ಬುಧವಾರ, ಜೂನ್ 18, 2025
HomekarnatakaBJP statewide protests : ರಾಮನಗರ ರಾಮಾಯಣ : ರಾಜ್ಯ ವ್ಯಾಪಿ ಪ್ರತಿಭಟನೆಗೆ ಕರೆ ಕೊಟ್ಟ...

BJP statewide protests : ರಾಮನಗರ ರಾಮಾಯಣ : ರಾಜ್ಯ ವ್ಯಾಪಿ ಪ್ರತಿಭಟನೆಗೆ ಕರೆ ಕೊಟ್ಟ ಬಿಜೆಪಿ

- Advertisement -

ರಾಮನಗರ : ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಹಾಗೂ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪ್ರತಿಮೆ ಅನಾವರಣದ ಸರ್ಕಾರಿ ಕಾರ್ಯಕ್ರಮ ಅಕ್ಷರಷಃ ಗೂಂಡಾಗಿರಿಗೆ ಸಾಕ್ಷಿಯಾಯಿತು. ಹೆಸರು ಎತ್ತದೇ ಸಚಿವ ಡಾ.ಅಶ್ವತ್ಥನಾರಾಯಣ್ ನಡೆಸಿದ ವಾಗ್ದಾಳಿ ಗೆ ಸಂಸದ ಡಿ.ಕೆ.ಸುರೇಶ್ ಕೆರಳಿ ಕೆಂಡವಾಗಿದ್ದಲ್ಲದೇ ವೇದಿಕೆ ಮೇಲೆಯೇ ಸಚಿವ ಅಶ್ವತ್ಥ ನಾರಾಯಣ್ ಮೇಲೆ ತಿರುಗಿ ಬಿದ್ದರು. ಸಿಎಂ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಎದುರೇ ನಡೆದ ಈ ಹೈಡ್ರಾಮಾ ರಾಜ್ಯ ರಾಜಕೀಯದ ಜಿದ್ದಾಜಿದ್ದಿಗೆ (BJP statewide protests) ಸಾಕ್ಷಿಯಾಗಿದೆ.

ರಾಮ ನಗರದಲ್ಲಿ ಸಿಎಂ ಸಮ್ಮುಖದಲ್ಲೇ ಸಂಸದ ಡಿ.ಕೆ.ಸುರೇಶ್ ನಡೆಸಿದ ವರ್ತನೇ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.‌ಸದಾ ಕಾಲ ಕಾಂಗ್ರೆಸ್ ಸಂಸ್ಕೃತಿ ವಿರುದ್ಧ ಮಾತನಾಡುವ ಬಿಜೆಪಿ ಇಂದು ಕಾಂಗ್ರೆಸ್ ಗೂಂಡಾ ಸಂಸ್ಕೃತಿಗೆ ಸಾಕ್ಷಿ ಒದಗಿಸಿದೆ ಎಂದು ನೇರವಾಗಿ ಆರೋಪಿಸಿದೆ. ಕಾರ್ಯಕ್ರಮದುದ್ದಕ್ಕೂ ಸಿಎಂ ಹಾಗೂ ಸರ್ಕಾರವನ್ನು ಪರೋಕ್ಷವಾಗಿ ಅವಮಾನಿಸಿದ್ದಕ್ಕೇ ನನಗೆ ಬೇಸರವಾಯಿತು. ಆದರೂ ನಾನು ಯಾರ ಹೆಸರನ್ನೂ ಉಲ್ಲೇಖಿಸಿಲ್ಲ ಎಂದು ಅಶ್ವತ್ಥ ನಾರಾಯಣ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡರೇ, ನಮಗೆ ಯಾರ ಪಾಠವೂ ಬೇಡ. ನಮ್ಮ ಜಿಲ್ಲೆಯ ಬಗ್ಗೆ ಮಾತನಾಡಲು ಅಶ್ವತ್ಥ ನಾರಾಯಣ್ ಯಾರು ? ಕೆರಳಿದರು.

ಆದರೆ ಸಿಎಂ ಸಮ್ಮುಖದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ನಡೆದ ಈ ಘಟನೆಗೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು ಘಟನೆ ಖಂಡಿಸಿ ಬಿಜೆಪಿ ಟ್ವೀಟ್ ವಾರ್ ನಡೆಸಿದೆ. ರಾಮನಗರ ಜಿಲ್ಲೆ ಎಂದ್ರೆ ಕನಕಪುರ ರಿಪ್ಲಬಿಕ್ ಎಂದು ಡಿಕೆ ಸಹೋದರರು ಭಾವಿಸಿದಂತಿದೆ ಎಂದು ಬಿಜೆಪಿ ಕುಟುಕಿದ್ದು, ಕಾಂಗ್ರೆಸ್ ಸಂಸ್ಕೃತಿ ಗೂಂಡಾ ಸಂಸ್ಕೃತಿ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ನಾಯಕರಾದ ಎಂಎಲ್ ಸಿ ರವಿಕುಮಾರ್, ರಾಷ್ಟ್ರೀಯಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ.‌ಪ್ರಹ್ಲಾದ್ ಜೋಷಿ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿ ಘಟನೆಯನ್ನು ಖಂಡಿಸಿದ್ದಾರೆ.

ಆದರೆ ಇಷ್ಟಕ್ಕೆ ಬಿಜೆಪಿ ಆಕ್ರೋಶ ತಣ್ಣಗಾಗಿಲ್ಲ. ಹೀಗಾಗಿ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ‌ನಡೆಸುವಂತೆ ಕಾರ್ಯಕರ್ತರಿಗೆ ಬಿಜೆಪಿ ಟ್ವೀಟ್ ಮೂಲಕ ಕರೆ ಕೊಟ್ಟಿದೆ. ಶಿಷ್ಟಾಚಾರ ಉಲ್ಲಂಘಿಸಿ ಸಿಎಂ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಉದ್ಧಟತನ, ದುರ್ವತನೆ ತೋರುವ ಮೂಲಕ ಅವಮಾನ ಎಸಗಿದ್ದಾರೆ. ತಮ್ಮ ಸಂಸ್ಕೃತಿಯನ್ನು ಜನತೆ ಎದುರು ಬಹಿರಂಗಗೊಳಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಇದನ್ನೂ ಓದಿ : ಡಿಕೆಶಿ ಪಾದಯಾತ್ರೆಗೆ ನಾದಬ್ರಹ್ಮನ ಸಾಥ್ : ಹಾಡು ಬರೆದುಕೊಡ್ತಾರಂತೆ ಹಂಸಲೇಖ

ಇದನ್ನೂ ಓದಿ : ಸಿಎಂ ಬೊಮ್ಮಾಯಿ ಎದುರಲ್ಲೇ ಸಚಿವ ಅಶ್ವಥ್‌ ನಾರಾಯಣ್‌, ಸಂಸದ ಡಿ.ಕೆ.ಸುರೇಶ್‌ ಜಟಾಪಟಿ

( DKS Vs Ashwath Narayan, BJP calls for statewide protests)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular