ಬೆಂಗಳೂರು : ಯುಗಾದಿ ಹಬ್ಬದ ವೇಳೆಗೆ ಜೋರಾಗಿದ್ದ ಬಾಯ್ಕಾಟ್ ಹಲಾಲ್ ಕಟ್ ಅಭಿಯಾನ ಇನ್ನಷ್ಟು ತೀವ್ರಗೊಂಡಿದೆ. ಬಾಯ್ಕಾಟ್ ಹಲಾಲ್ ಜೊತೆಗೆ ಹುಟ್ಟಿಕೊಂಡ ಜಟ್ಕಾ ಕಟ್ ಗೆ ಸಿಕ್ಕ ಪಾಸಿಟಿವ್ ರೆಸ್ಪಾನ್ಸ್ ಹಿಂದೂಗಳ ಹೋರಾಟವನ್ನು ಮತ್ತಷ್ಟು ಬಲಗೊಳಿಸಿದ್ದು, ಮತ್ತೊಮ್ಮೆ ಗಟ್ಟಿಯಾಗಿ ಜಟ್ಕಾ ಕಟ್ ಮುಂದುವರೆಸಿ ಹಿಂದೂಗಳೇ ಮಾಂಸ ಉದ್ಯೋಗದಲ್ಲಿ ತೊಡಗಿಸಿಕೊಂಡು ಉದ್ಯೋಗಿಗಳಾಗಿ ಲಾಭ ಪಡೆಯಿರಿ ಎಂದು ಹಿಂದವೀ ಮಾರ್ಟ್ (Hindavi Meat Mart) ಆಫರ್ ನೀಡ್ತಿದೆ.
ರಾಜ್ಯದಲ್ಲಿ ತಿಂಗಳಿನಿಂದ ನಡೆದಿರುವ ಹಲಾಲ್ ಬಾಯ್ಕಾಟ್ ಮಾಡಿ ಜಟ್ಕಾ ಮಾಂಸ ಬಳಸಿ ಅಭಿಯಾನ ಮತ್ತೆ ತೀವ್ರತೆ ಪಡೆದುಕೊಂಡಿದೆ. ಕೇವಲ ಯುಗಾದಿ ಮಾತ್ರವಲ್ಲ ಪಿತೃಪಕ್ಷ, ದಸರಾ, ದೀಪಾವಳಿಗೂ ಜಟ್ಕಾ ಕಟ್ ಮಾಂಸ ಬಳಸಲು ಕ್ಯಾಂಪೇನ್ ಆರಂಭವಾಗಿದೆ. ಮಾತ್ರವಲ್ಲ ಮಾಂಸ ಉದ್ಯಮದಲ್ಲಿ ತೊಡಗಿಕೊಳ್ಳಿ ಎಂದು ಹಿಂದವೀ ಮಾರ್ಟ್ ಹಿಂದೂ ಯುವಕರಿಗೆ ಆಫರ್ ಕೂಡ ನೀಡುತ್ತಿದೆ. ಹಲಾಲ್ ಬಾಯ್ಕಾಟ್ ಅಭಿಯಾನದಿಂದ ಯುಗಾದಿ ವೇಳೆಗೆ ಹಿಂದವೀ ಮಾರ್ಟ್ ನಲ್ಲಿ ಲಕ್ಷಾಂತರ ರೂಪಾಯಿ ವ್ಯಾಪಾರ ನಡೆದಿತ್ತು. ಹೀಗಾಗಿ ಜಟ್ಕಾ ಕಟ್ ಮಾಂಸಕ್ಕೆ ಬೇಡಿಕೆ ಹೆಚ್ಚಿದ ಖುಷಿಯಲ್ಲಿರುವ ಹಿಂದವೀ ಮೀಟ್ ಮಾರ್ಟ್ ಹಲಾಲ್ ಮುಕ್ತ ಜಟ್ಕಾ ಯುಕ್ತ ನಮ್ಮ ಗುರಿ”ಅಭಿಯಾನ ಶುರು ಮಾಡಿದೆ.
ನಿರುದ್ಯೋಗಿ ಯುವಕರಿಗೆ ಕರೆ ನೀಡಿದ ಹಿಂದವೀ ಮೀಟ್ ಮಾರ್ಟ್ ಸಂಸ್ಥಾಪಕ ಮುನೇಗೌಡ, ಮಾಂಸ ಉದ್ಯಮದಲ್ಲಿ ತೊಡಗಿ ಕೊಳ್ಳುವಂತೆ ಮನವಿ ಮಾಡಿದ್ದಾರೆ. ಹಿಂದೂಗಳ ಹಬ್ಬದಲ್ಲಿ ಕೋಟ್ಯಂತರ ರೂಪಾಯಿ ಮಾಂಸ ವ್ಯಾಪಾರ ನಡೆಯಲಿದೆ. ಈ ವ್ಯಾಪಾರವನ್ನು ಅನ್ಯಮತೀಯರಿಗೆ ಕೊಡದೇ ನಾವೇ ಮುಂದಾಳತ್ವ ವಹಿಸೋಣ. ಹೊಸ ಅಂಗಡಿ ಮಾಡಲು ಇಚ್ಚಿಸುವವರು ನಮ್ಮ ಜೊತೆ ಬನ್ನಿ ಎಂದು ಮುನೇಗೌಡ ಮನವಿ ಮಾಡಿದ್ದಾರೆ.
ತರಬೇತಿ ಕೊಟ್ಟು, ಆರ್ಥಿಕ ಸಹಾಯ ಮಾಡುತ್ತೇವೆ. ನಿರುದ್ಯೋಗಿಗಳು ಮುಂದೇ ಬಂದು ಈ ಮಾಂಸ ವ್ಯಾಪಾರದಲ್ಲಿ ತೊಡಗಿಕೊಳ್ಳಿ ಎಂದು ಮುನೇಗೌಡ ಹಿಂದೂ ಯುವಕರಿಗೆ ಆಹ್ವಾನ ನೀಡಿದ್ದಾರೆ. ಮುನೇಗೌಡ ನೀಡಿರೋ ಆಫರ್ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ದೀಪಾವಳಿ ಸೇರಿದಂತೆ ಹಲವು ಹಿಂದೂ ಹಬ್ಬಗಳಿಗೆ ಮಾಂಸಬೇಕು. ಹೀಗಾಗಿ ನಮ್ಮವರೇ ಹೆಚ್ಚು ಗ್ರಾಹಕರಾಗಿರೋ ಉದ್ಯಮವನ್ನು ನಾವೇ ನಡೆಸಿಕೊಂಡು ಹೋಗೋಣ ಎಂಬರ್ಥದಲ್ಲಿ ಮುನೇಗೌಡ ಆಗ್ರಹಿಸಿದ್ದಾರೆ. ಯುಗಾದಿ ಹಬ್ಬದ ವೇಳೆ ಹಲಾಲ್ ಕಟ್ ಸೆಡ್ಡು ಹೊಡೆದು ಆರಂಭವಾಗಿದ್ದ ಜಟ್ಕಾ ಕಟ್ ನ ಹಿಂದವೀ ಮಾರ್ಟ್ ೭ ಕೋಟಿಗೂ ಅಧಿಕ ಲಾಭ ಗಳಿಸಿ ಸದ್ದು ಮಾಡಿತ್ತು.
ಇದನ್ನೂ ಓದಿ : ಎಸಿ ಸ್ಪೋಟ, ಒಂದೇ ಕುಟುಂಬದ ನಾಲ್ವರ ದುರ್ಮರಣ
ಇದನ್ನೂ ಓದಿ : ಬಿಸಿಯೂಟ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಿಸಿ ಸರ್ಕಾರದ ಆದೇಶ
Don’t give meat business to Muslims Hindavi Meat Mart New Offer