ಮಂಗಳೂರು : ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ಲಾರಿ ಯೊಂದು ಸಮುದ್ರಕ್ಕೆ ಉರುಳಿಬಿದ್ದು, ಚಾಲಕ ಹಾಗೂ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದ ನವ ಮಂಗಳೂರು ಬಂದರಿನಲ್ಲಿ ನಡೆದಿದೆ.
ಮಲ್ಲಕಪ್ಪ ( 35 ವರ್ಷ) ಎಂಬಾತನೇ ಮೃತ ಕಾರ್ಮಿಕ ನಾಗಿದ್ದು ಮೃತ ದೇಹವನ್ನು ಹೊರ ತೆಗೆಯಲಾಗಿದೆ. ಇನ್ನು ಸಮುದ್ರ ಪಾಲಾಗಿರುವ ಚಾಲಕ ರಾಜೇಸಾಬನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದ್ದು, ನವಮಂಗಳೂರು ಬಂದರು ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂಧಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಭಾನುವಾರ ರಾತ್ರಿ 11ಗಂಟೆಯ ಸುಮಾರಿಗೆ ಕಂಟೈನರ್ ಲಾರಿ ಬಂದರಿ ನ 14ನೇ ಬರ್ತ್ ನಲ್ಲಿ ಸಂಚಾರ ಮಾಡುತ್ತಿತ್ತು. ಇದೇ ಕಂಟೈನರ್ ಗೆ ಬೇರೆ ಕೆಲಸಕ್ಕೆ ಬಂದಿದ್ದ ಕಾರ್ಮಿಕನೋರ್ವ ಹತ್ತಿಕೊಂಡಿದ್ದಾನೆ. ಕಂಟೈನರ್ ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ಸಮುದ್ರ ಉರುಳಿ ಈ ದುರ್ಘಟನೆ ಸಂಭವಿಸಿದೆ.