ ಕೊನೆಯಾಗಿತ್ತು ಅಂತ ಸಾರ್ವಜನಿಕ ಸಮಾರಂಭಗಳಲ್ಲೇ ಕುಮಾರಸ್ವಾಮಿ ಕಣ್ಣೀರ ಕೋಡಿ ಹರಿಸಿದ್ದು ಪ್ರತಿಯೊಬ್ಬ ಕನ್ನಡಿಗನೂ ಮರೆತಿಲ್ಲ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನ ಸಿದ್ದರಾಮಯ್ಯನವರು ‘ಕುಣಿಲಾರದೆ ನೆಲೆ ಡೊಂಕು’ಅಂದAಗೆ ಅಂತ ತಮ್ಮ ಪದೇ ಟಿಪಿಕಲ್ ಶೈಲಿಯಲ್ಲಿ ಗೇಲಿ ಮಾಡಿದ್ದು, ದೇವೇಗೌಡರು ಆಯ್ದಾಯ್ದ ಪದಗಳಿಂದ ಸಿದ್ದರಾಮನಯ್ಯನವರಿಗೇ ತಿರುಗುಬಾಣ ಬಿಟ್ಟದ್ದೂ ಒಂದು ವಿಶಿಷ್ಟ ಪ್ರಹಸನ..!

Siddharamyya 5

ಸದನದಲ್ಲಿ ಬಿಜೆಪಿಯ ಅಸಹಾಯಕತೆ, ಯಡಿಯೂರಪ್ಪನವರ ಆಡಳಿತ ಹಳಿತಪ್ಪಿದ್ದನ್ನು ‘ಡಕೋಟಾ ಎಕ್ಸ್ ಪ್ರೆಸ್, ಉಪಮೆಯ ಮೂಲಕ ಸಿದ್ದರಾಮಯ್ಯ ಮತ್ತೆ ಹಾಸ್ಯದ ಹೊನಲು ಹರಿಸಿದ್ದರು. ಇದಕ್ಕೆ ಕೋಪೋದ್ರಿಕ್ತ ರಾಜಾಹುಲಿ ಖ್ಯಾತಿಯ ಯಡಿಯೂಪ್ಪ ಮರುದಿನ ನಡೆದ ಸದನದಲ್ಲಿ ಎಲ್ಲವನ್ನೂ ಒಟ್ಟಿಗೆ ಸೇರಿಸಿ ಸಿದ್ದರಾಮಯ್ಯನವರತ್ತ ಬ್ರಹ್ಮಾಸ್ತçವನ್ನೇ ಪ್ರಯೋಗಿಸಿದ್ದು ಇಲ್ಲಿ ಉಲ್ಲೇಖನೀಯ. ವಿಚಿತ್ರ ವೆಂದರೆ ಪುನಃ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಹೊಂದಾಣಿಕೆಯ ಸುದ್ದಿ ಹರಿದಾಡುತ್ತಿದೆ..! ಇದಕ್ಕೆ ಪೂರಕವೆಂಬಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರ ಪರವಾಗಿ ಸದನದಲ್ಲಿ ಬ್ಯಾಟ್ ಬೀಸಿದ್ದು ಹುಬ್ಬೇರುವಂತೆ ಮಾಡಿದೆ.

Yatnal W E1603191731637

ಅಧಿವೇಶನದ ಕೊನೆಯ ದಿನ (ಫೆ.2/05-20201) ಸುದೀರ್ಘ ಭಾಷಣ ಮಾಡಿದ ಯಡಿಯೂರಪ್ಪ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರತ್ತ ಸೇಡಿನಾಸ್ತç ಬೀಸಿದರು. ಮೀಸಲಾತಿ ಸಂಬಂಧಿಸಿದಂತೆ ಸ್ವಪಕ್ಷೀಯ ಬಸನಗೌಡ ಪಾಟೀಲ್ ಯತ್ನಾಳ್ ಅವರಿಂದ ಮುಜುಗರಕ್ಕೆ ಒಳಗಾದರೂ, ಮುಖ್ಯಮಂತ್ರಿಗಳು ಅವರ ಪ್ರಶ್ನೆಗೂ ಉತ್ತರಿಸಿದರು. ತಮಗೆ ಪ್ರಧಾನಿ ಮತ್ತು ಕೇಂದ್ರ ಗೃಹಸಚಿವರ ಬೆಂಬಲವಿದೆ ಎಂದು ಸದನದಲ್ಲಿ ಗಟ್ಟಿಧ್ವನಿಯಲ್ಲಿ ಸಂದೇಶ ರವಾನಿಸಿದರು. ಮತ್ತೆ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರತ್ತ ಕುಡಿನೋಟದ ಕಿಡಿ ಬಿಟ್ಟ ಯಡಿಯೂರಪ್ಪ, ‘ಯಾವಾಗಲೂ ಅಧಿಕಾರ ಇರಬೇಕೆಂದು ಬಯಸುವ ಕಾಂಗ್ರೆಸಿಗರು ಕುಮಾರಸ್ವಾಮಿಯವರಿಗೆ ಮಾಡಿದ್ದೇನು ?.

Hdk

ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೂಚಿಸಿ ಅಧಿಕಾರ ಹಂಚಿಕೊಂಡ್ರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೇವಲ ಎಂಬತ್ತು ಸ್ಥಾನ ಸಿಕ್ಕಿತ್ತು. ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೂಚಿಸಿ ಅಧಿಕಾರ ಹಂಚಿಕೊAಡು ಕೆಲಸ ನಿರ್ವಹಿಸಿದರು. ಆ ಅವಧಿಯಲ್ಲಿ ಯಾವರೀತಿ ಸರಕಾರ ನಡೆಯಿತು ?, ‘ಕ್ಲರ್ಕ್ ರೀತಿಯಲ್ಲಿ ಕೆಲಸ ಮಾಡಿಕೊಂಡು ಬಂದೆ,’ ಅಂತ ಕುಮಾರಸ್ವಾಮಿ ಹೇಳಿಲಲ್ಲವೇ ? ಕುಮಾರಸ್ವಾಮಿಯವರನ್ನು ಹೀನಾಯ ಸ್ಥಿತಿಗೆ ತಂದಿದ್ದರಿAದ ಅಭಿವೃದ್ದಿ ಕೆಲಸದ ಕಡೆ ಗಮನ ಕೊಡಲು ಅವರಿಗೆ ಸಾಧ್ಯವಾಗಲಿಲ್ಲ. ಅನೇಕ ರೀತಿಯ ಕಿರುಕುಳವನ್ನು ಕಾಂಗ್ರೆಸ್ ಕುಮಾರಸ್ವಾಮಿ ಯವರಿಗೆ ನೀಡಿತ್ತು. ಅವರನ್ನೂ ಸ್ವತಂತ್ರದಿAದ ಕೆಲಸ ಮಾಡಲು ಬಿಡಲಿಲ್ಲ’ಎನ್ನುತ್ತಾ ಕುಮಾರಸ್ವಾಮಿ ಪರ ಬ್ಯಾಟ್ ಬೀಸಿದ್ದ ಯಡಿಯೂರಪ್ಪ ಒಂದೇ ಬಾಣದಿಂದ ಎರಡು ಹಕ್ಕಿಗಳನ್ನು ಹೊಡೆದು ಹಾಕಿ ರಾಜಕೀಯ ದಾಳ ಉರುಳಿಸಿದ್ದಾರೆ. ಒಂದು, ಸಿದ್ದರಾಮಯ್ಯನವರಿಗೆ ತಿರುಗೇಟು, ಎರಡು ; ಭವಿಷ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ. ಮೂರನೆಯ ಸತ್ಯವೆಂದರೆ ; ಹೈಕಮಾಂಡ್ ನನ್ನ ಜೊತೆಗಿದೆ ಎನ್ನುವ ಮೂಲಕ ಅವರ ಅಂತಃ ಕಲಹ ಸಾರುತ್ತಿರುವ ವಿರೋಧಿಗಳಿಗೂ ಉತ್ತಮ ಸಂದೇಶ ರವಾನಿಸಿರುವುದು.

Vijayendra

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಆಗುತ್ತದೆ. ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿಯುತ್ತಾರೆ ಎನ್ನುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೂ ಒಂದು ಪಾಠ. ಯಡಿಯೂರಪ್ಪ ಅವರ ರಾಜಕೀಯ ದೂರ ದೃಷ್ಟಿ ಇಲ್ಲಿಗೇ ನಿಂತಿಲ್ಲ. ಪಕ್ಷಕ್ಕೆ ಬೇರಿಲ್ಲದ ಕೆಆರ್‌ಪೇಟೆ ಮತ್ತು ಶಿರಾ ಅಸೆಂಬ್ಲಿ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದ ಬಳಿಕ ಮತ್ತೊಂದು ವೈರುಧ್ಯ ಸೃಷ್ಟಿಯಾಗಿತ್ತು. ಪಕ್ಷದಲ್ಲಿ ಬೈಎಲೆಕ್ಷನ್ ಸ್ಪೆಷಲಿಸ್ಟ್ ಖ್ಯಾತಿಯ ಬಿಎಸ್‌ವೈ ಅವರ ಪುತ್ರ ಬಿ.ವೈ.ವಿಜಯೇಂದ್ರ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಪುಕಾರೂ ಎದ್ದಿತ್ತು. ವಿಜಯೇಂದ್ರ ಮತ್ತು ಖುದ್ದು ಸಿಎಂ ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದರೂ, ಪಕ್ಷದಲ್ಲಿ ನಡೆಯುತ್ತಿದ್ದ ಆಂತರಿಕ ಬೆಳವಣಿಗೆಯಿಂದಾಗಿ ಮತ್ತೆಮತ್ತೆ ಆ ಸುದ್ದಿ ಮುನ್ನಲೆಗೆ ಬರುತ್ತಿತ್ತು. ಉಪಚುನಾವಣೆಯ ಆನಂತರ ವಿಜಯೇಂದ್ರ ರಾಜಕೀಯವಾಗಿ ಬೆಳೆಯುತ್ತಿದ್ದ ರೀತಿ ಬಿಜೆಪಿಯವರಿಗೇ ಹೊಟ್ಟೆ ಉರಿ ತರಿಸಿದ್ದು ಗುಟ್ಟಿನ ವಿಚಾರವಲ್ಲ.

Hd Devegowda

ಸರಕಾರದ ದೈನಂದಿನ ಆಡಳಿತದಲ್ಲಿ ಮೂಗು ತೂರಿಸುತ್ತಿದ್ದಾರೆ ಎನ್ನುವ ದೂರು ವರಿಷ್ಠರ ಬಳಿಗೆ ಹೋಗಿದ್ದು ಅಚ್ಚಹಸಿರಾಗಿಯೇ ಇದೆ. ಈ ಎಲ್ಲಾ ಬೆಳವಣಿಗೆ ಅರಿತ ಬಿಎಸ್‌ವೈ, ಮಗ ಚುನಾವಣೆಗೆ ನಿಲ್ಲಲ್ಲ ಎಂದಿರುವುದು ಉತ್ತಮ ಬೆಳವಣಿಗೆ. ಈ ಎಲ್ಲಾ ಗೊಂದಲಗಳ ನಡುವೆ ರಾಜ್ಯ ರಾಜಕಾರಣದಲ್ಲಿ ಇದ್ದಕ್ಕಿದ್ದಂತೆ ಮೆಗಾ ಡೆವಲಪ್‌ಮೆಂಟ್ ಶುರುವಾಗಿದೆ. ಬದ್ಧ ರಾಜಕೀಯ ವೈರಿ ಕುಟುಂಬಗಳ ನಡುವೆ ಈಗ ಸ್ನೇಹದ ತಂಗಾಳಿ ಬಿಸುತ್ತಿದೆ. ಬಿಎಸ್ ವೈ-ದೇವೇಗೌಡ ಕುಟುಂಬಗಳ ಮಧ್ಯೆ ದೋಸ್ತಿ ಬೆಳೆಯುತ್ತಿದೆ. ಇದರ ಭಾಗವಾಗಿಯೇ ದೇವೇಗೌಡರಿಗೆ ಸರ್ಕಾರದಿಂದ ಅರವತ್ತು ಲಕ್ಷದ ಕಾರ್ ಗಿಫ್ಟ್ ನೀಡಿರುವ ಸುದ್ದಿ ಹೊರಬಿದ್ದಿದೆ. ಮುವತ್ತು ಲಕ್ಷದ ಕಾರ್‌ಗಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಂದು ವರ್ಷ ಕಾದಿದ್ದರು. ದಿಢೀರ ದೊಡ್ಡಗೌಡರಿಗೆ ದುಬಾರಿ ಕಾರ್‌ಗಿಫ್ಟ್ ಕೊಟ್ಟಿರೋದ್ರಿಂದ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ.

Hdk Join Bjp 3

ಈ ಬಾರಿ ಸದನದಲ್ಲೂ ಕುಮಾರಸ್ವಾಮಿ ಸರ್ಕಾರದ ಪರ ಮೃದು ಧೋರಣೆ ತೋರಿದ್ದನ್ನು ಸ್ಮರಿಸಬಹುದು. ಸರ್ಕಾರ ವಿರುದ್ಧ ಕುಮಾರಸ್ವಾಮಿ ಅವರು ಒಂದೇ ಒಂದು ಮಾತಡಿಲ್ಲ..! ಮಾಜಿ ಪ್ರಧಾನಿ ದೇವೇಗೌಡರು ರಾಜ್ಯಸಭೆಯಲ್ಲಿ ಮಾತನಾಡುವಾಗಲೂ ರೈತ ಚಳವಳಿ ಬಗ್ಗೆ ಮೋದಿಯನ್ನು ತೆಗಳಲಿಲ್ಲ..! ಮೋದಿ ಅವರು ಕೂಡ ಇತ್ತೀಚೆಗಷ್ಟೇ ಕುಮಾರಸ್ವಾಮಿಯ ಹುಟ್ಟುಹಬ್ಬಕ್ಕೆ ಶುಭ ಹಾರೈಸಿ ದ್ದನ್ನು ಜನ ಮರೆತಿಲ್ಲ. ಜೊತೆ ಜೊತೆಗೆ ಈ ಬಾರಿ ಬಿಜೆಪಿ ಹಿರಿಯರ ಕ್ಷೇತ್ರಗಳಿಗಿಂತಲೂ ಎಚ್‌ಡಿಕೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿರುವುದು ಹಲವು ಗುಮಾನಿಗಳನ್ನು ಗಟ್ಟಿಮಾಡುತ್ತಿದೆ.

Hdk Join Bjp 5

ನಾಯಕತ್ವ ಬದಲಾವಣೆ ಸುದ್ದಿ ಮಧ್ಯೆಯೂ ಹೆಚ್ಡಿಕೆ, ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಮಾಧಾನ ಮಾಡಿದ್ದರು. ಇದೀಗ ಈ ರೀ-ಕನೆಕ್ಟ್ ಆದ ಗೆಳೆತನದ ಹಿಂದೆ ರಾಜಕಾರಣದ ಸ್ಫೋಟಕ ರಹಸ್ಯ ಇರುವುದು ಸ್ಪಷ್ಟವಾಗಿದೆ. ದಿಢೀರ್ ಗೆಳೆತನ ಮೂಲಕವೇ ಹೈಕಮಾಂಡ್‌ಗೆ ಬಿಎಸ್‌ವೈ ಮೆಸೇಜ್ ಕಳಿಸಿದರೇ? ನಾಯಕತ್ವ ಬದಲಾವಣೆ ಚರ್ಚೆ ನಡುವೆಯೇ ಗೌಡರ ಜೊತೆ ಕೈ ಜೋಡಿಸಿದರೆ ಸಿಎಂ? ಅಗತ್ಯ ಬಿದ್ದರೆ ಬಿಜೆಪಿ-ಜೆಡಿಎಸ್ ಮೈತ್ರಿಗೂ ಯಡಿಯೂರಪ್ಪ ಸೈ ?.. ಇಂತಹ ಹಲವಾರು ಪ್ರಶ್ನೆಗಳಿಗೆ ಬಿಎಸ್‌ವೈ ಅವರೇ ಉತ್ತರಿಸಬೇಕು.ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿರುವ ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಬಿಜೆಪಿ ಬೆಂಬಲ ಅಗತ್ಯ ಅನ್ನೋದು ಇಲ್ಲಿ ಮುಖ್ಯ.

ವರ್ತಮಾನದ ಗುಟ್ಟು: ರಾಜಕೀಯದಲ್ಲಿ ಯಾರೂ ದುಷ್ಮನ್‌ಗಳಲ್ಲ. ಯಾರೂ ಇಲ್ಲಿ ದೋಸ್ತಿಗಳಲ್ಲ..!

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular