ಮಂಗಳವಾರ, ಏಪ್ರಿಲ್ 29, 2025
HomekarnatakaMurudeshwara : ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ

Murudeshwara : ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ

- Advertisement -

ಭಟ್ಕಳ : ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಪ್ರವಾಸಿಗರನ್ನು ಲೈಫ್‌ ಗಾರ್ಡ್‌ ಹಾಗೂ ಟೂರಿಸ್ಟ್‌ ಮಿತ್ರ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ ಕಡಲತೀರದಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ನಿವಾಸಿಗಳಾಗಿರುವ ಅರ್ಜುನ್‌, ಉಮೇಶ್‌, ಸೂರ್ಯ ಎಂಬವರೇ ರಕ್ಷಣೆಗೆ ಒಳಗಾದವರು. ಶಿಕಾರಿಪುರದಿಂದ ಪ್ರವಾಸಕ್ಕಾಗಿ ಮೂವರು ಕೂಡ ಮರುಡೇಶ್ವರಕ್ಕೆ ಬಂದಿದ್ದಾರೆ. ಈ ವೇಳೆಯಲ್ಲಿ ಸಮುದ್ರದ ಅಬ್ಬರ ಜೋರಾಗಿದ್ದು, ಅಲೆಯಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಲೈಫ್‌ ಗಾರ್ಡ್‌ ಹಾಗೂ ಟೂರಿಸ್ಟ್‌ ಮಿತ್ರ ಸಿಬ್ಬಂದಿಗಳು ಕೂಡಲೇ ಬೋಟ್‌ನೊಂದಿಗೆ ಸಮುದ್ರಕ್ಕೆ ಇಳಿದು ಮೂವರನ್ನು ಕೂಡ ರಕ್ಷಣೆ ಮಾಡಿದ್ದಾರೆ.

ಮುರುಡೇಶ್ವರ ಬೀಚ್‌ ಸೂಪರ್‌ವೈಸರ್‌ ದತ್ತಾತ್ರೆಯ ಶೆಟ್ಟಿ, ಟೂರಿಸ್ಟ್‌ ಮಿತ್ರದ ಸುಧಾಕರ್‌, ಲೈಫ್‌ ಗಾರ್ಡ್‌ ಸಿಬ್ಬಂದಿಗಳಾದ ಕೇಶವ, ಹನುಮಂತ, ವಿಘ್ನೇಶ್ವರ, ರಾಮಚಂದ್ರ, ಜಯರಾಮ ಎಂಬವರೇ ಪ್ರವಾಸಿಗರನ್ನು ರಕ್ಷಿಸಿದವರು.

Protection of three tourists drowning in the Murumurudeshwar beach

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular