ಮಂಗಳವಾರ, ಮೇ 13, 2025
Homehoroscopeನಿತ್ಯಭವಿಷ್ಯ : 06-04-2020

ನಿತ್ಯಭವಿಷ್ಯ : 06-04-2020

- Advertisement -

ಮೇಷರಾಶಿ
ಸಾಂಸಾರಿಕವಾಗಿ ಸಮಸ್ಯೆಗಳು ತಲೆ ಕಾಡಲಿವೆ. ನಿಮ್ಮ ದೃಢ ನಿರ್ಧಾರದಿಂದಲೇ ಕಾರ್ಯ ಸಾಧನೆಯಾಗಲಿದೆ. ನಿಮ್ಮ ನಿಲುವಿಗೆ ನೀವು ಅಂಟಿಕೊಳ್ಳದಿರಿ. ಕುಟುಂಬಿಕ ಹೊಣೆಗಾರಿಕೆ ಕಾಡಲಿದೆ. ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಉದ್ಯೋಗದಲ್ಲಿ ಅಭಿವೃದ್ಧಿ, ಗುರಿ ಸಾಧನೆಗೆ ಪರಿಶ್ರಮ, ನಿರೀಕ್ಷಿತ ಲಾಭ, ಮಾನಸಿಕ ನೆಮ್ಮದಿ.

ವೃಷಭರಾಶಿ
ನಿಮ್ಮ ಪ್ರಯತ್ನಗಳಿಂದ ಉತ್ತಮ ಫಲ, ಆರ್ಥಿಕವಾಗಿ ಉಳಿತಾದ ಹೆಚ್ಚಳಕ್ಕೆ ಗಮನ ನೀಡಿರಿ. ವಿದ್ಯಾರ್ಥಿಗಳು ತಮ್ಮ ಪ್ರಯತ್ನ ಬಲದ ಉತ್ತಮ ಫ‌ಲವನ್ನು ಪಡೆಯಲಿದ್ದಾರೆ. ವೈದ್ಯಕೀಯ ಹಾಗೂ ವಾಣಿಜ್ಯ ಶಿಕ್ಷಣದವರಿಗೆ ಉತ್ತಮವಿದೆ. ಆರ್ಥಿಕ ವ್ಯವಹಾರಗಳಲ್ಲಿ ಲಾಭ, ಸ್ತ್ರೀಯರಿಗೆ ಉತ್ತಮ ಅವಕಾಶ, ಈ ದಿನ ಶುಭ ಫಲ ಯೋಗ.

ಮಿಥುನರಾಶಿ
ಈ ದಿನ ಜಾಗ್ರತೆಯಲ್ಲಿರುವುದು ಉತ್ತಮ, ಪ್ರಭಾವಿ ವ್ಯಕ್ತಿಗಳ ಭೇಟಿ, ವಾದ-ವಿವಾದಗಳಿಂದ ದೂರವಿರಿ, ವ್ಯವಹಾರದಲ್ಲಿ ಕಷ್ಟನಷ್ಟಗಳನ್ನು ಅನುಭವಿಸುವಂತಾದೀತು. ರಾಜಕೀಯ ವ್ಯಕ್ತಿಗಳು ರಾಜಕೀಯ ಕ್ಷೇತ್ರದಿಂದ ಮರೆಯಾಗಲಿದ್ದಾರೆ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸುವುದು. ಮಕ್ಕಳ ಅಗತ್ಯಕ್ಕೆ ಖರ್ಚು.

ಕಟಕರಾಶಿ
ನೂತನ ಮನೆ ನಿರ್ಮಾಣ, ಭೂ ಖರೀದಿಗೆ ಸಕಾಲವಲ್ಲ. ಧಾರ್ಮಿಕ ಕೆಲಸ ಕಾರ್ಯಗಳಿಗೆ ಅಡೆತಡೆಗಳು ಕಂಡು ಬಂದಾವು. ಕಾರ್ಮಿಕ ವರ್ಗದವರಿಗೆ ಗೊಂದಲದ ಪರಿಸ್ಥಿತಿಯು ಕಂಡುಬರಲಿದೆ. ಧಾರ್ಮಿಕ ಸಮಾರಂಭಗಳಿಗೆ ಭೇಟಿ, ದೂರ ಪ್ರಯಾಣ ಸಾಧ್ಯತೆ, ಸ್ತ್ರೀಯರಿಗೆ ತೊಂದರೆ, ವ್ಯವಹಾರಗಳಲ್ಲಿ ಉತ್ತಮ ಪ್ರಗತಿ.

ಸಿಂಹರಾಶಿ
ದೂರ ಸಂಚಾರದಲ್ಲಿ ಕಾರ್ಯಸಿದ್ದಿಯಾಗಲಿದೆ. ಶುಭಮಂಗಲ ಕಾರ್ಯಗಳನ್ನು ಮುಂದಕ್ಕೆ ಹಾಕುವುದು ಉತ್ತಮ. ಪಾಲು ಬಂಡವಾಳಗಳಲ್ಲಿ ಗೊಂದಲಗಳು ಕಂಡು ಬರಲಿದೆ. ಸಂಚಾರದಲ್ಲಿ ಅಪಘಾತ ಭೀತಿ ಇದೆ. ಕುಟುಂಬ ಸಮೇತಕ್ಕೆ ದೈವ ದರ್ಶನ, ಹಣಕಾಸು ಲಾಭ, ವಸ್ತ್ರ ಖರೀದಿ ಯೋಗ, ಸುಖ ಭೋಜನ, ಉದ್ಯೋಗದಲ್ಲಿ ಪ್ರಗತಿ.

ಕನ್ಯಾರಾಶಿ
ಉತ್ತಮ ಆದಾಯ, ಸಾಲ ಮರುಪಾವತಿ, ವ್ಯಾಪಾರಿಗಳಿಗೆ ಅಧಿಕ ಲಾಭ, ಕುಟುಂಬ ಸೌಖ್ಯ, ಸಹವಾಸ ದೋಷದಿಂದ ಕೆಟ್ಟ ಅಭ್ಯಾಸವಾದೀತು. ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭಾಗ್ಯವಿರುವುದು. ಸಾಂಸಾರಿಕವಾಗಿ ಹಲವಾರು ತಾಪತ್ರಯಗಳು ಕಂಡುಬಂದಾವು. ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಸ್ನೇಹಿತರಿಂದ ಸಹಾಯ.

ತುಲಾರಾಶಿ
ಕಠಿಣ ಪರಿಶ್ರಮದಿಂದ ಮುಂದುವರಿಯ ಬೇಕಾದೀತು. ಗೃಹ ನಿರ್ಮಾಣ ಕಾರ್ಯಗಳಿಗೆ ಅಡೆತಡೆಗಳು ಉಂಟಾದೀತು. ಕಾನೂನು ಸಂಬಂಧ ತಕರಾರುಗಳು ನ್ಯಾಯಾಲಯದ ದರ್ಶನ ಮಾಡಲಿದೆ. ತಾಳ್ಮೆಯಿಂದ ಪ್ರಗತಿ, ಕೋರ್ಟ್ ತೀರ್ಪಿಗಾಗಿ ಕಾಯುತ್ತಿರುವಿರಿ, ಉದರ ಬಾಧೆ, ಆತ್ಮೀಯರಲ್ಲಿ ಮನಃಸ್ತಾಪ, ಆರೋಗ್ಯದಲ್ಲಿ ವ್ಯತ್ಯಾಸ.

ವೃಶ್ಚಿಕರಾಶಿ
ಪಾಲುದಾರಿಕೆ ವ್ಯವಹಾರ ಸದ್ಯಕ್ಕೆ ಬೇಡ, ಮಾತಿನ ಮೇಲೆ ಹಿಡಿತವಿರಲಿ, ಧಾರ್ಮಿಕ ಕೆಲಸ ಕಾರ್ಯಗಳಿಂದ ಮನಸ್ಸಿಗೆ ಶಾಂತಿ ಸಮಾಧಾನ ಸಿಗಲಿದೆ. ಕೆಲಸಕಾರ್ಯಗಳನ್ನು ಅತ್ಯಂತ ಜಾಗ್ರತೆಯಿಂದ ನಡೆಸಿಕೊಂಡು ಹೋಗುವುದು ಅಗತ್ಯವಿದೆ. ಭಾವೋದ್ರೇಕಕ್ಕೆ ಒಳಗಾಗದಿರುವುದು. ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ದಾಯಾದಿಗಳ ಕಲಹ, ಆತ್ಮೀಯರಲ್ಲಿ ವೈಮನಸ್ಸು.

ಧನಸ್ಸುರಾಶಿ
ನಿಮ್ಮ ಉದಾರ ಮನೋಭಾವದಿಂದಾಗಿ ಸಮಸ್ಯೆಗಳನ್ನು ತಂದುಕೊಳ್ಳುವಿರಿ. ವಿದ್ಯಾರ್ಥಿಗಳು ತಮ್ಮ ಅಭ್ಯಾಸವನ್ನು ಪ್ರಯತ್ನ ಬಲದಿಂದಲೇ ಮುಂದುವರಿಸಿಕೊಂಡು ಹೋಗುವುದು ಅತೀ ಅಗತ್ಯವಿರುತ್ತದೆ. ಉತ್ತಮ ಬುದ್ಧಿಶಕ್ತಿ, ಆತ್ಮ ವಿಶ್ವಾಸ ಹೆಚ್ಚಾಗುವುದು, ಮಾನಸಿಕ ನೆಮ್ಮದಿ, ವೈವಾಹಿಕ ಜೀವನದಲ್ಲಿ ನೆಮ್ಮದಿ.

ಮಕರರಾಶಿ
ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಮಹಿಳೆಯರಿಗೆ ಅಶುಭ, ಮನಃಕ್ಲೇಷ, ಮಹಿಳೆಯರಿಗೆ ಕೆಲ ಮಟ್ಟಿನ ತೊಂದರೆಗಳು ಕಂಡುಬಂದಾವು. ಕೃಷಿಯೇತರ ಬೇಸಾಯದಲ್ಲಿ ವಿಳಂಬ ಕಂಡು ಬರುತ್ತದೆ. ನ್ಯಾಯಾಲದ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯು ಕಂಡು ಬರಲಿದೆ. ವಿವಾಹಕ್ಕೆ ಅಡೆತಡೆ, ಮಾನಸಿಕ ತೊಂದರೆ.

ಕುಂಭರಾಶಿ
ಮನೆಗೆ ಹಿರಿಯರ ಆಗಮನ, ಋಣ ಬಾಧೆ, ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿರಿ. ಪತ್ರಿಕಾರಂಗದಲ್ಲಿ ತಾಳ್ಮೆ ಸಮಾಧಾನದಿಂದ ಮುಂದುವರಿಯುವುದು ಅಗತ್ಯವಿದೆ. ವ್ಯಾಪಾರವನ್ನು ಬಹುಕಷ್ಟದಿಂದ, ಎಚ್ಚರದಿಂದ ಮುನ್ನಡೆಸುವುದು. ಸುಖ ಭೋಜನ, ಗೆಳೆಯರ ಭೇಟಿ, ಅನಗತ್ಯ ಸುತ್ತಾಟ.

ಮೀನರಾಶಿ
ಭೂ ವ್ಯವಹಾರಗಳಿಂದ ಲಾಭ, ಸಾಂಸಾರಿಕೆ ಸುಖವು ಹಂತಹಂತವಾಗಿ ಗೋಚರಕ್ಕೆ ಬಂದರೂ ಮನಸ್ಸಿಗೆ ಸಮಾಧಾನ ಸಿಗಲಾರದು. ಆದರೂ ಗುರುವಿನ ಕೃಪೆಯಿಂದ ಎಲ್ಲವನ್ನೂ ಎದುರಿಸಿಕೊಂಡು ಮುನ್ನಡೆವ ಅಗತ್ಯವಿದೆ. ದಾಂಪತ್ಯದಲ್ಲಿ ಪ್ರೀತಿ, ಮಾನಸಿಕ ನೆಮ್ಮದಿ, ಕುಲದೇವರ ಅನುಗ್ರಹದಿಂದ ಕಾರ್ಯಸಿದ್ಧಿ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular