ಸೋಮವಾರ, ಮೇ 12, 2025
HomeBreakingSupreme Court : ಪರೀಕ್ಷೆಯಿಂದ ಒಂದು ಸಾವು ಸಂಭವಿಸಿದ್ರೂ ಸರಕಾರವೇ ಹೊಣೆ : ಸುಪ್ರೀಂ ಕೊರ್ಟ್

Supreme Court : ಪರೀಕ್ಷೆಯಿಂದ ಒಂದು ಸಾವು ಸಂಭವಿಸಿದ್ರೂ ಸರಕಾರವೇ ಹೊಣೆ : ಸುಪ್ರೀಂ ಕೊರ್ಟ್

- Advertisement -

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ಯಲ್ಲಿ ಪರೀಕ್ಷೆ ನಡೆಸಲು ಮುಂದಾಗಿರುವ ಆಂಧ್ರಪ್ರದೇಶ ಸರಕಾರದ ವಿರುದ್ದ ಸುಪ್ರೀಂ ಕೋರ್ಟ್ ಗರಂ ಆಗಿದೆ. ಪರೀಕ್ಷೆಯಿಂದ ಒಂದೇ ಒಂದು ಸಾವು ಸಂಭವಿಸಿದ್ರೂ ಸರ್ಕಾರವೇ ಹೊಣೆ ಎಂದಿದೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಸಿಬಿಎಸ್ ಇ ಹಾಗೂ ಐಸಿಎಸ್ಇ ಬೋರ್ಡ್ ಗಳು ಈಗಾಗಲೇ 10 ಹಾಗೂ 12 ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಿವೆ. 21 ರಾಜ್ಯಗಳು ಪರೀಕ್ಷೆಯನ್ನು ರದ್ದು ಗೊಳಿಸಿವೆ. ಈ ನಡುವಲ್ಲೇ ಆಂಧ್ರಪ್ರದೇಶ ಸರಕಾರ ಪರೀಕ್ಷೆ ನಡೆಸಲು ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ.

ಪರೀಕ್ಷೆಯನ್ನು ನಡೆಸುವ ಸರಕಾರದ ಕ್ರಮದ ವಿರುದ್ದ ಸಲ್ಲಿಕೆ ಯಾಗಿರುವ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಎಲ್ಲವನ್ನೂ ಅನಿಶ್ಚಿತ ಸ್ಥಿತಿಯಲ್ಲಿ ಇಡಲು ಸಾಧ್ಯವಾಗದು. 2 ದಿನದಲ್ಲಿ ಸರಕಾರ ತನ್ನ ನಿರ್ಧಾರವನ್ನು ತಿಳಿಸಬೇಕು. ಪರೀಕ್ಷೆಯಿಂದ ಸಾವು ಸಂಭವಿಸಿದ್ರೆ ಸರಕಾರವನ್ನೇ ಹೊಣೆ ಎಂದಿದೆ. ಆಂಧ್ರಪ್ರದೇಶ ಸರಕಾರದ ಪರ ವಾದ ಮಂಡಿಸಿದ ವಕೀಲರಾದ ಮಹಪೂಜ್ ನಾಕ್ಷಿ, ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿರುವ ಕಾರಣ ಪರೀಕ್ಷೆ ನಡೆಸಲು ಮುಂದಾಗಿದ್ದೇವೆ ಎಂದಿದ್ದಾರೆ.

ಸುಪ್ರೀಂ ಕೋರ್ಟ್ 2 ದಿನಗಳ ಕಾಲಾವಕಾಶ ನೀಡಿದ್ದು ಎರಡು ದಿನಗಳ ಒಳಗಾಗಿ ಸರಕಾರ ತನ್ನ ನಿಲುವನ್ನು ಪ್ರಕಟಿಸಬೇಕಾಗಿದೆ. ಸರಕಾರ ಪರೀಕ್ಷೆಯನ್ನು ರದ್ದು ಮಾಡುತ್ತಾ, ಇಲ್ಲ ನಡೆಸುತ್ತಾ ಅನ್ನೋದು ಕುತೂಹಲ ಮೂಡಿಸಿದೆ. ಆಂಧ್ರ ಸರಕಾರದ ನಿರ್ಧಾರ ಇತರ ರಾಜ್ಯಗಳ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular